Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೊಳಗಣ ಮರೀಚಿಕೆ
Share:
Poems February 5, 2020 ಪದ್ಮಾಲಯ ನಾಗರಾಜ್

ನನ್ನೊಳಗಣ ಮರೀಚಿಕೆ

ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…

ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…

ಈ ಊರು
ಪ್ರತಿಮಾ ವಿಧಾನದ ಭಾವಸುಧೆ…

ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…

ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…

ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…

ಈ ಊರು
ವಾಸ್ತವ ಅರಿಯದಾ ದರ್ಶನ…

ಈ ಊರು
ಗತ ಚರಿತೆಗಳ ಅನುಶಾಸನ…

ಈ ಊರು
ಅಗಣಿತ ಕಲೆಗಳ ಅಂಗಳ…

ಈ ಊರು
ನೀತಿಪಾಠಗಳ ತವರೂರು..

ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…

ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…

ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…

ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…

ಈ ಊರು
ಪರಂಪರಾ ರಚನೆಗಳ ಊಳಿಗ…

ಈ ಊರು
ಕೈಗೆಟುಕದಾ ಕನಸು…

ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…

ಈ ಊರು
ಸದಾ ಬೆಂಬಿಡದ ಮರೀಚಿಕೆ

ಈ ಊರು
ಕಡುಖಾಲಿಯಾದ ಮಹಮೌನ…

ಈ ಊರು
ಎಂದೂ ಖಾಲಿಯಾಗದಾ ನಶ್ವರ…

ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…

ಈ ಊರು
ಏನೂ ಇಲ್ಲದ ನಿರಂತರ…

ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.

Previous post ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
Next post ಶರಣ- ಎಂದರೆ…
ಶರಣ- ಎಂದರೆ…

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 2

  1. ಶ್ರೀಶೈಲ, ಗದಗ
    Feb 6, 2020 Reply

    ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?

  2. Lingaraj Patil
    Feb 9, 2020 Reply

    ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
    ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
Copyright © 2025 Bayalu