Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆ ಸಾಕು
Share:
Poems September 14, 2024 ಜ್ಯೋತಿಲಿಂಗಪ್ಪ

ಹಣತೆ ಸಾಕು

ಬೆಳಕ ನೋಡಲಾಗದ ಕಣ್ಣು
ದೀಪ ಹಚ್ಚಿದರೆ ಕಣ್ಣು ಕತ್ತಲು
ಹಚ್ಚದಿರೆ ಹೃದಯ ಕತ್ತಲು

ದೀಪ ಬೆಳಗಿಸುವ ಕಷ್ಟ

ಕತ್ತಲೆಂಬುದು ಕತ್ತಲಾಗದು
ಬೆಳಕೆಂಬುದು ಬೆಳಕಾಗದು

ಏನೂ ಕೂಡಿಡದೆ
ಕಳೆಯುವುದು ಹೇಗೆ

ಈಗ
ಇರುವ ಸುಳ್ಳೇ ಅರಗಿಸಲಾಗಿಲ್ಲ
ಇನ್ನೇನು ಹೊಸಾ ಸುಳ್ಳು

ಬೆಟ್ಟದ
ತುದಿಯ ಬಂಡೆ
ಬಂಡೆಯ ಮೇಲೆ ನಿಂತಿರುವ
ಹೆಮ್ಮೆ
ಅಲುಗಾಡದೆ ಬಂಡೆ

ನಾನು ಸಾಯದೆ
ಕಾಣುವುದೇ ಬಯಲು

ಮತ್ತೇನೂ ಇಲ್ಲ ಸಾಯಲಿ

ಮುದ್ದಾದ ಮಿಥ್ಯ ಈ ದೇವರು

ಮನ ಮರೆತು
ಅಚಲವಾಗಿ ಹಾಯ್ಕು

ಮರೆತುದು ಏನು

ಈ ಕತ್ತಲು
ಬೆಳಗಿಸಲು ಒಂದು
ಹಣತೆ ಸಾಕು

ದೀಪ ಹಚ್ಚಲು ಗಾಳಿಗೆ
ಹೇಳಿರುವೆ.

Previous post ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
Next post ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!

Related Posts

ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...
ಸಂತೆಯ ಸಂತ
Share:
Poems

ಸಂತೆಯ ಸಂತ

September 7, 2020 ಜ್ಯೋತಿಲಿಂಗಪ್ಪ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ ಕಣ್ಣಿಗೆ ಕರುಳು ಇರಬಾರದು ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ ಈ ಮೂರು ಮೊಳದ...

Comments 4

  1. ಲಹರಿ ಬೆಂಗಳೂರು
    Sep 19, 2024 Reply

    ತಮಂಧ ಘನವ ಓಡಿಸಲು ಹಣತೆ ಸಾಕು. ಬಯಲ ಅರಿಯಲು ‘ನಾನು’ ಸಾಯಲೇ ಬೇಕು… ಕವನ ಅರ್ಥಗರ್ಭಿತ.💥💥

  2. ಸಂತೋಷ ಕುಮಾರ್, ಸಿ
    Sep 22, 2024 Reply

    ದೇವರು ಅದ್ಭುತ ಸುಳ್ಳು ಅಂತ ಹೇಳುತ್ತಿದ್ದೆ, ‘ಮುದ್ದಾದ ಮಿಥ್ಯ’ ಅನ್ನೋದು ಇನ್ನೂ ಮುದ್ದಾಗಿದೆ ಸರ್😀

  3. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Sep 27, 2024 Reply

    ನಿಮ್ಮ ಓದಿಗಾಗಿ ಧನ್ಯವಾದಗಳು

  4. ಶ್ರೀಶೈಲ ಹಾದಿಮನಿ, ಅಮೆರಿಕ
    Oct 3, 2024 Reply

    ತುಂಬಾ ಚೆನ್ನಾಗಿ ರಚಿತವಾದ ಕವನಗಳು. ತಮ್ಮ ನಿರಂತರ ಸೇವೆಗೆ ಧನ್ಯವಾದಗಳು 💐🙏

Leave a Reply to ಸಂತೋಷ ಕುಮಾರ್, ಸಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ನಾನು… ನನ್ನದು
ನಾನು… ನನ್ನದು
July 4, 2021
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಒಳಗಣ ಮರ
ಒಳಗಣ ಮರ
March 12, 2022
Copyright © 2025 Bayalu