Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಯಲಾದ ದೇವರು
Share:
Poems January 15, 2026 ಜ್ಯೋತಿಲಿಂಗಪ್ಪ

ಬಯಲಾದ ದೇವರು

ಈ
ದೇವರು
ಒಂದು ಕನಸು

ನಿಜವೂ ಅಹುದು
ಸುಳ್ಳೂ ಅಹುದು

ಕಲ್ಪನೆಯ ಹಾಗೆ
ಕಾಣುವುದು ಕಾಣದು

ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ

ಕೇಡೆಲ್ಲವೂ ನನ್ನವು

ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ

ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು

ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು

ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ

ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…

Previous post ಹುಡುಕಾಟ
ಹುಡುಕಾಟ
Next post ನಾನೆಂಬ ನಿನಾದ…
ನಾನೆಂಬ ನಿನಾದ…

Related Posts

ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...

Comments 3

  1. Vijaya Bagevadi
    Jan 20, 2026 Reply

    ಸುಳ್ಳು ಕತೆಗಳ ಸತ್ಯದ ಹುಡುಕಾಟ😟

  2. Dr. Umesh Soraba
    Jan 23, 2026 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವಿತೆಗಳಿಗೆ ಭಾವಲೋಕದ ಸತ್ಯ-ಮಿಥ್ಯಗಳೊಂದಿಗೆ ಸೆಣಸುವ ಆರೋಗ್ಯಕರ ಜವಾಬ್ದಾರಿಯ ನಡೆಯೊಂದು ಇದ್ದೇ ಇದೆ. ಇದು ‘ಬಯಲಾದ ದೇವರು’ ಕವಿತೆಯಲ್ಲೂ ಮುಂದುವರೆದಿರುವುದನ್ನು ಕಾಣಬಹುದು… ದೇವರ ಅಸ್ತಿತ್ವದ ಕುರಿತು ಈಗಾಗಲೇ ಇರುವ ಪ್ರಚಲಿತ ವ್ಯಾಖ್ಯಾನ-ವಿವರಣೆಗಳ ಮಧ್ಯೆ ಈ ಕವಿತೆಯಲ್ಲಿ ದೇವರು ಕುರಿತು ಆಲೋಚಿಸಿರುವ ಬಗೆ ಭಿನ್ನವೂ ಆಪ್ತವೂ ಆದುದು. ಈ ದೇವರನ್ನು ನಂಬಿದರೂ ಕೇಡಿಲ್ಲ…. ನಂಬದಿರಲೂ ಕೇಡಿಲ್ಲ…. ಒಣಗಿದ ಎಲೆ ಉದುರಲು ಕಾಯುತಿರುವ ಚಿಗುರಿನಂತೆ ಈ ದೇವರು ಮರಮರಳಿ ಹೊಸತಾಗುವ ರೂಪಕ. ಹುಟ್ಟು- ಸಾವುಗಳ ಮಧ್ಯೆ ಬದುಕಿನ ಸ್ಥಿತಿಸ್ಥಾಪಕತೆಗೆ ಕಾರಕ… ಹೀಗೆ ದೇವರು ಮತ್ತು ದೇವರ ಅಸ್ತಿತ್ವ ಮಾನವ ಪ್ರಜ್ಞೆಯಲ್ಲಿ ನಿಂತ ಬಗೆಯನ್ನು ಕವಿ ಇಲ್ಲಿ ಭಾವಿಸಿದ ಮತ್ತು ಭಾಷ್ಯೀಕರಿಸಿದ ಬಗೆ ವಿಶಿಷ್ಟವಾಗಿದೆ. ಕವಿಗೆ ಅಭಿನಂದನೆಗಳು.

  3. ನವೀನ್ ಕುಮಾರ್, ಬೆಟಗೇರಿ
    Feb 5, 2026 Reply

    ನಿಜ, ಸುಳ್ಳು ಎರಡೂ ಆಗಿರುವುದರಿಂದಲೇ ಆ ದೇವರು ಮನುಷ್ಯನ ಹಳಬಂಡ ಕನಸು, ಕವನ ಚೆನ್ನಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
Copyright © 2026 Bayalu