Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೆದುರು ನಾ…
Share:
Poems March 6, 2024 ಕೆ.ಆರ್ ಮಂಗಳಾ

ನನ್ನೆದುರು ನಾ…

ಅದೇಕೋ ಮೊನ್ನೆ ಮೊನ್ನೆ
ಸಂತೆ ತೋರುವೆ, ಜಾತ್ರೆ ನೋಡುವೆ
ನಡಿ ನನ್ನೊಡನೆ ಎಂದ ಗುರು
ಹಿಗ್ಗಿನಲಿ, ಗೆಲುವಿನಲಿ
ಚೆಂದದ ಸಿಂಗಾರದಲಿ
ಹೊರಟಿತ್ತು ನನ್ನ ಮೆರವಣಿಗೆ
ಸಂಭ್ರಮವೇನು, ಕುತೂಹಲಗಳೇನು
ಪ್ರಶ್ನೆಗಳ ಸುರಿಮಳೆಯೇನು…

ಆತನ ದಾಪುಗಾಲಿಗೆ ಸಮವೇ
ನನ್ನ ಪುಟ್ಟ ಹೆಜ್ಜೆ
ಸೋಲುತಿದ್ದವು… ಎಷ್ಟುದ್ದದ ದಾರಿ…
ಸಾಕೆನಿಸಿ ದಣಿವಾಗಿ ಅಲ್ಲಲ್ಲಿ ನಿಂತಾಗ
ಕತೆಯ ನೇಯುತ ನಡೆಸುತಿದ್ದ
ದಣಿವ ಮರೆಸುತ್ತಾ…

ಯಾರ ಮಾತೂ ಯಾರಿಗೂ ಕೇಳದ
ಜನಜಂಗುಳಿಯ ಮುಂದೆ…
ಬಂದು ನಿಂತದ್ದೇ ತಿಳಿಯಲಿಲ್ಲ
ಗೌಜಿನಲಿ ಕಳೆದೀಯ,
ತಪ್ಪಿಸಿಕೊಂಡು ಅಲೆದೀಯ
ಜೋಪಾನವೆನುತಾ ಕೈಯ ಬಿಟ್ಟಿದ್ದಾ…

ಯಾರಿವರು ನೆರೆದವರು
ನಂಟರು, ಗುರುತಿನವರು
ಯಾರಾದರೂ ಇದ್ದಾರೆಯೇ
ಕತ್ತು ಹೊರಳಿಸಿದಲೆಲ್ಲಾ
ಕಣ್ಣಿಟ್ಟು ದಿಟ್ಟಿಸಿದಡಲೆಲ್ಲಾ
ಅರೆ, ನನ್ನದೇ ನೋಟ!!

ಮೈಯು ಬೆವತಿತ್ತು, ಎದೆಯು ನಡುಗಿತ್ತು
ಎಲ್ಲ ಮುಖಗಳಲೂ ನನ್ನದೇ ಬಿಂಬ
ಮರೆವೋ… ಅರಿವೋ…
ಭ್ರಮೆಯ ಹಿಂದಿತ್ತು
ನಾನು, ನಾನು, ನಾನು…
ಕನ್ನಡಿಯ ಕೋಣೆಯಲಿ
ಸಿಕ್ಕಿ ಬಿದ್ದಿಹ ಸತ್ಯ ಕಣ್ಣೆದುರೆ ತೆರೆದಿತ್ತು…
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಯದೋ?

Previous post ಈ ಕನ್ನಡಿ
ಈ ಕನ್ನಡಿ
Next post ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ

Related Posts

ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...
ನೋಟದ ಕೂಟ…
Share:
Poems

ನೋಟದ ಕೂಟ…

May 10, 2023 ಕೆ.ಆರ್ ಮಂಗಳಾ
ಕಾಣುವುದೇ ಒಂದು ನೋಟ ಹೇಳುವುದೇ ಬೇರೊಂದು ಉಸಿರ ಘಮಲಲಿ ಇಲ್ಲಾ ಹಿಡಿದ ವಾಸನೆಯ ಕುರುಹು ಕಿವಿಗೆ ಬಿದ್ದ ಶಬ್ದಕೂ ಕೇಳಿಸಿಕೊಂಡುದಕೂ ಕಾಣಲಿಲ್ಲ ಸಾಮ್ಯತೆ ನಾಲಿಗೆ ರುಚಿಸಿದ್ದಕ್ಕೂ...

Comments 1

  1. ಮುಗದ
    Mar 20, 2024 Reply

    ಹುಡುಕುವದು ನನ್ನೊಳಗೆ ಇದೆ ಎಂಬುದು ತಿಳಿಯದೆ ಕಾಡು ಮೇಡುಗಳನ್ನೆಲ್ಲ ಸುತ್ತಿ ಅಲೆದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಮನಸ್ಸು
ಮನಸ್ಸು
September 7, 2020
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
Copyright © 2026 Bayalu