Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿನ ಅರಿವೆ ಕಳಚಿ!
Share:
Poems September 14, 2024 ಜಬೀವುಲ್ಲಾ ಎಂ.ಅಸದ್

ಸಾವಿನ ಅರಿವೆ ಕಳಚಿ!

ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!

ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!

ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!

ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!

Previous post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
Next post ಹಣತೆ ಸಾಕು
ಹಣತೆ ಸಾಕು

Related Posts

ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...
ಮಣ್ಣು ಮೆಟ್ಟಿದ ದಾರಿ
Share:
Poems

ಮಣ್ಣು ಮೆಟ್ಟಿದ ದಾರಿ

October 5, 2021 ಜ್ಯೋತಿಲಿಂಗಪ್ಪ
ಈ ಸಿಟ್ಟು ದ್ವೇಷ ಪ್ರೇಮ ಕಾಮ ಮದ… ಎಲ್ಲಾ ನಾನು ಹೊತ್ತು ಹೋಗುವನೇ… ಈ ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ ಇದೆಲ್ಲಾ ಮಣ್ಣಾಗುವುದು ಇದ್ದೇ ಇದೆ ನಾನು ಮಣ್ಣಾಗುವ...

Comments 4

  1. ಮಧು ಬಿ.ಎನ್.
    Sep 17, 2024 Reply

    ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.

    • Zabiulla M Asad
      Sep 19, 2024 Reply

      ಧನ್ಯವಾದಗಳು ಸರ್ 🙏

  2. ಗಂಗಾಧರ ಜವಳೂರು
    Sep 19, 2024 Reply

    ‘ಕಡಲ ದಂಡೆಯಲಿ ಗೂಡು ಕಟ್ಟಿ
    ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.

  3. Harsha, Raichur
    Sep 22, 2024 Reply

    ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..

Leave a Reply to ಮಧು ಬಿ.ಎನ್. Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಮಾಯದ ಗಾಯ
ಮಾಯದ ಗಾಯ
October 19, 2025
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಕಣ್ಣ ದೀಪ
ಕಣ್ಣ ದೀಪ
September 7, 2021
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
Copyright © 2025 Bayalu