Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೊಟ್ಟೆ- ಗೂಡು
Share:
Poems April 11, 2025 ಜ್ಯೋತಿಲಿಂಗಪ್ಪ

ಮೊಟ್ಟೆ- ಗೂಡು

ಮರೆವೆಯ ಗೂಡಲಿ
ಒಂದು ಮರಿ ಆಸೆಯ ಮೊಟ್ಟೆ
ಗೂಡು ಸಣ್ಣದು ಮೊಟ್ಟೆ ದೊಡ್ಡದು
ಮೊಟ್ಟೆ ಬಿರಿದರೆ ಗೂಡು ಸಾಯುವುದು
ಗೂಡು ಸಾಯದಿರೆ ಮೊಟ್ಟೆ ಸಾಯುವುದು
ಏನು ಮರೆವೆಯೋ ಸೀಸೆಯು ಒಡೆಯದೆ
ಹಕ್ಕಿ ಉಸಿರುಗಟ್ಟಿದೆ
ಅಳಿಯಲುಂಟೇ ಮರೆವೆಯೊಳಗಣ ಹಿಂದಣ ಹೆಜ್ಜೆ

ತೋರುವುದೆಲ್ಲವೂ ಸುಳ್ಳು
ಕಂಡುದೆಲ್ಲವೂ ಸುಳ್ಳು
ನಿಜವೇನು ಅರಿವೆಯೇ ಮರೆವೆಯೇ
ಬರಿದೆ ಬಯಲಾಗಲಾಗದು.

*** *** ***
ಈ
ಜ್ಞಾನಕ್ಕೆ ಏನು ಕೇಡೋ
ಮಣಿಯದು ಮಣಿಸದು
ಅಂಗೈಯಲ್ಲಿ ಉರಿಯದ ದೀಪ
ದಾರಿ ತೋರುವುದೇ…

ಖಾಲೀ
ಕುಂಭ ಬಯಲು ತುಂಬಲಹುದು

ಬಯಲು ತುಂಬಿಹ ಕುಂಭಕೆ
ಜಲವ ತುಂಬಿ ಬಯಲು ಬರಿದು

ಸುಳ್ಳು ನಿಜ
ಸತ್ಯ ಅಸತ್ಯ
ಆಚಾರ ಅನಾಚಾರ
ಇವೆಲ್ಲವೂ ಏನು ಏನು
ಗೊಂಬೆಗೊಂದು ಕನ್ನಡಿ ಹಿಡಿದು
ಗೊಂಬೆಯ ನಗಿಸಲಾಗದು
ನೀರ ನೆಳಲುಗಳು

ಅಯ್ಯೋ
ಕತ್ತಲೆಯನ್ನೆಲ್ಲಾ ಬೆಳಕು
ಮಾಡುವ ಕೇಡು ಈ ಬುದ್ಧಿಗೆ..

ಏನಯ್ಯಾ ನಿನ ಮೊಂಡಾಟ
ನಿರಹಂಕಾರ ಸಾಲದೇ.,
ಕೇಡೆಲ್ಲವೂ ನನದು

ಈ
ಸಾವಿಗೇನು
ಬಾಲ್ಯ ತಾರುಣ್ಯ ವೃದ್ಧಾಪ್ಯ ಉಂಟೇ…

ಆಸೆ ಕೊಲ್ಲುವ ಸಾವಿಗೆ
ಹೇಸಿ ಕೊಂಡರೆ ಸೈ…

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ದೇಹ ದೇವಾಲಯ
ದೇಹ ದೇವಾಲಯ

Related Posts

ಬೆಳಕು ನುಂಗಿದ ಕತ್ತಲು
Share:
Poems

ಬೆಳಕು ನುಂಗಿದ ಕತ್ತಲು

December 9, 2025 ಜಬೀವುಲ್ಲಾ ಎಂ.ಅಸದ್
ಬೂದಿ ಮುಚ್ಚಿದ ಮುಗಿಲು ಹರಿದ ಗಾಳಿ ಅಲೆಗಳಿಗೆ ನೆನೆದು ನೆಲದ ಬಾಗಿಲು ತೆರೆದು ತೋರಿ ಬಯಲು ಮುರಿದ ಕೈ ಕುಂಟುವ ಕಾಲು ನಾಲಿಗೆ ಚಾಚಿದ ಬಯಕೆ ನೂರು ನೋಡು… ನೋಡು…...
ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...

Comments 1

  1. Rajendra
    Apr 13, 2025 Reply

    Nice

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
Copyright © 2026 Bayalu