Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಜ ನನಸಿನ ತಾವ…
Share:
Poems July 10, 2023 ಕೆ.ಆರ್ ಮಂಗಳಾ

ನಿಜ ನನಸಿನ ತಾವ…

ಕಣ್ಣು ಮುಚ್ಚಿದಾಗ ಬರುವ ಕನಸಿಗೂ
ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ
ಏನಿಹುದು ಅಂತರ?
ನಗು, ಅಳು, ನೋವು, ಸಂಕಟ…
ಅನುಭವದಲ್ಲಿ ಅದ್ದಿ ತೆಗೆದಂತೆ
ಎಲ್ಲ ಎದುರೆದುರೇ ನಡೆದಂತೆ!
ಹೊಯ್ದಾಟಗಳ ಹಗಲ ನನಸು,
ಕನವರಿಕೆಗಳಾ ಇರುಳ ಕನಸು

ನನಸಂತೆ ಕನಸಲೂ ಅದೇ ಅದೇ
ಒಡಲ ಹಸಿವು, ಹುಸಿಗಳು
ಚಡಪಡಿಕೆಗಳು, ಹುಡುಕಾಟಗಳು
ಅಸಹಾಯಕತೆಯ ತಡವರಿಕೆಗಳು
ಇಲ್ಲಿರುವವರೆಲ್ಲಾ ಅಲ್ಲಿ ಸಿಗುತ್ತಾರೆ
ಅಲ್ಲಿಯವರೆಲ್ಲಾ ಇಲ್ಲಿ ಕಾಣುತ್ತಾರೆ
ಸಂಬಂಧಗಳು, ವಿರೋಧಗಳು,
ದಡಗಳೆರಡರ ಮೇಲೂ ನಿತ್ಯ ಹರಿದಾಡುತ್ತವೆ

ಕನಸು-ನನಸಿನ ಮೋಡಿಯಾಟದಲಿ
ನಾಳೆಗಳು ನಿನ್ನೆಗಳಾಗುತಿವೆ
ಮಲಗಿದಾಗ ದಿನ ಮರೆಯಾಗುತ್ತದೆ
ಎಚ್ಚರಾದಾಗ ಕನಸು ಸರಿಯುತ್ತದೆ
ಯಾವುದು ದಿಟ, ಯಾವುದು ಸಟೆ?
ಅಲ್ಲಿ ತೋರಿದ್ದೋ, ಇಲ್ಲಿ ಕಂಡದ್ದೋ?

ಅರಿವಾಗಿ ಎದೆಗಿಳಿದ ಗುರು ಹೇಳಿದ-
ಎರಡೂ ಸುಳ್ಳಲ್ಲ, ನಿಜದಿರುವೂ ಅಲ್ಲಿಲ್ಲ
ವಿಷಮ ವಿಷಯಗಳ ಹಗಲಿನ ಜಾತ್ರೆ
ಸಿಗದ ಬೇಗುದಿಗಳ ಇರುಳಿನ ಸಂತೆ
ಎಚ್ಚರವಾಗದ ಅಮಲಿನ ಬದುಕಿಗೆ
ಸತ್ಯದ ನೆಲೆಯು ಕಾಣುವುದೆ?
ಕನಸೊಳಗೊಂದು ಕನಸನು ಕಟ್ಟಲು
ನಿಜ ನನಸಿನ ಮರ್ಮ ತಿಳಿಯುವುದೆ?

ನಿನ್ನ ಕದಳಿಯ ನೀ ದಾಟಲೇ ಬೇಕು
ನಿನ್ನ ತಾವಕೆ ನೀ ಸೇರಲೇ ಬೇಕು
ಜಂಗಮ ಚಲನೆಯ ಲಾಸ್ಯವನರಿಯಲು
ಅಚಲವಾಗಿ ನೀ ನಿಲ್ಲಲೇ ಬೇಕು.

Previous post ಗೇಣು ದಾರಿ
ಗೇಣು ದಾರಿ
Next post ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2

Related Posts

ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...
ಕಾಲ ಕಲ್ಪಿತವೇ?!
Share:
Poems

ಕಾಲ ಕಲ್ಪಿತವೇ?!

September 14, 2024 ಕೆ.ಆರ್ ಮಂಗಳಾ
ಬೊಗಸೆಯ ಬೆರಳ ಸಂದಿಯಲಿ ಸೋರಿ ಹೋಗುವ ನೀರಂತೆ… ಕಣ್ಮುಂದೆ, ಕಾಲಡಿಯೇ ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ ಕಾಲಬುಡದಲ್ಲೇ ಇರುವೆ ಕಣ್ಣಳತೆಯಲ್ಲೇ ಸರಿಯುತ್ತಿರುವೆ ಅದೇಕೆ...

Comments 1

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 13, 2023 Reply

    ಕಣ್ಣೆಚ್ಚರದಲಿ ಕನಸ ನೋಡಬೇಕು.. ಎಂಬುದನ್ನು ಎಷ್ಟು ಸರಳವಾಗಿ ಹೇಳಿರುವಿರಿ.
    ಓದುವುದೇ ಒಂದು ಚೆಂದ .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಸೂರ್ಯ
ಸೂರ್ಯ
January 8, 2023
ಶಾಂತಿ
ಶಾಂತಿ
April 11, 2025
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
Copyright © 2026 Bayalu