Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುಟುಕು ಆಸೆ…
Share:
Poems May 8, 2024 ಜ್ಯೋತಿಲಿಂಗಪ್ಪ

ಗುಟುಕು ಆಸೆ…

ಕಣ್ಣ
ಮುಂದಣ ಬೆಳಕು ಹಿಂದಣ ನೆರಳು
ಕಂಡೂ ಕಾಣವು

ಈ
ಕಣ್ಣಿಗೆ ನಾಚಿಕೆಯೇ ಸದ್ದು
ಕಾಣಲು ಹವಣಿಸುವುದು
ಸದ್ದು ಕಾಣುವುದೇ..ಕೇಳಿಸಿಕೋ

ಗಗನಕ್ಕೆ ಬಯಲುಂಟೇ
ಬಯಲಿಗೆ ಗಗನ ಉಂಟೇ

ರಗುತದ ನೀರೆಲ್ಲವ ಹಿಂಡಿ ಹಿಂಡಿ
ತೆಗೆದಿದೆ ಈ ಬಿಸಿಲು
ಒಣಗಲು ಏನುಂಟು

ಮೇಲೆ ಕೆಳಗೆ ಎಂಬುದು
ನನ್ನ ಕಣ್ಣ ಗೆರೆ

ಆದಿಗೂ ಮುನ್ನ ಏನಿತ್ತು
ಅಂತ್ಯದ ಆಚೆ ಏನಿದೆ

ಇರುವೆ ಅಳೆಯಲು ಮಾನ ಆನೆ

ಮರಳ ಕಣದಷ್ಟಿರುವ ಮನಕೆ
ಬಂಡೆಯಷ್ಟು ಬಯಕೆ
ಉದ್ದಕ್ಕೂ ಇಚ್ಛೆ ನೆರಳು

ಹಸಿ ರಕ್ತ ಒಣಗಿದೆ
ರಾಗವಿಲ್ಲ ದ್ವೇಷ ಇಲ್ಲ

ಕಳ್ಳಗತ್ತಲು ಸುಳ್ಳು ಹುಡುಕುವುದು

ಈ
ಆಸೆ ಒಂದು ಗುಟುಕು
ಒಂದೊಂದೇ ಗುಟುಕು ಈ ಆಸೆ

ಬಾಯಾರದೆ ಕುಡಿದು ಬಿಟ್ಟ ನೀರು
ಈ ಕೆರೆ ನುಂಗುತಿದೆ

ಖಾಲೀ ಇರುವ ಕನ್ನಡಿ
ಎದುರು ನಿಂತು ನಾನು ತುಂಬುತಿರುವೆ.

Previous post ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
Next post ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…

Related Posts

ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Comments 2

  1. Padmalaya
    May 9, 2024 Reply

    ಜೋತಿಲಿಂಗಪ್ಪನವರ ಕಾವ್ಯದ ಓದು ಸಂಕಟದ ಸಂಗತಿ.ಬೌದ್ಧ ಮೀಮಾಂಸೆ ಒಂದು ಕಡೆ ಹೇಳುತ್ತದೆ….ನಿಸರ್ಗ ಧರ್ಮ ಭಾಷೆ ಮತ್ತು ಮಾತಿಗೆ ಸಿಗುವಂತಹದ್ದಲ್ಲ.ಆದರೆ ಭಾಷೆ ಮತ್ತು ಮಾತಿನ ಹೊರತು ಧರ್ಮ ಇರಲಾರದು. ಈ ನೆಲೆ ಯಿಂದ ಅವರ ಕಾವ್ಯವನ್ನ ಪ್ರವೇಶಿಸಿದರೆ,ಅವರ ಐಡಿಯಾಲಜಿ ಗೊತ್ತಾಗಿ ಬಿಡುತ್ತದೆ.ಐಡಿಯಾಲಜಿ ಇಲ್ಲದೆ ಕಾವ್ಯ ಅಸಾಧ್ಯ.

  2. ವರದರಾಜ್, ಬೆಂಗಳೂರು
    May 9, 2024 Reply

    ಗುಟುಕು ಆಸೆಗಳೇ ಜೀವನವನ್ನು ಸ್ವಾಹಾ ಮಾಡಿಬಿಡುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
Copyright © 2026 Bayalu