Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುಟುಕು ಆಸೆ…
Share:
Poems May 8, 2024 ಜ್ಯೋತಿಲಿಂಗಪ್ಪ

ಗುಟುಕು ಆಸೆ…

ಕಣ್ಣ
ಮುಂದಣ ಬೆಳಕು ಹಿಂದಣ ನೆರಳು
ಕಂಡೂ ಕಾಣವು

ಈ
ಕಣ್ಣಿಗೆ ನಾಚಿಕೆಯೇ ಸದ್ದು
ಕಾಣಲು ಹವಣಿಸುವುದು
ಸದ್ದು ಕಾಣುವುದೇ..ಕೇಳಿಸಿಕೋ

ಗಗನಕ್ಕೆ ಬಯಲುಂಟೇ
ಬಯಲಿಗೆ ಗಗನ ಉಂಟೇ

ರಗುತದ ನೀರೆಲ್ಲವ ಹಿಂಡಿ ಹಿಂಡಿ
ತೆಗೆದಿದೆ ಈ ಬಿಸಿಲು
ಒಣಗಲು ಏನುಂಟು

ಮೇಲೆ ಕೆಳಗೆ ಎಂಬುದು
ನನ್ನ ಕಣ್ಣ ಗೆರೆ

ಆದಿಗೂ ಮುನ್ನ ಏನಿತ್ತು
ಅಂತ್ಯದ ಆಚೆ ಏನಿದೆ

ಇರುವೆ ಅಳೆಯಲು ಮಾನ ಆನೆ

ಮರಳ ಕಣದಷ್ಟಿರುವ ಮನಕೆ
ಬಂಡೆಯಷ್ಟು ಬಯಕೆ
ಉದ್ದಕ್ಕೂ ಇಚ್ಛೆ ನೆರಳು

ಹಸಿ ರಕ್ತ ಒಣಗಿದೆ
ರಾಗವಿಲ್ಲ ದ್ವೇಷ ಇಲ್ಲ

ಕಳ್ಳಗತ್ತಲು ಸುಳ್ಳು ಹುಡುಕುವುದು

ಈ
ಆಸೆ ಒಂದು ಗುಟುಕು
ಒಂದೊಂದೇ ಗುಟುಕು ಈ ಆಸೆ

ಬಾಯಾರದೆ ಕುಡಿದು ಬಿಟ್ಟ ನೀರು
ಈ ಕೆರೆ ನುಂಗುತಿದೆ

ಖಾಲೀ ಇರುವ ಕನ್ನಡಿ
ಎದುರು ನಿಂತು ನಾನು ತುಂಬುತಿರುವೆ.

Previous post ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
Next post ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…

Related Posts

ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 2

  1. Padmalaya
    May 9, 2024 Reply

    ಜೋತಿಲಿಂಗಪ್ಪನವರ ಕಾವ್ಯದ ಓದು ಸಂಕಟದ ಸಂಗತಿ.ಬೌದ್ಧ ಮೀಮಾಂಸೆ ಒಂದು ಕಡೆ ಹೇಳುತ್ತದೆ….ನಿಸರ್ಗ ಧರ್ಮ ಭಾಷೆ ಮತ್ತು ಮಾತಿಗೆ ಸಿಗುವಂತಹದ್ದಲ್ಲ.ಆದರೆ ಭಾಷೆ ಮತ್ತು ಮಾತಿನ ಹೊರತು ಧರ್ಮ ಇರಲಾರದು. ಈ ನೆಲೆ ಯಿಂದ ಅವರ ಕಾವ್ಯವನ್ನ ಪ್ರವೇಶಿಸಿದರೆ,ಅವರ ಐಡಿಯಾಲಜಿ ಗೊತ್ತಾಗಿ ಬಿಡುತ್ತದೆ.ಐಡಿಯಾಲಜಿ ಇಲ್ಲದೆ ಕಾವ್ಯ ಅಸಾಧ್ಯ.

  2. ವರದರಾಜ್, ಬೆಂಗಳೂರು
    May 9, 2024 Reply

    ಗುಟುಕು ಆಸೆಗಳೇ ಜೀವನವನ್ನು ಸ್ವಾಹಾ ಮಾಡಿಬಿಡುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಬಯಲಾದ ದೇವರು
ಬಯಲಾದ ದೇವರು
January 15, 2026
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
Copyright © 2026 Bayalu