Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹೆಸರಿಲ್ಲದಾ ಊರಿನ ಹಾಡು
Share:
Poems May 6, 2020 ಪದ್ಮಾಲಯ ನಾಗರಾಜ್

ಹೆಸರಿಲ್ಲದಾ ಊರಿನ ಹಾಡು

ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//

ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//

ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//

ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//

ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//

ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.

-ಪದ್ಮಾಲಯ ನಾಗರಾಜ್

Previous post ಮನವೇ ಮನವೇ…
ಮನವೇ ಮನವೇ…
Next post WHO AM I?
WHO AM I?

Related Posts

ಭಾರ
Share:
Poems

ಭಾರ

October 6, 2020 ಕೆ.ಆರ್ ಮಂಗಳಾ
ಕಳೆದು ಹೋದ ದಿನಗಳ ಭಾರ ಉಳಿಸಿಕೊಂಡ ನೆನಪಿನ ಭಾರ ಕಾಣದಿರುವ ಕ್ಷಣಗಳ ಭಾರ ಕಲ್ಪನೆಗಳ ಹೆಣಿಕೆಯ ಭಾರ… ಹೊರಲಾರೆ ತಂದೆ ಈ ತಲೆಭಾರ ಹೊತ್ತು ನಡೆಯಲಾರೆ ಮುಂದೆ… ಹಳಸಿಹೋದ ವಿಷಯದ ಭಾರ...
ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...

Comments 3

  1. Jyothilingappa
    May 7, 2020 Reply

    ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.

  2. Gangadhar navale
    May 14, 2020 Reply

    ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.

  3. Chandru pujar
    Aug 25, 2020 Reply

    Dhanyvad Sar Tumba chennagide

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೇಳಿಸಿತೇ?
ಕೇಳಿಸಿತೇ?
April 6, 2024
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ಲಿಂಗವಾಗುವ ಪರಿ…
ಲಿಂಗವಾಗುವ ಪರಿ…
April 29, 2018
Copyright © 2026 Bayalu