Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು  ಬಿಂಬ
Share:
Poems September 13, 2025 ಜ್ಯೋತಿಲಿಂಗಪ್ಪ

ನಾನು ಬಿಂಬ

ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು.
-ಅಲ್ಲಮ

ಈ
ಕನ್ನಡಿಯಲಿ
ಕಾಣುವ ನನ ಬಿಂಬವ
ಓಡಿಸುವುದು ಹೇಗೆ…??!!

ಕಣ್ಣ ಮುಚ್ಚಿದರೆ ಕನ್ನಡಿ ದೂರ
ಕಣ್ಣ ತೆರೆದರೆ ನಾನು ಅದೂರ

ನಾನು ಬಿಂಬ ಬಿಂಬ ನಾನು
ಎರಡರಲಿ ಒಂದ ಕೊಲಲಾಗದು

ನಾನು
ಇದ್ದಂತೆ ನನ್ನ ಬಿಂಬ
ಹಿಗ್ಗದು ಕುಗ್ಗದು
ಹಿಗ್ಗಿರುವೆ ಹಾಗೇ…
ಕಂಡುದ ಹೇಳದು ಹಾಗೆ..

ನಾನು ಮಾಸಿಯೂ ಮಾಸದು ಬಿಂಬ
ನಾನು ಮಾದರೂ ಮಾದುದೇ..ಬಿಂಬ

ಏಸು ಬಿಂಬಗಳೋ….
ಎನ್ನೊಳಗಿಲ್ಲ ಒಂದೂ ಒಂದು
ಬಂದವು ಹೋದವು ಸರಳ
ನನ್ನಲ್ಲಿಯೇ ಇಲ್ಲದುದು ಇನ್ನೆಲ್ಲಿ..

ನಿನ್ನೊಳಗೆ ನಾನೋ ..
ನನ್ನೊಳಗೆ ನೀನೋ…
ಈ ತರ್ಕವೆಲ್ಲಾ ಪಕ್ಕಕ್ಕೆ ಇಡು
ಬಿಂಬಕೆ ಮತಿ ಇಲ್ಲ ಗತಿ ಇಲ್ಲ
ಎಂದೆಂದಿಗೂ ಅಹಂಗೆ

ಆಡಿ ಪೊಳ್ಳಾದೆ ನಾನು
ಆಡದೆ ದಿವ್ಯ ಅದು

ನಡೆಯಲು ಇರುವ ದಾರಿ
ಒಂದೇ ಪುರಾತನರ ನಡೆ

ಕನ್ನಡಿಯ ಕುರುಡಾಗಿಸಲಾರೆ

ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ ಇದೇನೆಂದರಿಯೆ.
-ಅಲ್ಲಮ

Previous post ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
Next post ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...

Comments 6

  1. ಮರಿಗೌಡ ಮಾಗಡಿ
    Sep 17, 2025 Reply

    ವಿಶೇಷ ವಿನ್ಯಾಸದ ಕವನ. ವಿವಿಧ ಶೈಲಿಯಲ್ಲಿ ನಡೆಸುತ್ತಿರುವ ನಿಮ್ಮ ಕಾವ್ಯ ಪ್ರಯೋಗ ನಿಜಕ್ಕೂ ಕುತೂಹಲ ಹುಟ್ಟಿಸುವಂತಿರುತ್ತವೆ ಸರ್.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 18, 2025 Reply

      ನಿಮ್ಮ ಓದಿಗೆ ಮನ ತುಂಬಿತು

  2. ನರೇಂದ್ರ ಚಿತ್ರದುರ್ಗ
    Sep 23, 2025 Reply

    ಅರಿವಿಗೆ ಬಾರದ ಅನುಭಾವವನ್ನು ನಿಮ್ಮಂತಹ ಕವಿಗಳ ಕವನಗಳಲ್ಲಿ ಹುಡುಕುವುದು ಎಂತಹ ವಿಪರ್ಯಾಸ ಎನ್ನುವಿರಾ? ವಚನಗಳಲ್ಲಿ ಅಡಗಿರುವ ಅಮೂಲ್ಯ ಅನುಭಾವವನ್ನು ಹೊರತೆಗೆದು ತೋರುವ ಪ್ರಯತ್ನ ಮತ್ತೆ ಅಲ್ಲೇ ಅಡಗಿಬಿಡುತ್ತದೆ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 25, 2025 Reply

      ಓದಿಗೆ ಸಂತಸ

      ದಾಟಲುಂಟೇ ಬಯಲ…??!!

  3. ಗಿರೀಶ್ ಜಾಗಿರದಾರ್
    Oct 2, 2025 Reply

    ಬಿಂಬ ತರ್ಕಗಳಾಚಿನದು. ‘ಬಿಂಬಕೆ ಮತಿ ಇಲ್ಲ ಗತಿ ಇಲ್ಲ’. ಇರುವುದೆಲ್ಲಾ ನನಗೆ, ಕೇವಲ ನನಗೆ!!!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Oct 9, 2025 Reply

      ಹೌದಲ್ವಾ ..ಓದಿಗೆ ಧನ್ಯವಾದಗಳು

Leave a Reply to ಮರಿಗೌಡ ಮಾಗಡಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಮಾತು ಮಾಯೆ
ಮಾತು ಮಾಯೆ
July 4, 2021
ಭೃತ್ಯಾಚಾರ
ಭೃತ್ಯಾಚಾರ
June 5, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಶರಣ- ಎಂದರೆ…
ಶರಣ- ಎಂದರೆ…
March 6, 2020
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
Copyright © 2026 Bayalu