Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮೊಟ್ಟೆ- ಗೂಡು
Share:
Poems April 11, 2025 ಜ್ಯೋತಿಲಿಂಗಪ್ಪ

ಮೊಟ್ಟೆ- ಗೂಡು

ಮರೆವೆಯ ಗೂಡಲಿ
ಒಂದು ಮರಿ ಆಸೆಯ ಮೊಟ್ಟೆ
ಗೂಡು ಸಣ್ಣದು ಮೊಟ್ಟೆ ದೊಡ್ಡದು
ಮೊಟ್ಟೆ ಬಿರಿದರೆ ಗೂಡು ಸಾಯುವುದು
ಗೂಡು ಸಾಯದಿರೆ ಮೊಟ್ಟೆ ಸಾಯುವುದು
ಏನು ಮರೆವೆಯೋ ಸೀಸೆಯು ಒಡೆಯದೆ
ಹಕ್ಕಿ ಉಸಿರುಗಟ್ಟಿದೆ
ಅಳಿಯಲುಂಟೇ ಮರೆವೆಯೊಳಗಣ ಹಿಂದಣ ಹೆಜ್ಜೆ

ತೋರುವುದೆಲ್ಲವೂ ಸುಳ್ಳು
ಕಂಡುದೆಲ್ಲವೂ ಸುಳ್ಳು
ನಿಜವೇನು ಅರಿವೆಯೇ ಮರೆವೆಯೇ
ಬರಿದೆ ಬಯಲಾಗಲಾಗದು.

*** *** ***
ಈ
ಜ್ಞಾನಕ್ಕೆ ಏನು ಕೇಡೋ
ಮಣಿಯದು ಮಣಿಸದು
ಅಂಗೈಯಲ್ಲಿ ಉರಿಯದ ದೀಪ
ದಾರಿ ತೋರುವುದೇ…

ಖಾಲೀ
ಕುಂಭ ಬಯಲು ತುಂಬಲಹುದು

ಬಯಲು ತುಂಬಿಹ ಕುಂಭಕೆ
ಜಲವ ತುಂಬಿ ಬಯಲು ಬರಿದು

ಸುಳ್ಳು ನಿಜ
ಸತ್ಯ ಅಸತ್ಯ
ಆಚಾರ ಅನಾಚಾರ
ಇವೆಲ್ಲವೂ ಏನು ಏನು
ಗೊಂಬೆಗೊಂದು ಕನ್ನಡಿ ಹಿಡಿದು
ಗೊಂಬೆಯ ನಗಿಸಲಾಗದು
ನೀರ ನೆಳಲುಗಳು

ಅಯ್ಯೋ
ಕತ್ತಲೆಯನ್ನೆಲ್ಲಾ ಬೆಳಕು
ಮಾಡುವ ಕೇಡು ಈ ಬುದ್ಧಿಗೆ..

ಏನಯ್ಯಾ ನಿನ ಮೊಂಡಾಟ
ನಿರಹಂಕಾರ ಸಾಲದೇ.,
ಕೇಡೆಲ್ಲವೂ ನನದು

ಈ
ಸಾವಿಗೇನು
ಬಾಲ್ಯ ತಾರುಣ್ಯ ವೃದ್ಧಾಪ್ಯ ಉಂಟೇ…

ಆಸೆ ಕೊಲ್ಲುವ ಸಾವಿಗೆ
ಹೇಸಿ ಕೊಂಡರೆ ಸೈ…

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ದೇಹ ದೇವಾಲಯ
ದೇಹ ದೇವಾಲಯ

Related Posts

ಬೆಳಕಲಿ ದೀಪ
Share:
Poems

ಬೆಳಕಲಿ ದೀಪ

December 8, 2021 ಜ್ಯೋತಿಲಿಂಗಪ್ಪ
ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 1

  1. Rajendra
    Apr 13, 2025 Reply

    Nice

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
Copyright © 2026 Bayalu