Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಬಳ್ಳಿ…
Share:
Poems October 21, 2024 ಜ್ಯೋತಿಲಿಂಗಪ್ಪ

ಈ ಬಳ್ಳಿ…

ಗಾಳಿ
ಉರಿಸುವುದು ಆರಿಸುವುದು
ದೀಪ
ಬೆಳಗಿಸುವುದು ಯಾರು…?

ನಾನೂ
ಒಂದು ದೀಪ ದ್ವೀಪದ ದಡ
ಕಾಯುತ್ತಾ ಕಾಯುತ್ತಾ
ಅಲೆ
ಎಣಿಸುತಿರುವೆ ಈ
ಸಂಖ್ಯೆ ಮೂರನ್ನು ದಾಟದೇ…

ಈ
ಹಿತ್ತಲ ಗಿಡ
ಹಾಡುತಿರುವ ಹಾಡು ಕೇಳಿ

ಆಸೆ
ಪಡುವುದು ಬಿಟ್ಟೆ
ನೇ…

ಈ
ಬಳ್ಳಿಯೇ ಹಾಗೆ
ಮರ
ತಬ್ಬುವುದು ಇಲ್ಲಾ
ನೆಲಕೆ ಹಬ್ಬುವುದು.

*** *** ***

ನದಿ ಒಣಗಿದೆ ನೀರು ಶುದ್ಧ
ಕಣ್ಣು ಒಣಗಿದೆ ನೋಟ ಶುದ್ಧ
ಕಿವಿ ಒಣಗಿದೆ ಶಬ್ದ ಶುದ್ಧ
ನಾಲಿಗೆ ಒಣಗಿದೆ ರುಚಿ ಶುದ್ಧ
ನಾಸಿಕ ಒಣಗಿದೆ ವಾಸನೆ ಶುದ್ಧ
ತೊಕ್ಕು ಒಣಗಿದೆ ಸ್ಪರ್ಶ ಶುದ್ಧ

ಆಸೆ ಒಣಗಿದೆ ಧ್ಯಾನ ಶುದ್ಧ.

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?

Related Posts

ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 2

  1. ಬಸವರಾಜ್ ತೋರಣಕಲ್
    Oct 24, 2024 Reply

    ಅಮೂರ್ತವಾಗಿ ಸೂಚ್ಯವಾಗಿರುವ ಜ್ಯೋತಿಲಿಂಗಪ್ಪ ಅವರ ಕವನಗಳ ಓದು ಗಾಢ ಅನುಭೂತಿಯನ್ನು ನೀಡುತ್ತವೆ.

  2. Susheela Sagar
    Nov 1, 2024 Reply

    ಈ ಬಳ್ಳಿಯ ಮರ ಯಾವುದು? ಅದು ಹಬ್ಬಿ ಹರಡೋದು ಭುವಿಯ ಮಣ್ಣಲ್ಲೇ, ಅತುಕೊಳ್ಳೋದು ಮರದ ಕಾಂಡಕ್ಕೇ!! ತಾತ್ವಿಕ ನೆಲೆಗಟ್ಟಿನ ವಿಚಾರಗಳು ಕವನದಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.

Leave a Reply to ಬಸವರಾಜ್ ತೋರಣಕಲ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
Copyright © 2025 Bayalu