Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶಾಂತಿ
Share:
Poems April 11, 2025 Bayalu

ಶಾಂತಿ

ಪಯಣದ ಉಬ್ಬುತಗ್ಗು ಹಾದಿಯಲಿ,
ಗಂಧದ ಕಣವಾಗು ಬಯಲಲಿ,
ಸುಮದ ದಳವಾಗು ವನದಲಿ,
ಓ ಮನವೇ,
ಕಂದನ ಮುಗ್ದ ನಗುವಾಗು.| ೧ |

ಹರುಷ ದುಗುಡಗಳ ಮೇಳದಲಿ,
ಮಧುರ ನೆನಪುಗಳ ಹೊಳೆಯಾಗು,
ಹಾಡಾಗು ಕಾಡುವ ನೋವಿಗೆ,
ಓ ಮನವೇ,
ಬಾನಲಿ ಹಾರುವ ಹಕ್ಕಿಯಾಗು. | ೨ |

ಕಷ್ಟಸುಖಗಳು ಬೆರೆತ ಬದುಕಿನಲಿ,
ಚಿಂತನೆಯ ಮುನಿಯಾಗು ಗದ್ದಲದಲಿ,
ಹರಿವ ನದಿಯಾಗು ಹರುಷದಲಿ
ಓ ಮನವೇ,
ಕರುಣೆ ಮಮತೆಗಳ ಸೆಲೆಯಾಗು. | ೩ |

ನೇಸರನ ದಿಗಂತದಂಚಿನ ಪಥದಲಿ,
ಮುಪ್ಪುದೇಹ ಕೊನೆ ಕೋರಿದಂದು,
ಮುಕ್ತನಾಗು ತುಂಬು ಹೃದಯದಲಿ,
ಓ ಮನವೇ,
ಪರಮ ಶಾಂತಿಯ ನೆಲೆಯಾಗು. | ೪ |

-ಅಂಬಳೆ ನಾಗ
(ರವೀಂದ್ರನಾಥ್ ಟಾಗೋರ್ ಅವರ ಕವಿತೆಯಿಂದ ಸ್ಫೂರ್ತಿ ಪಡೆದು)

Previous post ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
Next post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು

Related Posts

ಬೆಳಕು ಸಿಕ್ಕೀತೆ?
Share:
Poems

ಬೆಳಕು ಸಿಕ್ಕೀತೆ?

March 9, 2023 ಜ್ಯೋತಿಲಿಂಗಪ್ಪ
ಈಗ ನೀನು ಮರೆವು ನಾನು ಇರುವೆ ನಾ.. ಹೇಳ ಬಾರದು ಕೇಳ ಬಾರದು ಬಾಳೆ ಹಣ್ಣಾಗಿ ಈಗಷ್ಟೇ ಬಾಗಿದೆ ಏನೇ ಹೇಳಿ ಕಾಣುವುದೆಲ್ಲಾ ಸತ್ಯವೇ ಅಲ್ಲಾ ಏನೂ ಆಗಬಹುದು ಆಕಾಶ ಮೈದೆರೆದರೆ ಬಯಲು...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 3

  1. Raviraju A
    Apr 20, 2025 Reply

    ಮುಕ್ತವಾಗಲಿ ಮನವು ಎಲ್ಲಾ ಕ್ಲೀಷೆಗಳಿಂದ… ಶಾಂತ ಲಹರಿಯಂತಿದೆ ಭಾವನೆ.

  2. ಕೀರ್ತಿ ಎನ್, ಗುಂಡ್ಲುಪೇಟೆ
    Apr 28, 2025 Reply

    ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ- ಮಾರ್ಮಿಕವಾದ ಸಾಲುಗಳು. ಗಂಧದ ಕಣವಾಗುವುದು!

  3. ಉಮಾದೇವಿ ಶಂಕರಪ್ಪ
    May 1, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದುವಂತಿವೆ✌️

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ತುತ್ತೂರಿ…
ತುತ್ತೂರಿ…
June 10, 2023
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಶರಣನಾಗುವುದು…
ಶರಣನಾಗುವುದು…
February 10, 2023
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
Copyright © 2026 Bayalu