Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಯಲಾದ ದೇವರು
Share:
Poems January 15, 2026 ಜ್ಯೋತಿಲಿಂಗಪ್ಪ

ಬಯಲಾದ ದೇವರು

ಈ
ದೇವರು
ಒಂದು ಕನಸು

ನಿಜವೂ ಅಹುದು
ಸುಳ್ಳೂ ಅಹುದು

ಕಲ್ಪನೆಯ ಹಾಗೆ
ಕಾಣುವುದು ಕಾಣದು

ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ

ಕೇಡೆಲ್ಲವೂ ನನ್ನವು

ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ

ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು

ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು

ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ

ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…

Previous post ಹುಡುಕಾಟ
ಹುಡುಕಾಟ
Next post ನಾನೆಂಬ ನಿನಾದ…
ನಾನೆಂಬ ನಿನಾದ…

Related Posts

ಗುಟುಕು ಆಸೆ…
Share:
Poems

ಗುಟುಕು ಆಸೆ…

May 8, 2024 ಜ್ಯೋತಿಲಿಂಗಪ್ಪ
ಕಣ್ಣ ಮುಂದಣ ಬೆಳಕು ಹಿಂದಣ ನೆರಳು ಕಂಡೂ ಕಾಣವು ಈ ಕಣ್ಣಿಗೆ ನಾಚಿಕೆಯೇ ಸದ್ದು ಕಾಣಲು ಹವಣಿಸುವುದು ಸದ್ದು ಕಾಣುವುದೇ..ಕೇಳಿಸಿಕೋ ಗಗನಕ್ಕೆ ಬಯಲುಂಟೇ ಬಯಲಿಗೆ ಗಗನ ಉಂಟೇ ರಗುತದ...
ಸೋತ ಅಂಗೈಗಳಿಗಂಟಿ…
Share:
Poems

ಸೋತ ಅಂಗೈಗಳಿಗಂಟಿ…

October 19, 2025 ಜಬೀವುಲ್ಲಾ ಎಂ.ಅಸದ್
ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...

Comments 3

  1. Vijaya Bagevadi
    Jan 20, 2026 Reply

    ಸುಳ್ಳು ಕತೆಗಳ ಸತ್ಯದ ಹುಡುಕಾಟ😟

  2. Dr. Umesh Soraba
    Jan 23, 2026 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವಿತೆಗಳಿಗೆ ಭಾವಲೋಕದ ಸತ್ಯ-ಮಿಥ್ಯಗಳೊಂದಿಗೆ ಸೆಣಸುವ ಆರೋಗ್ಯಕರ ಜವಾಬ್ದಾರಿಯ ನಡೆಯೊಂದು ಇದ್ದೇ ಇದೆ. ಇದು ‘ಬಯಲಾದ ದೇವರು’ ಕವಿತೆಯಲ್ಲೂ ಮುಂದುವರೆದಿರುವುದನ್ನು ಕಾಣಬಹುದು… ದೇವರ ಅಸ್ತಿತ್ವದ ಕುರಿತು ಈಗಾಗಲೇ ಇರುವ ಪ್ರಚಲಿತ ವ್ಯಾಖ್ಯಾನ-ವಿವರಣೆಗಳ ಮಧ್ಯೆ ಈ ಕವಿತೆಯಲ್ಲಿ ದೇವರು ಕುರಿತು ಆಲೋಚಿಸಿರುವ ಬಗೆ ಭಿನ್ನವೂ ಆಪ್ತವೂ ಆದುದು. ಈ ದೇವರನ್ನು ನಂಬಿದರೂ ಕೇಡಿಲ್ಲ…. ನಂಬದಿರಲೂ ಕೇಡಿಲ್ಲ…. ಒಣಗಿದ ಎಲೆ ಉದುರಲು ಕಾಯುತಿರುವ ಚಿಗುರಿನಂತೆ ಈ ದೇವರು ಮರಮರಳಿ ಹೊಸತಾಗುವ ರೂಪಕ. ಹುಟ್ಟು- ಸಾವುಗಳ ಮಧ್ಯೆ ಬದುಕಿನ ಸ್ಥಿತಿಸ್ಥಾಪಕತೆಗೆ ಕಾರಕ… ಹೀಗೆ ದೇವರು ಮತ್ತು ದೇವರ ಅಸ್ತಿತ್ವ ಮಾನವ ಪ್ರಜ್ಞೆಯಲ್ಲಿ ನಿಂತ ಬಗೆಯನ್ನು ಕವಿ ಇಲ್ಲಿ ಭಾವಿಸಿದ ಮತ್ತು ಭಾಷ್ಯೀಕರಿಸಿದ ಬಗೆ ವಿಶಿಷ್ಟವಾಗಿದೆ. ಕವಿಗೆ ಅಭಿನಂದನೆಗಳು.

  3. ನವೀನ್ ಕುಮಾರ್, ಬೆಟಗೇರಿ
    Feb 5, 2026 Reply

    ನಿಜ, ಸುಳ್ಳು ಎರಡೂ ಆಗಿರುವುದರಿಂದಲೇ ಆ ದೇವರು ಮನುಷ್ಯನ ಹಳಬಂಡ ಕನಸು, ಕವನ ಚೆನ್ನಾಗಿದೆ.

Leave a Reply to ನವೀನ್ ಕುಮಾರ್, ಬೆಟಗೇರಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸೂರ್ಯ
ಸೂರ್ಯ
January 8, 2023
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
Copyright © 2026 Bayalu