Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನೆ-ಇಂದು
Share:
Poems May 10, 2022 ಕೆ.ಆರ್ ಮಂಗಳಾ

ನಿನ್ನೆ-ಇಂದು

ನಿನ್ನೆ-

ಬೆಳಗ ಕಾಣದ ಮಸುಕು
ಚಿತ್ತದ ಜಾಡ್ಯ, ಮರೆವಿನ ಬಾಧೆ
ಬೆಂಬಿಡದ ಕಾಮನೆಗಳಲಿ
ಬಂಧಿಯಾಗಿದೆ ಜೀವ
ಬಿಡಿಸು ಗುರುವೆ ಇದರ ಪ್ರವರ…

ಇಂದು-

ಬೆಳಕ ಕೊಡುತಿಹ ಆ ದೀಪ
ಯಾವುದಕೆ ಅಂಟಿದೆ?
ಹಣತೆಗೋ, ಬತ್ತಿಗೋ,
ಎಣ್ಣೆಗೋ, ಗಾಳಿಗೋ…
ಇಲ್ಲಾ ನೋಡುವ ಕಣ್ಣ ಪಾಪೆಗೋ?

ಈ ಪ್ರಾಣ ಅದಾವುದಕೆ
ಅಂಟಿಕೊಂಡಿದೆ…
ದೇಹಕ್ಕೋ, ಉಸಿರಿಗೋ,
ನೀರಿಗೋ, ಸೇವಿಸುವ ಆಹಾರಕೋ
ಇಲ್ಲಾ ಒಳಗಣ ಪರಿಕರಗಳಿಗೋ…?

ಆ ಬೆಳಕಿನಂತೆ
ಈ ಪ್ರಾಣಕ್ಕೂ ಅಂಟಿಗೂ ಯಾವ ನಂಟೂ ಇಲ್ಲ…

ದೀಪ ಹಣತೆಯಲ್ಲಿ
ಜೀವ ದೇಹದಲ್ಲಿ
ಬಂಧಿಗಳೇ ಅಲ್ಲಾ!
ಅದು ಉರಿಯುತಲೇ ಬೆಳಗುವ…
ಇದು ಆಗುತಲೇ ಜೀವಿಸುವ…
ಸಹಜ ಪ್ರಕೃತಿಯ ಸೊಬಗು!
ಆಹಾ! ಎಂತಹ ಬೆಡಗು!!

Previous post ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
Next post ಹಿರಿಯರ ಹಾದಿ…
ಹಿರಿಯರ ಹಾದಿ…

Related Posts

ಬೆಳಕಿನ ಹುಳು
Share:
Poems

ಬೆಳಕಿನ ಹುಳು

December 9, 2025 ಜ್ಯೋತಿಲಿಂಗಪ್ಪ
ನನ್ನೀ ಮದವ ಸುಡಲು ಬರುವ ಬೆಳಕಿನ ಹುಳು ಹಗಲು ದೃಷ್ಟಿ ಮರೆ ಇರುಳು ಕಣ್ಣ ಮರೆ ಕತ್ತಲಲಿ ಮಿನುಗುವುದು ಏ ಕಣ್ಣೇ ದೃಷ್ಟಿಯ ಮರೆ ಮಾಡದಿರು ಇದು ಬರಿಯೆ ಹುಳು ಅಲ್ಲಾ ಬೆಳಕಿನ ಹುಳು...
ಅರ್ಥ – ವ್ಯರ್ಥ
Share:
Poems

ಅರ್ಥ – ವ್ಯರ್ಥ

April 5, 2026 ಜಬೀವುಲ್ಲಾ ಎಂ.ಅಸದ್
ಮುಗಿಲಿಗೆ ಜಿಗಿದ ಪಾದ ಮಸ್ತಕದ ಕಂದಕದಲ್ಲಿ ಚಿಗುರಿ ಶತಮಾನಗಳ ಮೊಳೆ ಹೊಡೆದ ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು ಕಾಲದ ಸಹಿಯಾಗಿ ಬದಲಾಗಿ ಉಸಿರ ಗೊರಿಯೊಳಗೆ ಬೆರೆತು ಹೆಜ್ಜೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಗಾವಿ ಅಧೀವೇಶನ: 1924
ಬೆಳಗಾವಿ ಅಧೀವೇಶನ: 1924
December 13, 2024
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ನನ್ನೆದುರು ನಾ…
ನನ್ನೆದುರು ನಾ…
March 6, 2024
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಸಂತೆಯ ಸಂತ
ಸಂತೆಯ ಸಂತ
September 7, 2020
Copyright © 2026 Bayalu