Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆ ಸಾಕು
Share:
Poems September 14, 2024 ಜ್ಯೋತಿಲಿಂಗಪ್ಪ

ಹಣತೆ ಸಾಕು

ಬೆಳಕ ನೋಡಲಾಗದ ಕಣ್ಣು
ದೀಪ ಹಚ್ಚಿದರೆ ಕಣ್ಣು ಕತ್ತಲು
ಹಚ್ಚದಿರೆ ಹೃದಯ ಕತ್ತಲು

ದೀಪ ಬೆಳಗಿಸುವ ಕಷ್ಟ

ಕತ್ತಲೆಂಬುದು ಕತ್ತಲಾಗದು
ಬೆಳಕೆಂಬುದು ಬೆಳಕಾಗದು

ಏನೂ ಕೂಡಿಡದೆ
ಕಳೆಯುವುದು ಹೇಗೆ

ಈಗ
ಇರುವ ಸುಳ್ಳೇ ಅರಗಿಸಲಾಗಿಲ್ಲ
ಇನ್ನೇನು ಹೊಸಾ ಸುಳ್ಳು

ಬೆಟ್ಟದ
ತುದಿಯ ಬಂಡೆ
ಬಂಡೆಯ ಮೇಲೆ ನಿಂತಿರುವ
ಹೆಮ್ಮೆ
ಅಲುಗಾಡದೆ ಬಂಡೆ

ನಾನು ಸಾಯದೆ
ಕಾಣುವುದೇ ಬಯಲು

ಮತ್ತೇನೂ ಇಲ್ಲ ಸಾಯಲಿ

ಮುದ್ದಾದ ಮಿಥ್ಯ ಈ ದೇವರು

ಮನ ಮರೆತು
ಅಚಲವಾಗಿ ಹಾಯ್ಕು

ಮರೆತುದು ಏನು

ಈ ಕತ್ತಲು
ಬೆಳಗಿಸಲು ಒಂದು
ಹಣತೆ ಸಾಕು

ದೀಪ ಹಚ್ಚಲು ಗಾಳಿಗೆ
ಹೇಳಿರುವೆ.

Previous post ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
Next post ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!

Related Posts

ಗೇಣು ದಾರಿ
Share:
Poems

ಗೇಣು ದಾರಿ

July 10, 2023 ಜ್ಯೋತಿಲಿಂಗಪ್ಪ
ಮುಂದಿನ ಕಾಲು ಹಿಂದಕೆ ಬಾರದೇ ಹಿಂದಿನ ಕಾಲು ಮುಂದಕೆ ಬಾರದೇ ಹಿಂದು ಮುಂದು ಸಂತೆ ದಾರಿ ತನ್ನರಿವೇ ತನ್ನ ಕುರುಹು ತನ್ನ ಕುರುಹೇ ತನ್ನರಿವು ಹಿಂದು ಮುಂದಾದು ಪೂಜಿಸಿದೆ ಭಕ್ತಿ...
ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...

Comments 4

  1. ಲಹರಿ ಬೆಂಗಳೂರು
    Sep 19, 2024 Reply

    ತಮಂಧ ಘನವ ಓಡಿಸಲು ಹಣತೆ ಸಾಕು. ಬಯಲ ಅರಿಯಲು ‘ನಾನು’ ಸಾಯಲೇ ಬೇಕು… ಕವನ ಅರ್ಥಗರ್ಭಿತ.💥💥

  2. ಸಂತೋಷ ಕುಮಾರ್, ಸಿ
    Sep 22, 2024 Reply

    ದೇವರು ಅದ್ಭುತ ಸುಳ್ಳು ಅಂತ ಹೇಳುತ್ತಿದ್ದೆ, ‘ಮುದ್ದಾದ ಮಿಥ್ಯ’ ಅನ್ನೋದು ಇನ್ನೂ ಮುದ್ದಾಗಿದೆ ಸರ್😀

  3. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Sep 27, 2024 Reply

    ನಿಮ್ಮ ಓದಿಗಾಗಿ ಧನ್ಯವಾದಗಳು

  4. ಶ್ರೀಶೈಲ ಹಾದಿಮನಿ, ಅಮೆರಿಕ
    Oct 3, 2024 Reply

    ತುಂಬಾ ಚೆನ್ನಾಗಿ ರಚಿತವಾದ ಕವನಗಳು. ತಮ್ಮ ನಿರಂತರ ಸೇವೆಗೆ ಧನ್ಯವಾದಗಳು 💐🙏

Leave a Reply to ಸಂತೋಷ ಕುಮಾರ್, ಸಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಕುರುಹೇ ಬಯಲು
ಕುರುಹೇ ಬಯಲು
February 16, 2026
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
Copyright © 2026 Bayalu