Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೊಂದು ನೀರ್ಗುಳ್ಳೆ
Share:
Poems September 6, 2023 ಕೆ.ಆರ್ ಮಂಗಳಾ

ನಾನೊಂದು ನೀರ್ಗುಳ್ಳೆ

ಕಾಲದ ಊದುಗೊಳವೆಯಲಿ
ನಿರಂತರವಾಗಿ ಉಕ್ಕುತಿವೆ
ಅನಂತಾನಂತ ನೀರ್ಗುಳ್ಳೆ
ಎಲ್ಲಕೂ ಒಂದೇ ಹುಟ್ಟು
ಒಂದೇ ಬಗೆಯ ಸಂಯೋಜನೆ

ನಾ ಬೇರೆ ನೀ ಬೇರೆ
ಅಂವ ಬೇರೆ ಇಂವ ಬೇರೆ
ನಾ ಮೇಲು ನೀ ಕೆಳಗೆ
ಅಕಿ ಹೆಚ್ಚು ಇಕಿ ಕಡಿಮೆ
ಗುಳ್ಳೆಯ ತೆಳು ಗೆರೆಯ ಆಚೀಚೆ
ಜಗದುದ್ದಗಲಕ್ಕೂ ತಾರತಮ್ಯ

ನೋಡುನೋಡುತ್ತಲೇ
ಇಲ್ಲೇ ಇದ್ದದ್ದು, ಅತ್ತ ಸರಿದದ್ದು
ಈಗ ಚಿಮ್ಮಿದ್ದು, ಮೇಲೆ ಹಾರಿದ್ದು
ಇಲ್ಲವಾಗುವ ನೀರ್ಗುಳ್ಳೆಗಳಲ್ಲಿ
ಯಾವುದಕೆ ಪೈಪೋಟಿ?
ಹಿರಿದಾದರೇನು, ಕಿರಿದಾದರೇನು
ಬಣ್ಣ ಯಾವುದಾದರೇನು
ಅಮರತ್ವವುಂಟೆ ಗುಳ್ಳೆಗೆ?

ಮುಟ್ಟಿದರೆ ಫಟ್ಟೆನುವ ಗುಳ್ಳೆ
ತನ್ನಲ್ಲಿ ತಾನೇ ಊದೆಬ್ಬಿಸುವ
ಮೋಹ, ಮದ, ಮತ್ಸರ
ದ್ವೇಷ, ದುರ್ಗುಣಗಳ
ಒಂದಲ್ಲಾ ಎರಡಲ್ಲಾ
ನೂರಾರು ಬುರುಜುಗಳು
ಗುಳ್ಳೆಯೊಳಗಣ ಗುಳ್ಳೆಗಳ
ಈ ಮೆಳ್ಳಗಣ್ಣಿನ ನೋಟಕೆ
ಕಂಡೀತೇ ಲೋಕ ಸತ್ಯ?

ನಿನ್ನೊಳು ನೀನಿರು ಎನುವ
ಗುರು ಸೂತ್ರವ ಹಿಡಿದು
ಈ ಪರಕಾಯ ಪೊರೆಗಳ
ಹಂಗು ಕಳಚಲೇ ಬೇಕು…
ಕೊರಗಲಿಕೆ, ಬೇಯಲಿಕೆ
ಸಮಯವೆಲ್ಲಿದೆ ಎನುವ
ನಶ್ವರತೆಯ ಸತ್ಯವನು
ಕಣ್ಬಿಟ್ಟು ನೋಡಲೇ ಬೇಕು.

ಇಬ್ಬನಿಯ ಹನಿ ಎನ್ನಿ
ಮಿನುಗಿ ಮರೆಯಾಗೋ ಮಿಂಚೆನ್ನಿ,
ಭ್ರಮೆಯೆನ್ನಿ, ಕನಸೆನ್ನಿ,
ಮೋಡದ ನೆರಳೆನ್ನಿ,
ಅಲೆಯೆನ್ನಿ, ಇಂಚರವೆನ್ನಿ,
ಬೀಸಿ ಹೋಗುವ ಗಾಳಿಯೆನ್ನಿ,
ಹಬೆ ಎನ್ನಿ, ಬಾಷ್ಪವೆನ್ನಿ…
ಏನಾದರೂ ಅನ್ನಿ ಈ ಗುಳ್ಳೆಗೆ

ಅನಂತ ಕಾಲದಲಿ, ಅನಂತ ವಸ್ತುವಿನಲಿ
ಅನಂತ ಜಾಗದಲಿ
ಅನಂತಾನಂತ ಗುಳ್ಳೆಗಳಲಿ
ಕ್ಷಣ ಮಾತ್ರವೇ ಇರುವ,
ಯಾವಾಗ ಬೇಕಾದರೂ ಸಿಡಿವ
ನೀರ ನಿರ್ಮಿತಿ ಮಾತ್ರವೇ
ನಾನೆನುವ ನಿಜವು ಮರೆಯದಿರಲಿ.

Previous post ಹಾಯ್ಕು
ಹಾಯ್ಕು
Next post ವಚನ – ಚಿಂತನ
ವಚನ – ಚಿಂತನ

Related Posts

ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...
ಸಂಭ್ರಮಿಸುವೆ ಬುದ್ದನಾಗಿ
Share:
Poems

ಸಂಭ್ರಮಿಸುವೆ ಬುದ್ದನಾಗಿ

August 11, 2025 ಜಬೀವುಲ್ಲಾ ಎಂ.ಅಸದ್
ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ನಾನು ಯಾರು?
ನಾನು ಯಾರು?
December 8, 2021
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಗಣಾಚಾರ
ಗಣಾಚಾರ
August 8, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
Copyright © 2026 Bayalu