Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಿಂಬ-ಪ್ರತಿಬಿಂಬ
Share:
Poems February 5, 2020 ಜ್ಯೋತಿಲಿಂಗಪ್ಪ

ಬಿಂಬ-ಪ್ರತಿಬಿಂಬ

ನೀನು
ಅಲ್ಲಿ ಉಂಟೆಂದು
ನಾನು
ಇಲ್ಲಿ ತೆವಳಿ ತೆವಳಿ ಬಳಲಿದೆ
ನೀನು ಎಲ್ಲಿರುವೆ
ಎಂಬುದು ನನ್ನ ಕಣ್ಣರಿವು
ಎಂಬುದ
ನಾನಲ್ಲದೆ ನೀನರಿದೆಯಾ ಹೇಳೇ
ಅಕ್ಕಾ
ಬೆಳಕ ತಿಂದಲ್ಲದೆ ಕನ್ನಡಿಯಲಿ ಉದಯಿಸದು ಬಿಂಬ
ಅರಿದ ಅರಿವನು ಉಪಮಿಸಬಾರದು

ತನ್ನರಿವ ತಾನುಣದೆ ಅನ್ಯರಿಗೆ
ಉಣಬಡಿಸುವ ಕೇಡು ನನದಲ್ಲ

ತನ್ನರಿವ ತಾನರಿಯದಾ ಕತ್ತಲು
ಇಳಿದು ಬಾರದಾ ಅರಿವು ತಾನರಿಯದೆ

ಒಳಗಣ ಜ್ಯೋತಿಯೂ
ಹೊರಗಣ ಕತ್ತಲೂ ಸಮನಿಸವು.

****************

ಆ ಮರದ ಕಾಯಲಿ ನೀರು
ತುಂಬಿದೆ ಹೇಗೆಂಬುದ ಎಚ್ಚರದಲಿ
ಹೇಳು ಪುರಾಣ ಕಟ್ಟಿಡು

ಅರಿಯುವ ಅರಿವ ಕಿತ್ತಿಡಲಾರೆ
ಒಣಹುಲ್ಲಿಗೆ ಬೆಂಕಿ ಇಟ್ಟು
ಹಸಿ ಹುಲ್ಲಲಿ ನಂದಿಸದಿರು

ನನ್ನ ಬಿಂಬ ನಿನ್ನಲಿ ಮೂಡದಿರೆ
ನಿನ್ನ ಕನ್ನಡಿ ಎಂಬುವವರು
ಯಾರೇ ಅಕ್ಕಾ
ನಾನಲ್ಲವೇ ನಿನ್ನ ಬಿಂಬ

ಇರಲಿ ಈಗ ಹೇಳು
ಲೌಕಿಕ ಪಾರಮಾರ್ಥಿಕ
ಜ್ಞಾನ ಕರ್ಮ
ಯಾವುದು

ನನ್ನ ನೆರಳು ನನಗಂಟದು
ಕಣ್ಣ ಮುಚ್ಚದು ಕನ್ನಡಿ ಬಿಂಬ
ಕಣ್ಣ ಮುಚ್ಚಿದರೆ ಕಾಣದು ಬಿಂಬ

ನನ್ನ ಹುಟ್ಟಿನೊಂದಿದೆ ಈ ಜೀನ್ಸ್
ನಕ್ಷತ್ರ ಸುಡುವ ಕಣ್ಣ ಹೊಳಪು.

Previous post ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
Next post ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ

Related Posts

ಬೆಳಕಲಿ ದೀಪ
Share:
Poems

ಬೆಳಕಲಿ ದೀಪ

December 8, 2021 ಜ್ಯೋತಿಲಿಂಗಪ್ಪ
ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 2

  1. Geetha Jayraj
    Feb 6, 2020 Reply

    ಒಳಗಣ ಜ್ಯೋತಿಯೂ, ಹೊರಗಣ ಕತ್ತಲು ಸಮನಿಸವು! ಆಹಾ!!

  2. ಕವಿತಾ ಲಕ್ಷ್ಮೇಶ್ವರ
    Feb 9, 2020 Reply

    ಮತ್ತೆ ಕವನಗಳು ಬಯಲಿನಲ್ಲಿ ಶುರುವಾಗಿದ್ದು ತುಂಬಾ ಖುಷಿಯಾಯಿತು. ಇಲ್ಲಿಯ ಕವನಗಳು ವಿಶಿಷ್ಟವಾಗಿರುತ್ತವೆ. ಹೊಸ ದಿಕ್ಕಿನತ್ತ ಬೊಟ್ಟು ಮಾಡುತ್ತವೆ.

Leave a Reply to Geetha Jayraj Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಹುಡುಕಾಟ
ಹುಡುಕಾಟ
July 21, 2024
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ನೆಲದ ನಿಧಾನ
ನೆಲದ ನಿಧಾನ
April 29, 2018
ಸನಾತನ ಧರ್ಮ
ಸನಾತನ ಧರ್ಮ
October 10, 2023
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
Copyright © 2025 Bayalu