Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿನ ಅರಿವೆ ಕಳಚಿ!
Share:
Poems September 14, 2024 ಜಬೀವುಲ್ಲಾ ಎಂ.ಅಸದ್

ಸಾವಿನ ಅರಿವೆ ಕಳಚಿ!

ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!

ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!

ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!

ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!

Previous post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
Next post ಹಣತೆ ಸಾಕು
ಹಣತೆ ಸಾಕು

Related Posts

ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...
ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...

Comments 4

  1. ಮಧು ಬಿ.ಎನ್.
    Sep 17, 2024 Reply

    ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.

    • Zabiulla M Asad
      Sep 19, 2024 Reply

      ಧನ್ಯವಾದಗಳು ಸರ್ 🙏

  2. ಗಂಗಾಧರ ಜವಳೂರು
    Sep 19, 2024 Reply

    ‘ಕಡಲ ದಂಡೆಯಲಿ ಗೂಡು ಕಟ್ಟಿ
    ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.

  3. Harsha, Raichur
    Sep 22, 2024 Reply

    ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಗಣಾಚಾರ
ಗಣಾಚಾರ
August 8, 2021
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
Copyright © 2026 Bayalu