Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಲ ಎಲ್ಲಿದೆ?
Share:
Poems January 7, 2022 ಕೆ.ಆರ್ ಮಂಗಳಾ

ಕಾಲ ಎಲ್ಲಿದೆ?

ಎಲ್ಲವನೂ… ಎಲ್ಲರನೂ…
ಮಣಿಸುತಾ, ಬಾಗಿಸುತಾ
ಕಾಣಿಸುತಾ, ಕಣ್ಮರೆಯಾಗಿಸುತಾ
ತಾನೇ ಅಂತಿಮವೆನುವ
ಮಾಯಾವಿ ಕಾಲಕ್ಕೆ
ಇದೆಯೇ ಅಸ್ತಿತ್ವ?

ಉರುಳುರುಳಿ ಹೊರಳುತಿಹ
ಭುವಿಯ ಚಲನೆಯಲಿ
ನಮ್ಮ ಉಸಿರಿನ ಲೆಕ್ಕವಿದೆ
ಯಾವ ರಾತ್ರಿಯು ಕೊನೆಯೋ
ಯಾವ ಹಗಲನು ಕಾಣೆವೋ
ಬಲ್ಲವರು ಯಾರು?

ಭಾವ ಸಂಚಯದ ಸುಳಿಗೆ ಸಿಲುಕಿ
ಕಲ್ಪಿತ ಭ್ರಮೆಗಳಲಿ
ತಿರುತಿರುಗಿ ಬೀಳುತ್ತಾ
ತೂರಿ ಹೋಗುತಿಹ
ತರಗೆಲೆಯ ಜೀವಕ್ಕೆ
ಆಯುಷ್ಯವಾದರೂ ಎಲ್ಲಿದೆ?

ಆದಿ-ಅನಾದಿಯ ಗೊಡವೆಯಿಲ್ಲದೆ
ಆಗುತ್ತಲೇ ಸಾಗುತಿಹ
ಅನಂತ ಪ್ರವಾಹದಲಿ
ಏಳುತ್ತಲೇ ಇಳಿದು ಬಿಡುವ
ಕಿರು ಅಲೆಯು ಈ ಬದುಕು
ಹೇಳಿ ಕಾಲ ಎಲ್ಲಿದೆ?

ಜಗದೊಳಗೆ, ಮನದೊಳಗೆ
ಬೆಳಕು-ಕತ್ತಲೆಯೊಳಗೆ
ಕಣ್ಣೆದುರೇ ಜಾರುತಿಹ ಸಮಯದಲಿ
ಹಿಡಿಯಲಾದೀತೆ ಒಂದಾದರೂ ಗಳಿಗೆ
ಮಾಡದಡುಗೆಗೇ ಜೊಲ್ಲು ಸುರಿಸಿ
ತಂಗಳನ್ನವನೇ ಚಪ್ಪರಿಸುತಾ
ಭ್ರಮೆಯ ಚುಂಗನು
ಹಿಡಿದ ರೂಢಿಗರಿಗೆ
ತಿಳಿಯಲಾದೀತೇ ಈ ಕ್ಷಣದ ಮರ್ಮ?

ಹೇಳಿ ಕಾಲ ನಿಜವೋ, ಕಲ್ಪಿತವೋ?

Previous post ಆಕಾರ-ನಿರಾಕಾರ
ಆಕಾರ-ನಿರಾಕಾರ
Next post ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Comments 2

  1. Vijayala
    Jan 8, 2022 Reply

    ಬಹಳ ಸೊಗಸಾದ ಬರವಣಿಗೆ👏🏽

  2. Padmalaya
    Jan 26, 2022 Reply

    ಚೆನ್ನಾಗಿದೆ.ಮುಂದುವರೆಸಿ….

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಶರಣ- ಎಂದರೆ…
ಶರಣ- ಎಂದರೆ…
March 6, 2020
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಈ  ದಾರಿ…
ಈ ದಾರಿ…
May 10, 2023
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
February 16, 2026
Copyright © 2026 Bayalu