Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿನ ಅರಿವೆ ಕಳಚಿ!
Share:
Poems September 14, 2024 ಜಬೀವುಲ್ಲಾ ಎಂ.ಅಸದ್

ಸಾವಿನ ಅರಿವೆ ಕಳಚಿ!

ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!

ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!

ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!

ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!

Previous post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
Next post ಹಣತೆ ಸಾಕು
ಹಣತೆ ಸಾಕು

Related Posts

ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...
ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...

Comments 4

  1. ಮಧು ಬಿ.ಎನ್.
    Sep 17, 2024 Reply

    ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.

    • Zabiulla M Asad
      Sep 19, 2024 Reply

      ಧನ್ಯವಾದಗಳು ಸರ್ 🙏

  2. ಗಂಗಾಧರ ಜವಳೂರು
    Sep 19, 2024 Reply

    ‘ಕಡಲ ದಂಡೆಯಲಿ ಗೂಡು ಕಟ್ಟಿ
    ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.

  3. Harsha, Raichur
    Sep 22, 2024 Reply

    ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..

Leave a Reply to Harsha, Raichur Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಭಾರ
ಭಾರ
October 6, 2020
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ನೆಮ್ಮದಿ
ನೆಮ್ಮದಿ
April 6, 2020
Copyright © 2025 Bayalu