Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಯಲಾದ ದೇವರು
Share:
Poems January 15, 2026 ಜ್ಯೋತಿಲಿಂಗಪ್ಪ

ಬಯಲಾದ ದೇವರು

ಈ
ದೇವರು
ಒಂದು ಕನಸು

ನಿಜವೂ ಅಹುದು
ಸುಳ್ಳೂ ಅಹುದು

ಕಲ್ಪನೆಯ ಹಾಗೆ
ಕಾಣುವುದು ಕಾಣದು

ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ

ಕೇಡೆಲ್ಲವೂ ನನ್ನವು

ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ

ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು

ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು

ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ

ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…

Previous post ಹುಡುಕಾಟ
ಹುಡುಕಾಟ
Next post ನಾನೆಂಬ ನಿನಾದ…
ನಾನೆಂಬ ನಿನಾದ…

Related Posts

ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...
ಮುಖ- ಮುಖವಾಡ
Share:
Poems

ಮುಖ- ಮುಖವಾಡ

February 7, 2021 ಕೆ.ಆರ್ ಮಂಗಳಾ
ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು ಕೈಯಿಂದ ತಡವಿಕೊಳ್ಳುತ್ತೇನೆ ಇದು ಮುಖವಾಡವೋ ಇಲ್ಲಾ ನನ್ನ ಮುಖವೋ? ಕನ್ನಡಿ ನೋಡುವಾಗೆಲ್ಲಾ ದಿಗಿಲಾಗುತ್ತದೆ ನಾನು ಅಂದುಕೊಂಡಿರುವಂತೆ...

Comments 3

  1. Vijaya Bagevadi
    Jan 20, 2026 Reply

    ಸುಳ್ಳು ಕತೆಗಳ ಸತ್ಯದ ಹುಡುಕಾಟ😟

  2. Dr. Umesh Soraba
    Jan 23, 2026 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವಿತೆಗಳಿಗೆ ಭಾವಲೋಕದ ಸತ್ಯ-ಮಿಥ್ಯಗಳೊಂದಿಗೆ ಸೆಣಸುವ ಆರೋಗ್ಯಕರ ಜವಾಬ್ದಾರಿಯ ನಡೆಯೊಂದು ಇದ್ದೇ ಇದೆ. ಇದು ‘ಬಯಲಾದ ದೇವರು’ ಕವಿತೆಯಲ್ಲೂ ಮುಂದುವರೆದಿರುವುದನ್ನು ಕಾಣಬಹುದು… ದೇವರ ಅಸ್ತಿತ್ವದ ಕುರಿತು ಈಗಾಗಲೇ ಇರುವ ಪ್ರಚಲಿತ ವ್ಯಾಖ್ಯಾನ-ವಿವರಣೆಗಳ ಮಧ್ಯೆ ಈ ಕವಿತೆಯಲ್ಲಿ ದೇವರು ಕುರಿತು ಆಲೋಚಿಸಿರುವ ಬಗೆ ಭಿನ್ನವೂ ಆಪ್ತವೂ ಆದುದು. ಈ ದೇವರನ್ನು ನಂಬಿದರೂ ಕೇಡಿಲ್ಲ…. ನಂಬದಿರಲೂ ಕೇಡಿಲ್ಲ…. ಒಣಗಿದ ಎಲೆ ಉದುರಲು ಕಾಯುತಿರುವ ಚಿಗುರಿನಂತೆ ಈ ದೇವರು ಮರಮರಳಿ ಹೊಸತಾಗುವ ರೂಪಕ. ಹುಟ್ಟು- ಸಾವುಗಳ ಮಧ್ಯೆ ಬದುಕಿನ ಸ್ಥಿತಿಸ್ಥಾಪಕತೆಗೆ ಕಾರಕ… ಹೀಗೆ ದೇವರು ಮತ್ತು ದೇವರ ಅಸ್ತಿತ್ವ ಮಾನವ ಪ್ರಜ್ಞೆಯಲ್ಲಿ ನಿಂತ ಬಗೆಯನ್ನು ಕವಿ ಇಲ್ಲಿ ಭಾವಿಸಿದ ಮತ್ತು ಭಾಷ್ಯೀಕರಿಸಿದ ಬಗೆ ವಿಶಿಷ್ಟವಾಗಿದೆ. ಕವಿಗೆ ಅಭಿನಂದನೆಗಳು.

  3. ನವೀನ್ ಕುಮಾರ್, ಬೆಟಗೇರಿ
    Feb 5, 2026 Reply

    ನಿಜ, ಸುಳ್ಳು ಎರಡೂ ಆಗಿರುವುದರಿಂದಲೇ ಆ ದೇವರು ಮನುಷ್ಯನ ಹಳಬಂಡ ಕನಸು, ಕವನ ಚೆನ್ನಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಮರೆತೆ…
ಮರೆತೆ…
July 4, 2022
ವೀರ
ವೀರ
April 29, 2018
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
Copyright © 2026 Bayalu