Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನೊಳಗಣ ಮರೀಚಿಕೆ
Share:
Poems February 5, 2020 ಪದ್ಮಾಲಯ ನಾಗರಾಜ್

ನನ್ನೊಳಗಣ ಮರೀಚಿಕೆ

ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…

ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…

ಈ ಊರು
ಪ್ರತಿಮಾ ವಿಧಾನದ ಭಾವಸುಧೆ…

ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…

ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…

ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…

ಈ ಊರು
ವಾಸ್ತವ ಅರಿಯದಾ ದರ್ಶನ…

ಈ ಊರು
ಗತ ಚರಿತೆಗಳ ಅನುಶಾಸನ…

ಈ ಊರು
ಅಗಣಿತ ಕಲೆಗಳ ಅಂಗಳ…

ಈ ಊರು
ನೀತಿಪಾಠಗಳ ತವರೂರು..

ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…

ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…

ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…

ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…

ಈ ಊರು
ಪರಂಪರಾ ರಚನೆಗಳ ಊಳಿಗ…

ಈ ಊರು
ಕೈಗೆಟುಕದಾ ಕನಸು…

ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…

ಈ ಊರು
ಸದಾ ಬೆಂಬಿಡದ ಮರೀಚಿಕೆ

ಈ ಊರು
ಕಡುಖಾಲಿಯಾದ ಮಹಮೌನ…

ಈ ಊರು
ಎಂದೂ ಖಾಲಿಯಾಗದಾ ನಶ್ವರ…

ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…

ಈ ಊರು
ಏನೂ ಇಲ್ಲದ ನಿರಂತರ…

ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.

Previous post ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
Next post ಶರಣ- ಎಂದರೆ…
ಶರಣ- ಎಂದರೆ…

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ಮಣ್ಣಲ್ಲಿ ಹುಟ್ಟಿ…
Share:
Poems

ಮಣ್ಣಲ್ಲಿ ಹುಟ್ಟಿ…

February 6, 2025 ಜ್ಯೋತಿಲಿಂಗಪ್ಪ
ಬರಿದಾಗದ ಕನಸುಗಳು ಮರೆವಿಗೆ ಸರಿಯವೇ.. ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು ತುಂಬಲು ಆಸೆಯೇ ಇಲ್ಲ ಖಾಲಿ ಆಗುವುದು ಏನೂ ಇರದು ಆಸೆ ಹೊತ್ತ ಮನವಿಲ್ಲ ನಿರಾಸೆ ಎಂಬುದೇನೋ...

Comments 2

  1. ಶ್ರೀಶೈಲ, ಗದಗ
    Feb 6, 2020 Reply

    ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?

  2. Lingaraj Patil
    Feb 9, 2020 Reply

    ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
    ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.

Leave a Reply to Lingaraj Patil Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
December 9, 2025
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಈ ಕನ್ನಡಿ
ಈ ಕನ್ನಡಿ
March 6, 2024
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
Copyright © 2026 Bayalu