Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿನ ಅರಿವೆ ಕಳಚಿ!
Share:
Poems September 14, 2024 ಜಬೀವುಲ್ಲಾ ಎಂ.ಅಸದ್

ಸಾವಿನ ಅರಿವೆ ಕಳಚಿ!

ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!

ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!

ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!

ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!

Previous post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
Next post ಹಣತೆ ಸಾಕು
ಹಣತೆ ಸಾಕು

Related Posts

ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 4

  1. ಮಧು ಬಿ.ಎನ್.
    Sep 17, 2024 Reply

    ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.

    • Zabiulla M Asad
      Sep 19, 2024 Reply

      ಧನ್ಯವಾದಗಳು ಸರ್ 🙏

  2. ಗಂಗಾಧರ ಜವಳೂರು
    Sep 19, 2024 Reply

    ‘ಕಡಲ ದಂಡೆಯಲಿ ಗೂಡು ಕಟ್ಟಿ
    ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.

  3. Harsha, Raichur
    Sep 22, 2024 Reply

    ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ನಾನು ಯಾರು?
ನಾನು ಯಾರು?
December 8, 2021
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
Copyright © 2026 Bayalu