Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭವ ರಾಟಾಳ
Share:
Poems September 10, 2022 ಕೆ.ಆರ್ ಮಂಗಳಾ

ಭವ ರಾಟಾಳ

ಇಗೋ ಹರಾಜಾಗುತ್ತಿದೆ ಈ ದೇಹ
ಪ್ರತಿ ದಿನ, ಪ್ರತಿ ಗಳಿಗೆ
ಕಾಣದ ಖದೀಮನ ಕೈಗೆ ಸಿಕ್ಕು

ತನ್ನದಲ್ಲದ ಕಾಯವನು
ಹರಾಜು ಹಾಕುತ್ತಲೇ ಇರುತ್ತಾನೆ
ಕ್ಷಣಾರ್ಧದ ಬಿಡುವೂ ಕೊಡದೆ

ಕೊಳ್ಳುವವರಿಗಿಲ್ಲಿ ಬರವಿಲ್ಲ
ಬಿಡ್ ಮಾಡುತ್ತಲೇ ಇರುತ್ತವೆ
ಲಕ್ಷೋಪಲಕ್ಷ ಭಾವಗಳು
ಕೊನೆಯಿಲ್ಲದ ಬೇಡಿಕೆಗಳು
ತಬ್ಬಿಕೊಂಡು ಅಮರಿಕೊಳುವ
ನಂಬುಗೆಗಳು, ಚಿತ್ರವಿಚಿತ್ರ ಸೆಳೆತಗಳು
ಅನಂತ ಮುಖವಾಡಗಳ ಹೊತ್ತ
ಅಹಮಿನ ಅವತಾರಗಳು
ನಾ ಮುಂದು ತಾ ಮುಂದು ಎನ್ನುವ
ನಿರಂತರ ಪೈಪೋಟಿ…

ಒಡಲ ಸೇರುತ್ತಲೇ ಜೀವ ಪಡೆವ
ಈ ವಿದೇಹಗಳಿಗೆಲ್ಲಾ
ಯಾವ ಕರಾರುಗಳಿಲ್ಲದೆ
ಜೀತ ಮಾಡುತ್ತಿರುವ
ಕಾಯವು ಅಮಾಯಕವೋ?
ಮೋಸವನರಿಯದ ಮೊದ್ದೋ?
ತೀರದಾಸೆಯ ದಾಹಿಯೋ…

ವಿಷಯಂಗಳ ಕೈ ಬದಲಾದ
ಗಳಿಗೆ-ಗಳಿಗೆಗೂ ಇದಕೆ
ಹುಟ್ಟು-ಸಾವಿನ ಚಕ್ರ
ಮತ್ತದೇ ಭವದ ರಾಟಾಳ
ತಾನಾರೆನ್ನುವ ಪ್ರಜ್ಞೆ
ಮಾಸಿ ಈ ಅಂಗಕ್ಕೆ
ಯುಗಯುಗಗಳೇ ಕಳೆದಿವೆ…

ಗುರು ಅರಿವು ಸಿಕ್ಕಾಗಲೇ
ಹರಾಜಿನ ಸದ್ದು ಅಡಗೀತು
ಸುಖ-ದುಃಖಗಳ ಬವಣೆ ತಪ್ಪೀತು
ಜನನ-ಮರಣಗಳ ಆಟ ನಿಂದೀತು
ಕಾಯಕ್ಕೆ ಬಿಡುಗಡೆ ದಕ್ಕೀತು.

Previous post ಲಿಂಗದ ಹಂಗೇ…
ಲಿಂಗದ ಹಂಗೇ…
Next post ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ

Related Posts

ಕುರುಹೇ ಬಯಲು
Share:
Poems

ಕುರುಹೇ ಬಯಲು

February 16, 2026 ಜ್ಯೋತಿಲಿಂಗಪ್ಪ
ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ...
ಕಾಲ ಎಲ್ಲಿದೆ?
Share:
Poems

ಕಾಲ ಎಲ್ಲಿದೆ?

January 7, 2022 ಕೆ.ಆರ್ ಮಂಗಳಾ
ಎಲ್ಲವನೂ… ಎಲ್ಲರನೂ… ಮಣಿಸುತಾ, ಬಾಗಿಸುತಾ ಕಾಣಿಸುತಾ, ಕಣ್ಮರೆಯಾಗಿಸುತಾ ತಾನೇ ಅಂತಿಮವೆನುವ ಮಾಯಾವಿ ಕಾಲಕ್ಕೆ ಇದೆಯೇ ಅಸ್ತಿತ್ವ? ಉರುಳುರುಳಿ ಹೊರಳುತಿಹ ಭುವಿಯ ಚಲನೆಯಲಿ ನಮ್ಮ...

Comments 3

  1. Ramesh. M.Y
    Sep 18, 2022 Reply

    ರಾಟಾಳ ಎಂದರೆ ಚಕ್ರ ಅಥವಾ ಚರಕ ಎಂದು ಗೊತ್ತಾಯಿತು. ಕವನ ಚೆನ್ನಾಗಿದೆ.

  2. Gangadhar Mudaliar
    Sep 18, 2022 Reply

    ಭವದ ರಾಟಾಳ ಓದಿದೆ, ‘ಹರಾಜಿನ ಸದ್ದನ್ನು’ ನೀವೇ ಅಡಗಿಸಬೇಕು.

  3. ಪೆರೂರು ಜಾರು, ಉಡುಪಿ
    Sep 18, 2022 Reply

    ಹರಾಜಾದ ಗುರುಗಳು ಭವದ ರಾಟೆಯ ಭಾಗ
    ಹರಾಜು ತಡೆಯಲು ಇನ್ನೆಲ್ಲಿದೆ ಜಾಗ
    ತನ್ನರಿವು ತನ ತಲೆಗೆ ತನ್ನ ಕಯ್ಯೊಂದೆ ಈಗ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುಟುಕು ಆಸೆ…
ಗುಟುಕು ಆಸೆ…
May 8, 2024
ಲಿಂಗಾಚಾರ
ಲಿಂಗಾಚಾರ
May 6, 2021
ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ
February 16, 2026
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
ಬಯಲಾಟ
ಬಯಲಾಟ
March 17, 2021
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
Copyright © 2026 Bayalu