Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭವ ರಾಟಾಳ
Share:
Poems September 10, 2022 ಕೆ.ಆರ್ ಮಂಗಳಾ

ಭವ ರಾಟಾಳ

ಇಗೋ ಹರಾಜಾಗುತ್ತಿದೆ ಈ ದೇಹ
ಪ್ರತಿ ದಿನ, ಪ್ರತಿ ಗಳಿಗೆ
ಕಾಣದ ಖದೀಮನ ಕೈಗೆ ಸಿಕ್ಕು

ತನ್ನದಲ್ಲದ ಕಾಯವನು
ಹರಾಜು ಹಾಕುತ್ತಲೇ ಇರುತ್ತಾನೆ
ಕ್ಷಣಾರ್ಧದ ಬಿಡುವೂ ಕೊಡದೆ

ಕೊಳ್ಳುವವರಿಗಿಲ್ಲಿ ಬರವಿಲ್ಲ
ಬಿಡ್ ಮಾಡುತ್ತಲೇ ಇರುತ್ತವೆ
ಲಕ್ಷೋಪಲಕ್ಷ ಭಾವಗಳು
ಕೊನೆಯಿಲ್ಲದ ಬೇಡಿಕೆಗಳು
ತಬ್ಬಿಕೊಂಡು ಅಮರಿಕೊಳುವ
ನಂಬುಗೆಗಳು, ಚಿತ್ರವಿಚಿತ್ರ ಸೆಳೆತಗಳು
ಅನಂತ ಮುಖವಾಡಗಳ ಹೊತ್ತ
ಅಹಮಿನ ಅವತಾರಗಳು
ನಾ ಮುಂದು ತಾ ಮುಂದು ಎನ್ನುವ
ನಿರಂತರ ಪೈಪೋಟಿ…

ಒಡಲ ಸೇರುತ್ತಲೇ ಜೀವ ಪಡೆವ
ಈ ವಿದೇಹಗಳಿಗೆಲ್ಲಾ
ಯಾವ ಕರಾರುಗಳಿಲ್ಲದೆ
ಜೀತ ಮಾಡುತ್ತಿರುವ
ಕಾಯವು ಅಮಾಯಕವೋ?
ಮೋಸವನರಿಯದ ಮೊದ್ದೋ?
ತೀರದಾಸೆಯ ದಾಹಿಯೋ…

ವಿಷಯಂಗಳ ಕೈ ಬದಲಾದ
ಗಳಿಗೆ-ಗಳಿಗೆಗೂ ಇದಕೆ
ಹುಟ್ಟು-ಸಾವಿನ ಚಕ್ರ
ಮತ್ತದೇ ಭವದ ರಾಟಾಳ
ತಾನಾರೆನ್ನುವ ಪ್ರಜ್ಞೆ
ಮಾಸಿ ಈ ಅಂಗಕ್ಕೆ
ಯುಗಯುಗಗಳೇ ಕಳೆದಿವೆ…

ಗುರು ಅರಿವು ಸಿಕ್ಕಾಗಲೇ
ಹರಾಜಿನ ಸದ್ದು ಅಡಗೀತು
ಸುಖ-ದುಃಖಗಳ ಬವಣೆ ತಪ್ಪೀತು
ಜನನ-ಮರಣಗಳ ಆಟ ನಿಂದೀತು
ಕಾಯಕ್ಕೆ ಬಿಡುಗಡೆ ದಕ್ಕೀತು.

Previous post ಲಿಂಗದ ಹಂಗೇ…
ಲಿಂಗದ ಹಂಗೇ…
Next post ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...

Comments 3

  1. Ramesh. M.Y
    Sep 18, 2022 Reply

    ರಾಟಾಳ ಎಂದರೆ ಚಕ್ರ ಅಥವಾ ಚರಕ ಎಂದು ಗೊತ್ತಾಯಿತು. ಕವನ ಚೆನ್ನಾಗಿದೆ.

  2. Gangadhar Mudaliar
    Sep 18, 2022 Reply

    ಭವದ ರಾಟಾಳ ಓದಿದೆ, ‘ಹರಾಜಿನ ಸದ್ದನ್ನು’ ನೀವೇ ಅಡಗಿಸಬೇಕು.

  3. ಪೆರೂರು ಜಾರು, ಉಡುಪಿ
    Sep 18, 2022 Reply

    ಹರಾಜಾದ ಗುರುಗಳು ಭವದ ರಾಟೆಯ ಭಾಗ
    ಹರಾಜು ತಡೆಯಲು ಇನ್ನೆಲ್ಲಿದೆ ಜಾಗ
    ತನ್ನರಿವು ತನ ತಲೆಗೆ ತನ್ನ ಕಯ್ಯೊಂದೆ ಈಗ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
Copyright © 2026 Bayalu