Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮರೆತೆ…
Share:
Poems July 4, 2022 ಜ್ಯೋತಿಲಿಂಗಪ್ಪ

ಮರೆತೆ…

ಮಗುವಾಗಬೇಕು ನಿಜ
ಮರಳದು ಚೈತನ್ಯ ಮರೆತೆ

ಹೂಳಲಾಗದು ನೆಳಲು ನಿಜ
ನೆಳಲು ಹಿಂಬಾಲಿಸುವುದು ಮರೆತೆ

ನೆರಳು ಯಾವಾಗಲೂ ಇರದು ನಿಜ
ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ

ಸಮಯ ಕಳೆಯುವುದು ನಿಜ
ಕಳೆದ ಸಮಯ ಕಳೆದುದು ಮರೆತೆ

ಸಮಯಕೆ ಸಾವಿಲ್ಲ ನಿಜ
ಸಾಯುವ ಸಮಯ ಬರುವುದು ಮರೆತೆ

ಸುಖವೇನೂ ಸುಮ್ಮನೆ ಬರುವುದಿಲ್ಲ ನಿಜ
ದುಃಖವೂ ಜೊತೆಗೆ ಇರುವುದು ಮರೆತೆ

ಖಾಲೀ ಮಡಿಕೆ ಶಬ್ದ ಮಾಡುವುದು ನಿಜ
ಖಾಲಿಯಲಿ ಬಯಲು ತುಂಬುವುದು ಮರೆತೆ

ಏಕಾಂತ ಒಂಟಿತನವಲ್ಲ ನಿಜ
ಒಂಟಿತನವ ಏಕಾಂತವಾಗಿಸುವುದು ಮರೆತೆ

ಸತ್ಯದ ಮುಖವ ಕಾಣಿಸದು ಕತ್ತಲು ನಿಜ
ಕತ್ತಲೊಳಗೂ ಸತ್ಯ ಇರುವುದು ಮರೆತೆ

ಧ್ಯಾನವೇ ಸಾಧನೆಯಲ್ಲ ನಿಜ
ಸಾಧಿಸಿದುದೆಲ್ಲವೂ ಧ್ಯಾನ ಮರೆತೆ

ಬಯಲು ಓದಲು ಬಯಲಿಗಿಳಿದೆ ನಿಜ
ಬಯಲು ಬೆತ್ತಲಾಗಿಸಿ ಬಟ್ಟೆ ತೊಟ್ಟುದ ಮರೆತೆ.

ಬೇರಿಲ್ಲದೆ ಎಲೆಗಳಿರವು ನಿಜ
ಎಲೆಗಳಿರದೆ ಬೇರೂ ನಿಲ್ಲದು ಮರೆತೆ.

ಬೇರು ನೆಲದೊಳಗಿಳೀಯುವಾಗ ಎಲೆಗಳು ನಗುವವು ನಿಜ
ಎಲೆಗಳು ಒಣಗಿ ನೆಲಕುದುರುವಾಗ ಬೇರು ನಗುವುದು ಮರೆತೆ.

Previous post ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
Next post ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…

Related Posts

ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...
ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...

Comments 2

  1. Praveen Kammar
    Jul 5, 2022 Reply

    ಮರೆತದ್ದೇನು, ಅರಿತದ್ದೇನು? ದ್ವಂದ್ವಗಳಲ್ಲಿ ಸಿಕ್ಕಿದ್ದೇನು? ಸುಂದರ ಕವನ.

  2. Channabasappa B
    Jul 7, 2022 Reply

    ಮರೆಯಬೇಕಾದವುಗಳನ್ನು ಮರೆತಾಗಲೇ ಅರಿವು ಕಣ್ಣುತೆರೆಯುವುದು, ಬಯಲು ಸಾಕ್ಷಾತ್ಕಾರವಾಗುವುದು!!!

Leave a Reply to Channabasappa B Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಶರಣನಾಗುವುದು…
ಶರಣನಾಗುವುದು…
February 10, 2023
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
Copyright © 2025 Bayalu