Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿ ಬಿಡಿ…
Share:
Poems December 6, 2020 ಕೆ.ಆರ್ ಮಂಗಳಾ

ದಾರಿ ಬಿಡಿ…

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ನೆನಪುಗಳೇ ಜಗ್ಗದಿರಿ ಹಿಂದಕ್ಕೆ
ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ
ಕಳೆದ ಕಾಲಗಳಿಗೆಳೆದು
ಸಮಯ ಹಾಳುಮಾಡದಿರಿ
ಕನಸುಗಳೇ, ಬಣ್ಣಬಣ್ಣದ ಚಿತ್ರಗಳ ಬಿಡಿಸಿ
ಮಾಯಾಲೋಕಕೆ ಹೊತ್ತೊಯ್ಯದಿರಿ
ಏಳದಂತೆ ಮತ್ತೆ ನಿದ್ದೆಗೆ ದೂಡದಿರಿ
ಹಿಡಿದ ಹಾದಿಯ ಮರೆಸದಿರಿ

ದಾರಿ ಬಿಡಿ ದಾರಿ ಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ

ಅಡಿಗಡಿಗೆ ಎಡತಾಕುವ ಕಿರಿಕಿರಿಗಳೇ
ಈ ದಾರಿಯಲಿ ಚೂಪುಗಲ್ಲಾಗದಿರಿ
ಅತ್ತಿಲಿತ್ತ ಜಗ್ಗಿ ಹೈರಾಣ ಮಾಡುತ್ತಾ
ನಡೆಯ ವೇಗ ತಗ್ಗಿಸದಿರಿ
ಅಳುಕಿನ ಮಾತುಗಳೇ,
ತಲೆಯಲೆಲ್ಲೋ ಕುಳಿತು
ನಿನ್ನಿಂದಾಗದು ಈ ಪಯಣವೆಂದು
ಧೈರ್ಯಗುಂದಿಸುತಾ
ಎದೆಯ ಕುಡಿಗೆ ನೀರೆರಚದಿರಿ
ಹೆಜ್ಜೆಗಳ ಹುರುಪ ಕಸಿಯದಿರಿ

ಮನದ ಸಂದಣಿಯಲ್ಲಿ ಜಾಗ ಮಾಡಿಕೊಳ್ಳುತ್ತಾ
ನಡೆಯಲೇ ಬೇಕಿದೆ ನನ್ನ ತವರಿಗೆ
ಕೈಮುಗಿದು ಕೇಳುವೆನು
ಮನಸಿನಾಟಗಳೇ ದಾರಿಬಿಡಿ
ಸಮಯವಿಲ್ಲ ಎನ್ನ ಬಳಿ ದಾರಿಬಿಡಿ
ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ…

Previous post ಸುಮ್ಮನೆ ಇರು
ಸುಮ್ಮನೆ ಇರು
Next post ದಾಸೋಹ ತತ್ವ
ದಾಸೋಹ ತತ್ವ

Related Posts

ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
Copyright © 2026 Bayalu