Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯದೊಳಗಣ ಬಯಲು
Share:
Poems November 7, 2020 ಜ್ಯೋತಿಲಿಂಗಪ್ಪ

ಕಾಯದೊಳಗಣ ಬಯಲು

ಈ ಬಯಲು ಗುರುತಿಸಲಾರೆ
ನನ್ನ ಕಣ್ಣ ಎದುರು ನಾನು
ಬಯಸುವ ರೂಹು ಇಲ್ಲ

ಕಣ್ಣು ಹೇಳಿದುದು ಸುಳ್ಳೇ

ನೀ ಬಿಟ್ಟ ಉಸಿರಲೊಂದು
ದನಿ ಇದೆ ನಾ ಕೇಳಲಾರೆ

ಉಸಿರು ಒಳಗಣ ದನಿ
ಉಸಿರು ನುಂಗಿತು
ಕಣ್ಣ ಒಳಗಣ ಉಸಿರು
ನೋಟ ನುಂಗಿತು

ಈ ಗೆರೆ ಕೊರೆದು
ಹೋದವರು ಯಾರು ಯಾರು
ಅಳಿಸದಾ ಗೆರೆಯೇ…

ನಾನು ನಾನೇ ಕೊರೆದುದು ಅಳಿಸದುದು
ನಾ ಹೆತ್ತ ಕೂಸು
ತಾಯಿ ಆಗದಿರೆ ಗಂಡನಿಗೆ ಕಳಂಕ

ಕಾಯ ಉಸಿರು, ಉಸಿರು ಕಾಯ
ಪ್ರಾಣ ಇರುವ ದೇಹ
ದೇಹ ಇರುವ ಪ್ರಾಣ
ಉಸಿರ ಒಳಗಣ ಆ ಸದ್ದು
ಏನದು…

ಒಂದೊಂದು ಕಾಯದಲೂ
ಒಂದು ಚೈತನ್ಯ ಎಂಬರಿವು ಈಗ
ಈಗ ಈ ಐನಸ್ಟೈನ್ ಚೈತನ್ಯ
ಸೂತ್ರ ಬಯಲು

ಬಾಗಿಲಿಗೆ ಮೊಳೆ ಜಡಿದು
ಒಳಗೆ ಕಾಲಿಟ್ಟಿರುವೆ.

Previous post ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
Next post ಗಂಟಿನ ನಂಟು
ಗಂಟಿನ ನಂಟು

Related Posts

ಹೆಸರಿಲ್ಲದಾ ಊರಿನ ಹಾಡು
Share:
Poems

ಹೆಸರಿಲ್ಲದಾ ಊರಿನ ಹಾಡು

May 6, 2020 ಪದ್ಮಾಲಯ ನಾಗರಾಜ್
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ// ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ ಶೋಕಿ ದಾರಿಯು...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 2

  1. Umesh Patri
    Nov 11, 2020 Reply

    ಕಣ್ಣು ಹೇಳುವುದು ಸುಳ್ಳೋ, ಮನಸ್ಸು ಹೇಳುವುದು ಸುಳ್ಳೋ… ಕೊನೆಗೆ ಈ ಬದುಕೇ ಸುಳ್ಳೋ… ಕವಿಯ ಗೊಂದಲ ಬಿಡುಗಡೆಯಾದರೂ ಓದುಗನ ಗೊಂದಲ ಹಾಗೇ ಉಳಿಯುತ್ತದೆ.

  2. Manikanta Dogila
    Nov 11, 2020 Reply

    ಪ್ರಾಣ ಇರುವ ದೇಹ
    ದೇಹ ಇರುವ ಪ್ರಾಣ… ಕಾಡುವ ಸಾಲುಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಭೃತ್ಯಾಚಾರ
ಭೃತ್ಯಾಚಾರ
June 5, 2021
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಹುಲಿ ಸವಾರಿ…
ಹುಲಿ ಸವಾರಿ…
June 10, 2023
Copyright © 2025 Bayalu