Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದ್ದೇನೆ ನಾನು?
Share:
Poems February 10, 2023 ಕೆ.ಆರ್ ಮಂಗಳಾ

ಎಲ್ಲಿದ್ದೇನೆ ನಾನು?

ನರನಾಡಿಗಳಲ್ಲೋ
ರಕ್ತ ಮಾಂಸಗಳಲ್ಲೋ
ಮಿದುಳಿನಲೋ ಹೃದಯದಲೋ,
ಚರ್ಮದ ಹೊದಿಕೆಯಲೋ
ಎಲ್ಲಿದ್ದೇನೆ ನಾನು?

ಬಾಡುವ ದೇಹದಲೋ
ಬದಲಾಗೋ ವಿಚಾರಗಳಲೋ
ಬೆಂಬಿಡದ ಭಾವಗಳಲ್ಲೋ
ಬೇರೂರಿದ ನಂಬಿಕೆಗಳಲ್ಲೋ
ಎಲ್ಲಿದ್ದೇನೆ ನಾನು?

ಈ ಹೊತ್ತು ಎಂಬುದೇ
ಕೈಗೆಟುಕದಿರುವಾಗ
ಸರಿವ ಕ್ಷಣಗಳಲ್ಲೋ
ಬರುವ ಗಳಿಗೆಗಳಲ್ಲೋ
ಎಲ್ಲಿದ್ದೇನೆ ನಾನು?

ಕಟ್ಟಿದ್ದು ಮರೆಯುತ್ತಾ
ಕೆಡವಿದ್ದು ತುಳಿಯುತ್ತಾ
ಕಟ್ಟುತ್ತಾ ಕೆಡವುತ್ತಾ
ಆಡುವಾಟವೇ ಇಲ್ಲವಾಗಿರಲು
ಎಲ್ಲಿದ್ದೇನೆ ನಾನು?

ಎಲ್ಲಿಂದ ಬಂದದ್ದು
ಎಲ್ಲಿಗೆ ಹೊರಟದ್ದು
ಯಾರು ಯಾರಿಗೆ ಸಾಕ್ಷಿ
ನಿಲಲೊಲ್ಲದ ನಡಿಗೆಯಲಿ
ಎಲ್ಲಿದ್ದೇನೆ ನಾನು?

ಹೆತ್ತವರು ಹೇಳಲಿಲ್ಲ
ನೆರೆದವರು ತಿಳಿಸಲಿಲ್ಲ
ಪುಸ್ತಕದಿ ಬರೆದಿಲ್ಲ
ಪಾಠದಲಿ ಓದಲಿಲ್ಲ
ಎಲ್ಲಿದ್ದೇನೆ ನಾನು?

ಕಣ್ತೆರೆದು ಹುಡುಕಿದರೂ
ಕಣ್ಮುಚ್ಚಿ ಕುಳಿತರೂ
ಹಗಲಲ್ಲಿ ಕಾಣಲಿಲ್ಲ
ರಾತ್ರಿಯಲಿ ಜೊತೆಗಿಲ್ಲ
ಎಲ್ಲಿದ್ದೇನೆ ನಾನು?

ಭವದೊಳಗೆ ಮುಳುಗಿ
ಕದಳಿಯಲಿ ಕಳೆದು
ಗುರು ಕೃಪೆಗೆ ಬಾಯಾರಿ
ಬಯಲ ಬಡಬಡಿಸುವ ಜೀವ
ಎಲ್ಲಿರುವೆ ನೀನು?

Previous post ಕಣ್ಣ ಪರಿಧಿ
ಕಣ್ಣ ಪರಿಧಿ
Next post ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

Related Posts

ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...
ಹಾಯ್ಕುಗಳು
Share:
Poems

ಹಾಯ್ಕುಗಳು

November 10, 2022 ಜ್ಯೋತಿಲಿಂಗಪ್ಪ
೦೧ ಖಾಲಿ ಮನೆಯ ಬಾಗಿಲು ಬಡಿದರೆ ಸದ್ದು ಕೇಳಿತು. ೦೨ ಹೆಂಡದ ಹುಳಿ ವಾಸನೆ ಮಡಿಕೆಯ ಖಾಲಿಗಂಟದು. ೦೩ ಏನು ಸೋಜಿಗ ಹೂವ ಪರಿಮಳವ ಗಾಳಿ ಹೊತ್ತುದು. ೦೪ ದೀಪ ಆರಿತು ಇದ್ದ ಬೆಳಕು...

Comments 4

  1. ಸುನಂದಾ ರಾಚಣ್ಣ, ದಾವಣಗೆರೆ
    Feb 11, 2023 Reply

    ಮನದಾಳದ ಭಾವಗಳನ್ನೆಲ್ಲಾ ದಾಟಿ ಗುರಿಯತ್ತ ಸಾಗಿರುವೆ… ಸರಿವ ಕ್ಷಣಗಳ, ಬರುವ ಗಳಿಗೆಗಳ ಕಟ್ಟುತ್ತಾ ಕೆಡವುತ್ತಾ ಮುಂದೆ ಸಾಗಿ, ಗುರು ಪಾದಕ್ಕೆ ಅರ್ಪಿತಳಾಗಿರುವೆ… ಎಲ್ಲಿಂದ ಬಂದು ಅದೆಲ್ಲಿಗೆ ಹೋಗುವ ಹಂಬಲ? ಬಯಲಾಗುವ ತುಡಿತ… ಹೇಗೆ ಬರೆದೆ? ಒಂದೊಂದು ಹಂತ ದಾಟಿ ಗುರುಗೆ, ಗುರಿಗೆ ಹತ್ತಿರಾಗುತಿರುವೆ… ಈ ಪಯಣ ನನ್ನ ಕಲ್ಪನೆಗೂ ಮೀರಿದ್ದು ಮಗಳೇ!!!
    ✍🏼 ಸುನಂದಾ ಕಪ್ಪರದ

  2. VEERESH
    Feb 11, 2023 Reply

    ಅದ್ಭುತ ಬರಹ ಮೇಡಂ👌🏻👌🏻👌🏻

  3. Venkatesh
    Feb 11, 2023 Reply

    🙏

  4. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Feb 13, 2023 Reply

    “ಪ್ರತಿ ಪದವೂ ನಮ್ಮೊಳಗಿನ. ನಮ್ಮನ್ನು ಹುಡುಕುವಂತೆ ಮಾಡುತ್ತದೆ ,ಎಲ್ಲಿದ್ದೇನೆ ನಾನು ಕವನ. 👌👌👍👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಮಾನವರ ವಿಘಟನೆಗೆ ಕಾರಣರಾರು?
ಮಾನವರ ವಿಘಟನೆಗೆ ಕಾರಣರಾರು?
September 6, 2026
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಅನುಭವ ಮಂಟಪ
ಅನುಭವ ಮಂಟಪ
April 11, 2025
Copyright © 2026 Bayalu