Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೆದುರು ನಾ…
Share:
Poems March 6, 2024 ಕೆ.ಆರ್ ಮಂಗಳಾ

ನನ್ನೆದುರು ನಾ…

ಅದೇಕೋ ಮೊನ್ನೆ ಮೊನ್ನೆ
ಸಂತೆ ತೋರುವೆ, ಜಾತ್ರೆ ನೋಡುವೆ
ನಡಿ ನನ್ನೊಡನೆ ಎಂದ ಗುರು
ಹಿಗ್ಗಿನಲಿ, ಗೆಲುವಿನಲಿ
ಚೆಂದದ ಸಿಂಗಾರದಲಿ
ಹೊರಟಿತ್ತು ನನ್ನ ಮೆರವಣಿಗೆ
ಸಂಭ್ರಮವೇನು, ಕುತೂಹಲಗಳೇನು
ಪ್ರಶ್ನೆಗಳ ಸುರಿಮಳೆಯೇನು…

ಆತನ ದಾಪುಗಾಲಿಗೆ ಸಮವೇ
ನನ್ನ ಪುಟ್ಟ ಹೆಜ್ಜೆ
ಸೋಲುತಿದ್ದವು… ಎಷ್ಟುದ್ದದ ದಾರಿ…
ಸಾಕೆನಿಸಿ ದಣಿವಾಗಿ ಅಲ್ಲಲ್ಲಿ ನಿಂತಾಗ
ಕತೆಯ ನೇಯುತ ನಡೆಸುತಿದ್ದ
ದಣಿವ ಮರೆಸುತ್ತಾ…

ಯಾರ ಮಾತೂ ಯಾರಿಗೂ ಕೇಳದ
ಜನಜಂಗುಳಿಯ ಮುಂದೆ…
ಬಂದು ನಿಂತದ್ದೇ ತಿಳಿಯಲಿಲ್ಲ
ಗೌಜಿನಲಿ ಕಳೆದೀಯ,
ತಪ್ಪಿಸಿಕೊಂಡು ಅಲೆದೀಯ
ಜೋಪಾನವೆನುತಾ ಕೈಯ ಬಿಟ್ಟಿದ್ದಾ…

ಯಾರಿವರು ನೆರೆದವರು
ನಂಟರು, ಗುರುತಿನವರು
ಯಾರಾದರೂ ಇದ್ದಾರೆಯೇ
ಕತ್ತು ಹೊರಳಿಸಿದಲೆಲ್ಲಾ
ಕಣ್ಣಿಟ್ಟು ದಿಟ್ಟಿಸಿದಡಲೆಲ್ಲಾ
ಅರೆ, ನನ್ನದೇ ನೋಟ!!

ಮೈಯು ಬೆವತಿತ್ತು, ಎದೆಯು ನಡುಗಿತ್ತು
ಎಲ್ಲ ಮುಖಗಳಲೂ ನನ್ನದೇ ಬಿಂಬ
ಮರೆವೋ… ಅರಿವೋ…
ಭ್ರಮೆಯ ಹಿಂದಿತ್ತು
ನಾನು, ನಾನು, ನಾನು…
ಕನ್ನಡಿಯ ಕೋಣೆಯಲಿ
ಸಿಕ್ಕಿ ಬಿದ್ದಿಹ ಸತ್ಯ ಕಣ್ಣೆದುರೆ ತೆರೆದಿತ್ತು…
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಯದೋ?

Previous post ಈ ಕನ್ನಡಿ
ಈ ಕನ್ನಡಿ
Next post ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ

Related Posts

ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...

Comments 1

  1. ಮುಗದ
    Mar 20, 2024 Reply

    ಹುಡುಕುವದು ನನ್ನೊಳಗೆ ಇದೆ ಎಂಬುದು ತಿಳಿಯದೆ ಕಾಡು ಮೇಡುಗಳನ್ನೆಲ್ಲ ಸುತ್ತಿ ಅಲೆದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
Copyright © 2026 Bayalu