Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಬಳ್ಳಿ…
Share:
Poems October 21, 2024 ಜ್ಯೋತಿಲಿಂಗಪ್ಪ

ಈ ಬಳ್ಳಿ…

ಗಾಳಿ
ಉರಿಸುವುದು ಆರಿಸುವುದು
ದೀಪ
ಬೆಳಗಿಸುವುದು ಯಾರು…?

ನಾನೂ
ಒಂದು ದೀಪ ದ್ವೀಪದ ದಡ
ಕಾಯುತ್ತಾ ಕಾಯುತ್ತಾ
ಅಲೆ
ಎಣಿಸುತಿರುವೆ ಈ
ಸಂಖ್ಯೆ ಮೂರನ್ನು ದಾಟದೇ…

ಈ
ಹಿತ್ತಲ ಗಿಡ
ಹಾಡುತಿರುವ ಹಾಡು ಕೇಳಿ

ಆಸೆ
ಪಡುವುದು ಬಿಟ್ಟೆ
ನೇ…

ಈ
ಬಳ್ಳಿಯೇ ಹಾಗೆ
ಮರ
ತಬ್ಬುವುದು ಇಲ್ಲಾ
ನೆಲಕೆ ಹಬ್ಬುವುದು.

*** *** ***

ನದಿ ಒಣಗಿದೆ ನೀರು ಶುದ್ಧ
ಕಣ್ಣು ಒಣಗಿದೆ ನೋಟ ಶುದ್ಧ
ಕಿವಿ ಒಣಗಿದೆ ಶಬ್ದ ಶುದ್ಧ
ನಾಲಿಗೆ ಒಣಗಿದೆ ರುಚಿ ಶುದ್ಧ
ನಾಸಿಕ ಒಣಗಿದೆ ವಾಸನೆ ಶುದ್ಧ
ತೊಕ್ಕು ಒಣಗಿದೆ ಸ್ಪರ್ಶ ಶುದ್ಧ

ಆಸೆ ಒಣಗಿದೆ ಧ್ಯಾನ ಶುದ್ಧ.

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?

Related Posts

ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Comments 2

  1. ಬಸವರಾಜ್ ತೋರಣಕಲ್
    Oct 24, 2024 Reply

    ಅಮೂರ್ತವಾಗಿ ಸೂಚ್ಯವಾಗಿರುವ ಜ್ಯೋತಿಲಿಂಗಪ್ಪ ಅವರ ಕವನಗಳ ಓದು ಗಾಢ ಅನುಭೂತಿಯನ್ನು ನೀಡುತ್ತವೆ.

  2. Susheela Sagar
    Nov 1, 2024 Reply

    ಈ ಬಳ್ಳಿಯ ಮರ ಯಾವುದು? ಅದು ಹಬ್ಬಿ ಹರಡೋದು ಭುವಿಯ ಮಣ್ಣಲ್ಲೇ, ಅತುಕೊಳ್ಳೋದು ಮರದ ಕಾಂಡಕ್ಕೇ!! ತಾತ್ವಿಕ ನೆಲೆಗಟ್ಟಿನ ವಿಚಾರಗಳು ಕವನದಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
December 9, 2025
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಹಾಯ್ಕು
ಹಾಯ್ಕು
September 6, 2023
ಗುರುಪಥ
ಗುರುಪಥ
January 4, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
Copyright © 2026 Bayalu