Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೆದುರು ನಾ…
Share:
Poems March 6, 2024 ಕೆ.ಆರ್ ಮಂಗಳಾ

ನನ್ನೆದುರು ನಾ…

ಅದೇಕೋ ಮೊನ್ನೆ ಮೊನ್ನೆ
ಸಂತೆ ತೋರುವೆ, ಜಾತ್ರೆ ನೋಡುವೆ
ನಡಿ ನನ್ನೊಡನೆ ಎಂದ ಗುರು
ಹಿಗ್ಗಿನಲಿ, ಗೆಲುವಿನಲಿ
ಚೆಂದದ ಸಿಂಗಾರದಲಿ
ಹೊರಟಿತ್ತು ನನ್ನ ಮೆರವಣಿಗೆ
ಸಂಭ್ರಮವೇನು, ಕುತೂಹಲಗಳೇನು
ಪ್ರಶ್ನೆಗಳ ಸುರಿಮಳೆಯೇನು…

ಆತನ ದಾಪುಗಾಲಿಗೆ ಸಮವೇ
ನನ್ನ ಪುಟ್ಟ ಹೆಜ್ಜೆ
ಸೋಲುತಿದ್ದವು… ಎಷ್ಟುದ್ದದ ದಾರಿ…
ಸಾಕೆನಿಸಿ ದಣಿವಾಗಿ ಅಲ್ಲಲ್ಲಿ ನಿಂತಾಗ
ಕತೆಯ ನೇಯುತ ನಡೆಸುತಿದ್ದ
ದಣಿವ ಮರೆಸುತ್ತಾ…

ಯಾರ ಮಾತೂ ಯಾರಿಗೂ ಕೇಳದ
ಜನಜಂಗುಳಿಯ ಮುಂದೆ…
ಬಂದು ನಿಂತದ್ದೇ ತಿಳಿಯಲಿಲ್ಲ
ಗೌಜಿನಲಿ ಕಳೆದೀಯ,
ತಪ್ಪಿಸಿಕೊಂಡು ಅಲೆದೀಯ
ಜೋಪಾನವೆನುತಾ ಕೈಯ ಬಿಟ್ಟಿದ್ದಾ…

ಯಾರಿವರು ನೆರೆದವರು
ನಂಟರು, ಗುರುತಿನವರು
ಯಾರಾದರೂ ಇದ್ದಾರೆಯೇ
ಕತ್ತು ಹೊರಳಿಸಿದಲೆಲ್ಲಾ
ಕಣ್ಣಿಟ್ಟು ದಿಟ್ಟಿಸಿದಡಲೆಲ್ಲಾ
ಅರೆ, ನನ್ನದೇ ನೋಟ!!

ಮೈಯು ಬೆವತಿತ್ತು, ಎದೆಯು ನಡುಗಿತ್ತು
ಎಲ್ಲ ಮುಖಗಳಲೂ ನನ್ನದೇ ಬಿಂಬ
ಮರೆವೋ… ಅರಿವೋ…
ಭ್ರಮೆಯ ಹಿಂದಿತ್ತು
ನಾನು, ನಾನು, ನಾನು…
ಕನ್ನಡಿಯ ಕೋಣೆಯಲಿ
ಸಿಕ್ಕಿ ಬಿದ್ದಿಹ ಸತ್ಯ ಕಣ್ಣೆದುರೆ ತೆರೆದಿತ್ತು…
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಯದೋ?

Previous post ಈ ಕನ್ನಡಿ
ಈ ಕನ್ನಡಿ
Next post ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ

Related Posts

ಎಲ್ಲಿದ್ದೇನೆ ನಾನು?
Share:
Poems

ಎಲ್ಲಿದ್ದೇನೆ ನಾನು?

February 10, 2023 ಕೆ.ಆರ್ ಮಂಗಳಾ
ನರನಾಡಿಗಳಲ್ಲೋ ರಕ್ತ ಮಾಂಸಗಳಲ್ಲೋ ಮಿದುಳಿನಲೋ ಹೃದಯದಲೋ, ಚರ್ಮದ ಹೊದಿಕೆಯಲೋ ಎಲ್ಲಿದ್ದೇನೆ ನಾನು? ಬಾಡುವ ದೇಹದಲೋ ಬದಲಾಗೋ ವಿಚಾರಗಳಲೋ ಬೆಂಬಿಡದ ಭಾವಗಳಲ್ಲೋ ಬೇರೂರಿದ...
ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...

Comments 1

  1. ಮುಗದ
    Mar 20, 2024 Reply

    ಹುಡುಕುವದು ನನ್ನೊಳಗೆ ಇದೆ ಎಂಬುದು ತಿಳಿಯದೆ ಕಾಡು ಮೇಡುಗಳನ್ನೆಲ್ಲ ಸುತ್ತಿ ಅಲೆದೆ.

Leave a Reply to ಮುಗದ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಮನಸ್ಸು
ಮನಸ್ಸು
September 7, 2020
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಬೆಳಕಿನ ಹುಳು
ಬೆಳಕಿನ ಹುಳು
December 9, 2025
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
Copyright © 2026 Bayalu