Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಿನ ಹುಳು
Share:
Poems December 9, 2025 ಜ್ಯೋತಿಲಿಂಗಪ್ಪ

ಬೆಳಕಿನ ಹುಳು

ನನ್ನೀ
ಮದವ ಸುಡಲು
ಬರುವ ಬೆಳಕಿನ ಹುಳು
ಹಗಲು ದೃಷ್ಟಿ ಮರೆ
ಇರುಳು ಕಣ್ಣ ಮರೆ

ಕತ್ತಲಲಿ ಮಿನುಗುವುದು

ಏ ಕಣ್ಣೇ
ದೃಷ್ಟಿಯ ಮರೆ ಮಾಡದಿರು

ಇದು
ಬರಿಯೆ ಹುಳು ಅಲ್ಲಾ
ಬೆಳಕಿನ ಹುಳು
ಕಲ್ಯಾಣಕೂ ಹೆಗ್ಗಳಿಕೆ ಇಲ್ಲದೆ
ಕತ್ತಲು ಆರಿಸಿದ ಬೆಳಕಿನ ಹುಳು
ಮಂಟೇದ ಅಲ್ಲಮಪ್ರಭು
ಸ್ವಾಮಿಯ ಕುರುಹುವಿನಲಿ
ಮನದ ಮರೆಯ ಮರಹುವ
ಮಬ್ಬಾಗಿಸಿದ ಘನ ಬೆಳಕು ಈ
ಹುಳು
ಕಲ್ಯಾಣದ ಮಹಾ ಬೆಳಗು

ಈ
ಹುಳುವಿಗಾವ ಭೇದವೋ
ನೆಲ ಒಂದೇ ಜಲ ಒಂದೇ
ದೀಪ ಹೊತ್ತ ದೀಪ ಸ್ತಂಭದ ಮೇಲೆ
ಉರಿಯುವ ಈ ದೀಪಕೆ
ಸ್ತಂಭದ ಹಂಗೇ…

ಹಂಗು ಒಂದೇ ಲೋಕ ಕಲ್ಯಾಣ.

Previous post ಗ್ರಹಣ
ಗ್ರಹಣ
Next post ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ

Related Posts

ನನ್ನನ್ನು ಕ್ಷಮಿಸು
Share:
Poems

ನನ್ನನ್ನು ಕ್ಷಮಿಸು

April 5, 2026 ಜ್ಯೋತಿಲಿಂಗಪ್ಪ
ಆಸೆಗಳಿರಲು ಆತಂಕ ನಿಲ್ಲದು ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ ಹುಟ್ಟಿದರೆ ಸಾವು ಹುಟ್ಟದಿರೆ ಸಾವಿಲ್ಲ ಸಾವಿಗೇನು ಕೇಡೇ… ಸಂತೆಯ ಸದ್ದಿನಲಿ ಸಂತನಾಗುವೆಯಾದರೆ...
ಬೆಳಕ ಬೆಂಬತ್ತಿ…
Share:
Poems

ಬೆಳಕ ಬೆಂಬತ್ತಿ…

November 9, 2021 ಕೆ.ಆರ್ ಮಂಗಳಾ
ಸಾಲು ಸಾಲು ಹಣತೆಗಳ ಹಚ್ಚಿ ನೋಡುತ್ತಲೇ ಇದೆ ಆಸೆಯಿಂದ ಈ ಮನ ಬೆಳಕ ಗೋರಲು… ಒಳಗ ಬೆಳಗಲು… ಕತ್ತಲೆಯ ಭಯವೋ, ಬೆಳಕಿನ ಮೋಹವೋ.. ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ ಅನಾದಿ ಕಾಲದ...

Comments 1

  1. ವಿಜಯಾ ಸರಟೂರು
    Dec 15, 2025 Reply

    ಕಲ್ಯಾಣದ ಶರಣರು ಕಡುಗತ್ತಲಿನಲ್ಲಿ ಬೆಳಕಿನ ಹುಳು, ಹಗಲಿನಲ್ಲಿ ಸೂರ್ಯ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಕೇಳಿಸಿತೇ?
ಕೇಳಿಸಿತೇ?
April 6, 2024
ಲಿಂಗಾಚಾರ
ಲಿಂಗಾಚಾರ
May 6, 2021
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಶಿವಯೋಗ
ಶಿವಯೋಗ
July 4, 2021
Copyright © 2026 Bayalu