Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದ್ದೇನೆ ನಾನು?
Share:
Poems February 10, 2023 ಕೆ.ಆರ್ ಮಂಗಳಾ

ಎಲ್ಲಿದ್ದೇನೆ ನಾನು?

ನರನಾಡಿಗಳಲ್ಲೋ
ರಕ್ತ ಮಾಂಸಗಳಲ್ಲೋ
ಮಿದುಳಿನಲೋ ಹೃದಯದಲೋ,
ಚರ್ಮದ ಹೊದಿಕೆಯಲೋ
ಎಲ್ಲಿದ್ದೇನೆ ನಾನು?

ಬಾಡುವ ದೇಹದಲೋ
ಬದಲಾಗೋ ವಿಚಾರಗಳಲೋ
ಬೆಂಬಿಡದ ಭಾವಗಳಲ್ಲೋ
ಬೇರೂರಿದ ನಂಬಿಕೆಗಳಲ್ಲೋ
ಎಲ್ಲಿದ್ದೇನೆ ನಾನು?

ಈ ಹೊತ್ತು ಎಂಬುದೇ
ಕೈಗೆಟುಕದಿರುವಾಗ
ಸರಿವ ಕ್ಷಣಗಳಲ್ಲೋ
ಬರುವ ಗಳಿಗೆಗಳಲ್ಲೋ
ಎಲ್ಲಿದ್ದೇನೆ ನಾನು?

ಕಟ್ಟಿದ್ದು ಮರೆಯುತ್ತಾ
ಕೆಡವಿದ್ದು ತುಳಿಯುತ್ತಾ
ಕಟ್ಟುತ್ತಾ ಕೆಡವುತ್ತಾ
ಆಡುವಾಟವೇ ಇಲ್ಲವಾಗಿರಲು
ಎಲ್ಲಿದ್ದೇನೆ ನಾನು?

ಎಲ್ಲಿಂದ ಬಂದದ್ದು
ಎಲ್ಲಿಗೆ ಹೊರಟದ್ದು
ಯಾರು ಯಾರಿಗೆ ಸಾಕ್ಷಿ
ನಿಲಲೊಲ್ಲದ ನಡಿಗೆಯಲಿ
ಎಲ್ಲಿದ್ದೇನೆ ನಾನು?

ಹೆತ್ತವರು ಹೇಳಲಿಲ್ಲ
ನೆರೆದವರು ತಿಳಿಸಲಿಲ್ಲ
ಪುಸ್ತಕದಿ ಬರೆದಿಲ್ಲ
ಪಾಠದಲಿ ಓದಲಿಲ್ಲ
ಎಲ್ಲಿದ್ದೇನೆ ನಾನು?

ಕಣ್ತೆರೆದು ಹುಡುಕಿದರೂ
ಕಣ್ಮುಚ್ಚಿ ಕುಳಿತರೂ
ಹಗಲಲ್ಲಿ ಕಾಣಲಿಲ್ಲ
ರಾತ್ರಿಯಲಿ ಜೊತೆಗಿಲ್ಲ
ಎಲ್ಲಿದ್ದೇನೆ ನಾನು?

ಭವದೊಳಗೆ ಮುಳುಗಿ
ಕದಳಿಯಲಿ ಕಳೆದು
ಗುರು ಕೃಪೆಗೆ ಬಾಯಾರಿ
ಬಯಲ ಬಡಬಡಿಸುವ ಜೀವ
ಎಲ್ಲಿರುವೆ ನೀನು?

Previous post ಕಣ್ಣ ಪರಿಧಿ
ಕಣ್ಣ ಪರಿಧಿ
Next post ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

Related Posts

ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...
ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...

Comments 4

  1. ಸುನಂದಾ ರಾಚಣ್ಣ, ದಾವಣಗೆರೆ
    Feb 11, 2023 Reply

    ಮನದಾಳದ ಭಾವಗಳನ್ನೆಲ್ಲಾ ದಾಟಿ ಗುರಿಯತ್ತ ಸಾಗಿರುವೆ… ಸರಿವ ಕ್ಷಣಗಳ, ಬರುವ ಗಳಿಗೆಗಳ ಕಟ್ಟುತ್ತಾ ಕೆಡವುತ್ತಾ ಮುಂದೆ ಸಾಗಿ, ಗುರು ಪಾದಕ್ಕೆ ಅರ್ಪಿತಳಾಗಿರುವೆ… ಎಲ್ಲಿಂದ ಬಂದು ಅದೆಲ್ಲಿಗೆ ಹೋಗುವ ಹಂಬಲ? ಬಯಲಾಗುವ ತುಡಿತ… ಹೇಗೆ ಬರೆದೆ? ಒಂದೊಂದು ಹಂತ ದಾಟಿ ಗುರುಗೆ, ಗುರಿಗೆ ಹತ್ತಿರಾಗುತಿರುವೆ… ಈ ಪಯಣ ನನ್ನ ಕಲ್ಪನೆಗೂ ಮೀರಿದ್ದು ಮಗಳೇ!!!
    ✍🏼 ಸುನಂದಾ ಕಪ್ಪರದ

  2. VEERESH
    Feb 11, 2023 Reply

    ಅದ್ಭುತ ಬರಹ ಮೇಡಂ👌🏻👌🏻👌🏻

  3. Venkatesh
    Feb 11, 2023 Reply

    🙏

  4. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Feb 13, 2023 Reply

    “ಪ್ರತಿ ಪದವೂ ನಮ್ಮೊಳಗಿನ. ನಮ್ಮನ್ನು ಹುಡುಕುವಂತೆ ಮಾಡುತ್ತದೆ ,ಎಲ್ಲಿದ್ದೇನೆ ನಾನು ಕವನ. 👌👌👍👍

Leave a Reply to ಸುನಂದಾ ರಾಚಣ್ಣ, ದಾವಣಗೆರೆ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಮಾಯದ ಗಾಯ
ಮಾಯದ ಗಾಯ
October 19, 2025
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ನಾನು ಯಾರು?
ನಾನು ಯಾರು?
December 8, 2021
Copyright © 2026 Bayalu