Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುಟುಕು ಆಸೆ…
Share:
Poems May 8, 2024 ಜ್ಯೋತಿಲಿಂಗಪ್ಪ

ಗುಟುಕು ಆಸೆ…

ಕಣ್ಣ
ಮುಂದಣ ಬೆಳಕು ಹಿಂದಣ ನೆರಳು
ಕಂಡೂ ಕಾಣವು

ಈ
ಕಣ್ಣಿಗೆ ನಾಚಿಕೆಯೇ ಸದ್ದು
ಕಾಣಲು ಹವಣಿಸುವುದು
ಸದ್ದು ಕಾಣುವುದೇ..ಕೇಳಿಸಿಕೋ

ಗಗನಕ್ಕೆ ಬಯಲುಂಟೇ
ಬಯಲಿಗೆ ಗಗನ ಉಂಟೇ

ರಗುತದ ನೀರೆಲ್ಲವ ಹಿಂಡಿ ಹಿಂಡಿ
ತೆಗೆದಿದೆ ಈ ಬಿಸಿಲು
ಒಣಗಲು ಏನುಂಟು

ಮೇಲೆ ಕೆಳಗೆ ಎಂಬುದು
ನನ್ನ ಕಣ್ಣ ಗೆರೆ

ಆದಿಗೂ ಮುನ್ನ ಏನಿತ್ತು
ಅಂತ್ಯದ ಆಚೆ ಏನಿದೆ

ಇರುವೆ ಅಳೆಯಲು ಮಾನ ಆನೆ

ಮರಳ ಕಣದಷ್ಟಿರುವ ಮನಕೆ
ಬಂಡೆಯಷ್ಟು ಬಯಕೆ
ಉದ್ದಕ್ಕೂ ಇಚ್ಛೆ ನೆರಳು

ಹಸಿ ರಕ್ತ ಒಣಗಿದೆ
ರಾಗವಿಲ್ಲ ದ್ವೇಷ ಇಲ್ಲ

ಕಳ್ಳಗತ್ತಲು ಸುಳ್ಳು ಹುಡುಕುವುದು

ಈ
ಆಸೆ ಒಂದು ಗುಟುಕು
ಒಂದೊಂದೇ ಗುಟುಕು ಈ ಆಸೆ

ಬಾಯಾರದೆ ಕುಡಿದು ಬಿಟ್ಟ ನೀರು
ಈ ಕೆರೆ ನುಂಗುತಿದೆ

ಖಾಲೀ ಇರುವ ಕನ್ನಡಿ
ಎದುರು ನಿಂತು ನಾನು ತುಂಬುತಿರುವೆ.

Previous post ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
Next post ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...

Comments 2

  1. Padmalaya
    May 9, 2024 Reply

    ಜೋತಿಲಿಂಗಪ್ಪನವರ ಕಾವ್ಯದ ಓದು ಸಂಕಟದ ಸಂಗತಿ.ಬೌದ್ಧ ಮೀಮಾಂಸೆ ಒಂದು ಕಡೆ ಹೇಳುತ್ತದೆ….ನಿಸರ್ಗ ಧರ್ಮ ಭಾಷೆ ಮತ್ತು ಮಾತಿಗೆ ಸಿಗುವಂತಹದ್ದಲ್ಲ.ಆದರೆ ಭಾಷೆ ಮತ್ತು ಮಾತಿನ ಹೊರತು ಧರ್ಮ ಇರಲಾರದು. ಈ ನೆಲೆ ಯಿಂದ ಅವರ ಕಾವ್ಯವನ್ನ ಪ್ರವೇಶಿಸಿದರೆ,ಅವರ ಐಡಿಯಾಲಜಿ ಗೊತ್ತಾಗಿ ಬಿಡುತ್ತದೆ.ಐಡಿಯಾಲಜಿ ಇಲ್ಲದೆ ಕಾವ್ಯ ಅಸಾಧ್ಯ.

  2. ವರದರಾಜ್, ಬೆಂಗಳೂರು
    May 9, 2024 Reply

    ಗುಟುಕು ಆಸೆಗಳೇ ಜೀವನವನ್ನು ಸ್ವಾಹಾ ಮಾಡಿಬಿಡುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
Copyright © 2026 Bayalu