Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಿಂಬ-ಪ್ರತಿಬಿಂಬ
Share:
Poems February 5, 2020 ಜ್ಯೋತಿಲಿಂಗಪ್ಪ

ಬಿಂಬ-ಪ್ರತಿಬಿಂಬ

ನೀನು
ಅಲ್ಲಿ ಉಂಟೆಂದು
ನಾನು
ಇಲ್ಲಿ ತೆವಳಿ ತೆವಳಿ ಬಳಲಿದೆ
ನೀನು ಎಲ್ಲಿರುವೆ
ಎಂಬುದು ನನ್ನ ಕಣ್ಣರಿವು
ಎಂಬುದ
ನಾನಲ್ಲದೆ ನೀನರಿದೆಯಾ ಹೇಳೇ
ಅಕ್ಕಾ
ಬೆಳಕ ತಿಂದಲ್ಲದೆ ಕನ್ನಡಿಯಲಿ ಉದಯಿಸದು ಬಿಂಬ
ಅರಿದ ಅರಿವನು ಉಪಮಿಸಬಾರದು

ತನ್ನರಿವ ತಾನುಣದೆ ಅನ್ಯರಿಗೆ
ಉಣಬಡಿಸುವ ಕೇಡು ನನದಲ್ಲ

ತನ್ನರಿವ ತಾನರಿಯದಾ ಕತ್ತಲು
ಇಳಿದು ಬಾರದಾ ಅರಿವು ತಾನರಿಯದೆ

ಒಳಗಣ ಜ್ಯೋತಿಯೂ
ಹೊರಗಣ ಕತ್ತಲೂ ಸಮನಿಸವು.

****************

ಆ ಮರದ ಕಾಯಲಿ ನೀರು
ತುಂಬಿದೆ ಹೇಗೆಂಬುದ ಎಚ್ಚರದಲಿ
ಹೇಳು ಪುರಾಣ ಕಟ್ಟಿಡು

ಅರಿಯುವ ಅರಿವ ಕಿತ್ತಿಡಲಾರೆ
ಒಣಹುಲ್ಲಿಗೆ ಬೆಂಕಿ ಇಟ್ಟು
ಹಸಿ ಹುಲ್ಲಲಿ ನಂದಿಸದಿರು

ನನ್ನ ಬಿಂಬ ನಿನ್ನಲಿ ಮೂಡದಿರೆ
ನಿನ್ನ ಕನ್ನಡಿ ಎಂಬುವವರು
ಯಾರೇ ಅಕ್ಕಾ
ನಾನಲ್ಲವೇ ನಿನ್ನ ಬಿಂಬ

ಇರಲಿ ಈಗ ಹೇಳು
ಲೌಕಿಕ ಪಾರಮಾರ್ಥಿಕ
ಜ್ಞಾನ ಕರ್ಮ
ಯಾವುದು

ನನ್ನ ನೆರಳು ನನಗಂಟದು
ಕಣ್ಣ ಮುಚ್ಚದು ಕನ್ನಡಿ ಬಿಂಬ
ಕಣ್ಣ ಮುಚ್ಚಿದರೆ ಕಾಣದು ಬಿಂಬ

ನನ್ನ ಹುಟ್ಟಿನೊಂದಿದೆ ಈ ಜೀನ್ಸ್
ನಕ್ಷತ್ರ ಸುಡುವ ಕಣ್ಣ ಹೊಳಪು.

Previous post ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
Next post ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...

Comments 2

  1. Geetha Jayraj
    Feb 6, 2020 Reply

    ಒಳಗಣ ಜ್ಯೋತಿಯೂ, ಹೊರಗಣ ಕತ್ತಲು ಸಮನಿಸವು! ಆಹಾ!!

  2. ಕವಿತಾ ಲಕ್ಷ್ಮೇಶ್ವರ
    Feb 9, 2020 Reply

    ಮತ್ತೆ ಕವನಗಳು ಬಯಲಿನಲ್ಲಿ ಶುರುವಾಗಿದ್ದು ತುಂಬಾ ಖುಷಿಯಾಯಿತು. ಇಲ್ಲಿಯ ಕವನಗಳು ವಿಶಿಷ್ಟವಾಗಿರುತ್ತವೆ. ಹೊಸ ದಿಕ್ಕಿನತ್ತ ಬೊಟ್ಟು ಮಾಡುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಸಂತೆಯ ಸಂತ
ಸಂತೆಯ ಸಂತ
September 7, 2020
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
Copyright © 2026 Bayalu