Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುಪಥ
Share:
Poems January 4, 2020 ಕೆ.ಆರ್ ಮಂಗಳಾ

ಗುರುಪಥ

ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು
ಕಂಡಕಂಡವರನ್ನೆಲ್ಲ ಕೇಳಿ
ಓದುಬಲ್ಲವರನ್ನೆಲ್ಲ ಹುಡುಕಿ
ಸುಸ್ತಾದದ್ದೆ ಬಂತು,
ದಾರಿ ಸಿಗಲಿಲ್ಲ

ಹೇಳುವದನ್ನೆಲ್ಲ ಹಿಡಿದು
ಓದಿದುದನ್ನೆಲ್ಲ ನಂಬಿ
ಕೇಳಿ ಅರಿತದ್ದೆ ನಿಜವೆಂದು
ಇಲ್ಲೇನೋ ಇದೆ, ಅಲ್ಲೇನೋ ಇದೆ
ಎಂದು ಅಡಿಗಡಿಗೆ ಕನವರಿಸಿದ್ದೆ ಬಂತು,
ದಾರಿ ಸಿಗಲಿಲ್ಲ.

ಬೆಳಕಿನ ಭ್ರಮೆ ಹೊತ್ತು
ಯೋಗದ ಹಠ ಹಿಡಿದು
ಹಗಲು ರಾತ್ರಿಗಳ ಪರವೆಯಿಲ್ಲದೆ
ಎಚ್ಚರಾದಾಗೆಲ್ಲ ಎದ್ದು ಕುಳಿತು
ಕಣ್ಮುಚ್ಚಿ ಕಣ್ತೆರೆದು ಹುಡುಕಿದ್ದೆ ಬಂತು,
ದಾರಿ ಸಿಗಲಿಲ್ಲ.

ವಚನ ವ್ಯಾಖ್ಯಾನಗಳಲಿ
ಭಾವಾರ್ಥಗಳ ಬೆಂಬತ್ತಿ
ಹುಡುಕಿದ್ದೆ ತಡಕಿದ್ದೆ ದಣಿದಿದ್ದೆ
ಮಾತು ಮಾತು ಮಥಿಸಿ
ವಾದ ವಿವಾದಗಳ ದೂಳೆದ್ದಿತೇ ವಿನಃ,
ದಾರಿ ಸಿಗಲಿಲ್ಲ.

ನೀನೇನೇ ಬಯಸಿದೊಡೆ ಅದ ಸಾಧಿಸಲು
ಬ್ರಹ್ಮಾಂಡವೇ ನಿನಗೆ ನೆರವಾಗಲು ಸಂಚುಹೂಡುವುದೆಂಬ
ಪಾಲೊ ಕೊಯಿಲೊ ಮಾತು
ನಿಜವಾಗೋ ಕಾಲ ಈಗ ಬಂದಿತ್ತು
ಗೊತ್ತಿರದ ಮೂಲೆಯ ಮಂದಬೆಳಕಿನಲಿ
ಗುರುಪಥ ಕಂಡಿತ್ತು, ಎದೆ ಹಗುರವಾಗಿತ್ತು
ಮಹದಾರಿ ಸಿಕ್ಕಿತ್ತು.

Previous post ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
Next post ತನ್ನ ಪರಿ ಬೇರೆ…
ತನ್ನ ಪರಿ ಬೇರೆ…

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ಹೀಗೊಂದು ಸಂವಾದ…
Share:
Poems

ಹೀಗೊಂದು ಸಂವಾದ…

April 6, 2023 ಕೆ.ಆರ್ ಮಂಗಳಾ
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು ಬಯಕೆಯ ಸೆಲೆಗೆ ಮರುಳಾಗಿಹುದು ಕಾಣುವೆನೆಂತು ಜೀವದ ಸೊಬಗ ಅರಿಯುವುದೆಂತು ಪ್ರಾಣದ ಹೊಲಬ ಗೊತ್ತಿಲ್ಲದ ನಡಿಗೆ ಕತ್ತಲ ದಾರಿ...

Comments 2

  1. Jyothilingappa
    Jan 6, 2020 Reply

    ಕಂಡ
    ಗುರು ಪಥ
    ದಲಿ ದಾರಿ ಸಿಕ್ಕಿತೇ ಹೇಳಿ
    ನಿಜ
    ದಾರಿ ಆವುದು ‘ಬಯಲು’ವಿಗೆ.

  2. Madhukar Bannuru
    Jan 16, 2020 Reply

    ಅಕ್ಕಾ, ನಿಮಗೆ ಸಿಕ್ಕ ಗುರುಪಥ ಯಾವುದು? ನಮಗೂ ತೋರಿಸಿ.

Leave a Reply to Madhukar Bannuru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ನೋಟದ ಕೂಟ…
ನೋಟದ ಕೂಟ…
May 10, 2023
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
Copyright © 2025 Bayalu