Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರವಲು ಮನೆ…
Share:
Poems August 10, 2023 ಕೆ.ಆರ್ ಮಂಗಳಾ

ಎರವಲು ಮನೆ…

ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ
ಉರಿದುರಿದು ಬೂದಿಯಾಗಿತ್ತು
ಪೇರಿಸಿ ಇಟ್ಟ ಸಿರಿ-ಸಂಪತ್ತು
ಆರಿಸ ಹೋದರೆ ಕೈ ಸುಟ್ಟಿತ್ತು
ಹಲುಬಿಹೆನೆಂದರೆ ದನಿ ಅಡಗಿತ್ತು
ಕೂಗಲು ಹೋದರೆ ಕಂಠ ಒಡೆದಿತ್ತು

ಹೊತ್ತಿ ಉರಿದಿತ್ತು ತಲೆ ಮೇಲಿನ ಸೂರು
ಕರಕಲಾದವು ಐದು ತೊಲೆಗಳು
ವಿಷಯಗಳಾಸರೆ ಕುಸಿಯತೊಡಗಿತ್ತು
ನಿಂತ ನೆಲವೇ ಜಾರುತಲಿತ್ತು
ಓಡಿಹೆನೆಂದರೆ ಬೀದಿಗಳಿಲ್ಲ
ಅವಿತುಕೊಳ್ಳಲು ಒಂದೂ ಗಲ್ಲಿಗಳಿಲ್ಲ

ಎತ್ತಲೋ ಓಡಿತು ಕಿಚ್ಚಿಗೆ ಅಂಜಿ
ದೂಳೆಬ್ಬಿಸಿ ಕಾಲ್ಕೆದರುತಲಿದ್ದ
ನನ್ನೊಳಗಿನ ಮದವೇರಿದ ಗೂಳಿ
ದೂಳುಕಟ್ಟಿದ ನೋಟಗಳಿಲ್ಲ
ಚಿತ್ತ ಭ್ರಾಂತಿಯ ರೂಪಗಳಿಲ್ಲ
ದಿಟ್ಟಿಸಲಿಕ್ಕೆ ಎದುರೆಂಬುದೇ ಇಲ್ಲ

ಭಸ್ಮವಾಗಲು ಮನೆ ಕಣ್ಣೆದುರಲ್ಲೇ
ಮೂಕವಾಯಿತು ಮನ ಒಳಗಲ್ಲೇ
ಕೂಡಿಹೆನೆಂದರೆ ಆತ್ಮ ಬೇರಿಲ್ಲ
ಹಿಡಿದಿಡಲು ದೇಹ ಉಳಿಯುವುದಿಲ್ಲ
ವೇದಿಕೆ ಏರಲು ವೇಷಗಳಿಲ್ಲ
ಬಣ್ಣ ಹಚ್ಚಲು ಮುಖವೇ ಇಲ್ಲ!

ಗುಪ್ತ ನಿಧಿಯ ಸಂಚಯ ಕೆಡಿಸಿ,
ತೋರುವ ಜಗದ ಸಂಚನು ತಿಳಿಸಿ
ನಂಬಿದ ಗುರುವೇ ಕಿಚ್ಚನ್ನಿಟ್ಟ
ಬಯಲ ಬಾಳಿಗೆ ಮುನ್ನುಡಿ ಬರೆದ
ಭಾವಗಳಿಲ್ಲ, ಜಾಲಗಳಿಲ್ಲ
ನೋಟಗಳಿಲ್ಲ, ಕೂಟಗಳಿಲ್ಲ…

ಎರವಲು ಮನೆಯ ಋಣ ಹರಿದಿತ್ತು
ಜಗದ ಜಗುಲಿಯಲಿ ಬೆಳಕೊಂದಿತ್ತು.

Previous post ಯಾಕೀ ಗೊಡವೆ?
ಯಾಕೀ ಗೊಡವೆ?
Next post ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ

Related Posts

ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...

Comments 1

  1. ಪೆರೂರು ಜಾರು, ಉಡುಪಿ
    Aug 16, 2023 Reply

    ಬಯಲು ಎರವಲೊಳಗೊ
    ಎರವಲು ಗುರುವೊಳಗೊ
    ಬಯಲು ಗುರುವೆರಡು ಎರವಲ
    ಬೂದಿ ಮುಚ್ಚಿದ ಕಿಚ್ಚಿನೊಳಗೊ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ನಾನೆಂಬ ನಿನಾದ…
ನಾನೆಂಬ ನಿನಾದ…
January 15, 2026
ಗೇಣು ದಾರಿ
ಗೇಣು ದಾರಿ
July 10, 2023
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅಂದು-ಇಂದು
ಅಂದು-ಇಂದು
December 8, 2021
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
Copyright © 2026 Bayalu