Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು  ಬಿಂಬ
Share:
Poems September 13, 2025 ಜ್ಯೋತಿಲಿಂಗಪ್ಪ

ನಾನು ಬಿಂಬ

ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು.
-ಅಲ್ಲಮ

ಈ
ಕನ್ನಡಿಯಲಿ
ಕಾಣುವ ನನ ಬಿಂಬವ
ಓಡಿಸುವುದು ಹೇಗೆ…??!!

ಕಣ್ಣ ಮುಚ್ಚಿದರೆ ಕನ್ನಡಿ ದೂರ
ಕಣ್ಣ ತೆರೆದರೆ ನಾನು ಅದೂರ

ನಾನು ಬಿಂಬ ಬಿಂಬ ನಾನು
ಎರಡರಲಿ ಒಂದ ಕೊಲಲಾಗದು

ನಾನು
ಇದ್ದಂತೆ ನನ್ನ ಬಿಂಬ
ಹಿಗ್ಗದು ಕುಗ್ಗದು
ಹಿಗ್ಗಿರುವೆ ಹಾಗೇ…
ಕಂಡುದ ಹೇಳದು ಹಾಗೆ..

ನಾನು ಮಾಸಿಯೂ ಮಾಸದು ಬಿಂಬ
ನಾನು ಮಾದರೂ ಮಾದುದೇ..ಬಿಂಬ

ಏಸು ಬಿಂಬಗಳೋ….
ಎನ್ನೊಳಗಿಲ್ಲ ಒಂದೂ ಒಂದು
ಬಂದವು ಹೋದವು ಸರಳ
ನನ್ನಲ್ಲಿಯೇ ಇಲ್ಲದುದು ಇನ್ನೆಲ್ಲಿ..

ನಿನ್ನೊಳಗೆ ನಾನೋ ..
ನನ್ನೊಳಗೆ ನೀನೋ…
ಈ ತರ್ಕವೆಲ್ಲಾ ಪಕ್ಕಕ್ಕೆ ಇಡು
ಬಿಂಬಕೆ ಮತಿ ಇಲ್ಲ ಗತಿ ಇಲ್ಲ
ಎಂದೆಂದಿಗೂ ಅಹಂಗೆ

ಆಡಿ ಪೊಳ್ಳಾದೆ ನಾನು
ಆಡದೆ ದಿವ್ಯ ಅದು

ನಡೆಯಲು ಇರುವ ದಾರಿ
ಒಂದೇ ಪುರಾತನರ ನಡೆ

ಕನ್ನಡಿಯ ಕುರುಡಾಗಿಸಲಾರೆ

ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ ಇದೇನೆಂದರಿಯೆ.
-ಅಲ್ಲಮ

Previous post ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
Next post ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...

Comments 6

  1. ಮರಿಗೌಡ ಮಾಗಡಿ
    Sep 17, 2025 Reply

    ವಿಶೇಷ ವಿನ್ಯಾಸದ ಕವನ. ವಿವಿಧ ಶೈಲಿಯಲ್ಲಿ ನಡೆಸುತ್ತಿರುವ ನಿಮ್ಮ ಕಾವ್ಯ ಪ್ರಯೋಗ ನಿಜಕ್ಕೂ ಕುತೂಹಲ ಹುಟ್ಟಿಸುವಂತಿರುತ್ತವೆ ಸರ್.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 18, 2025 Reply

      ನಿಮ್ಮ ಓದಿಗೆ ಮನ ತುಂಬಿತು

  2. ನರೇಂದ್ರ ಚಿತ್ರದುರ್ಗ
    Sep 23, 2025 Reply

    ಅರಿವಿಗೆ ಬಾರದ ಅನುಭಾವವನ್ನು ನಿಮ್ಮಂತಹ ಕವಿಗಳ ಕವನಗಳಲ್ಲಿ ಹುಡುಕುವುದು ಎಂತಹ ವಿಪರ್ಯಾಸ ಎನ್ನುವಿರಾ? ವಚನಗಳಲ್ಲಿ ಅಡಗಿರುವ ಅಮೂಲ್ಯ ಅನುಭಾವವನ್ನು ಹೊರತೆಗೆದು ತೋರುವ ಪ್ರಯತ್ನ ಮತ್ತೆ ಅಲ್ಲೇ ಅಡಗಿಬಿಡುತ್ತದೆ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 25, 2025 Reply

      ಓದಿಗೆ ಸಂತಸ

      ದಾಟಲುಂಟೇ ಬಯಲ…??!!

  3. ಗಿರೀಶ್ ಜಾಗಿರದಾರ್
    Oct 2, 2025 Reply

    ಬಿಂಬ ತರ್ಕಗಳಾಚಿನದು. ‘ಬಿಂಬಕೆ ಮತಿ ಇಲ್ಲ ಗತಿ ಇಲ್ಲ’. ಇರುವುದೆಲ್ಲಾ ನನಗೆ, ಕೇವಲ ನನಗೆ!!!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Oct 9, 2025 Reply

      ಹೌದಲ್ವಾ ..ಓದಿಗೆ ಧನ್ಯವಾದಗಳು

Leave a Reply to ಗಿರೀಶ್ ಜಾಗಿರದಾರ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಮನಸ್ಸು
ಮನಸ್ಸು
September 7, 2020
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಈ ಕನ್ನಡಿ
ಈ ಕನ್ನಡಿ
March 6, 2024
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
Copyright © 2026 Bayalu