Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಬಳ್ಳಿ…
Share:
Poems October 21, 2024 ಜ್ಯೋತಿಲಿಂಗಪ್ಪ

ಈ ಬಳ್ಳಿ…

ಗಾಳಿ
ಉರಿಸುವುದು ಆರಿಸುವುದು
ದೀಪ
ಬೆಳಗಿಸುವುದು ಯಾರು…?

ನಾನೂ
ಒಂದು ದೀಪ ದ್ವೀಪದ ದಡ
ಕಾಯುತ್ತಾ ಕಾಯುತ್ತಾ
ಅಲೆ
ಎಣಿಸುತಿರುವೆ ಈ
ಸಂಖ್ಯೆ ಮೂರನ್ನು ದಾಟದೇ…

ಈ
ಹಿತ್ತಲ ಗಿಡ
ಹಾಡುತಿರುವ ಹಾಡು ಕೇಳಿ

ಆಸೆ
ಪಡುವುದು ಬಿಟ್ಟೆ
ನೇ…

ಈ
ಬಳ್ಳಿಯೇ ಹಾಗೆ
ಮರ
ತಬ್ಬುವುದು ಇಲ್ಲಾ
ನೆಲಕೆ ಹಬ್ಬುವುದು.

*** *** ***

ನದಿ ಒಣಗಿದೆ ನೀರು ಶುದ್ಧ
ಕಣ್ಣು ಒಣಗಿದೆ ನೋಟ ಶುದ್ಧ
ಕಿವಿ ಒಣಗಿದೆ ಶಬ್ದ ಶುದ್ಧ
ನಾಲಿಗೆ ಒಣಗಿದೆ ರುಚಿ ಶುದ್ಧ
ನಾಸಿಕ ಒಣಗಿದೆ ವಾಸನೆ ಶುದ್ಧ
ತೊಕ್ಕು ಒಣಗಿದೆ ಸ್ಪರ್ಶ ಶುದ್ಧ

ಆಸೆ ಒಣಗಿದೆ ಧ್ಯಾನ ಶುದ್ಧ.

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Comments 2

  1. ಬಸವರಾಜ್ ತೋರಣಕಲ್
    Oct 24, 2024 Reply

    ಅಮೂರ್ತವಾಗಿ ಸೂಚ್ಯವಾಗಿರುವ ಜ್ಯೋತಿಲಿಂಗಪ್ಪ ಅವರ ಕವನಗಳ ಓದು ಗಾಢ ಅನುಭೂತಿಯನ್ನು ನೀಡುತ್ತವೆ.

  2. Susheela Sagar
    Nov 1, 2024 Reply

    ಈ ಬಳ್ಳಿಯ ಮರ ಯಾವುದು? ಅದು ಹಬ್ಬಿ ಹರಡೋದು ಭುವಿಯ ಮಣ್ಣಲ್ಲೇ, ಅತುಕೊಳ್ಳೋದು ಮರದ ಕಾಂಡಕ್ಕೇ!! ತಾತ್ವಿಕ ನೆಲೆಗಟ್ಟಿನ ವಿಚಾರಗಳು ಕವನದಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.

Leave a Reply to Susheela Sagar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ನಾನು  ಬಿಂಬ
ನಾನು ಬಿಂಬ
September 13, 2025
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
Copyright © 2025 Bayalu