Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವರದಿ ಕೊಡಬೇಕಿದೆ
Share:
Poems March 17, 2021 ಕೆ.ಆರ್ ಮಂಗಳಾ

ವರದಿ ಕೊಡಬೇಕಿದೆ

ತನುವ ಭೇದಿಸಿ, ಮನವ ಶೋಧಿಸಿ
ವರದಿ ಕೊಡಲು ಅಟ್ಟಿದ್ದಾನೆ ಗುರು
ನನ್ನೊಳಗೆ ನನ್ನ…

ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ
ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ
ಎಲ್ಲೋ ಓದಿದ್ದನ್ನು, ಯಾರೋ ಹೇಳಿದ್ದನ್ನು
ನಕಲು ಮಾಡಿ ಒಪ್ಪಿಸುವಂತೆಯೂ ಇಲ್ಲ…
ಆಸೆಗಳ ಮೊಗೆತ, ಭಾವಗಳ ರಭಸ
ಕಲ್ಪಿತಗಳ ನೆಗೆತ, ವಿಚಾರಗಳ ಓಟ
ಏನ ಹಿಡಿಯಲಿ, ಎಲ್ಲಿ ಕೆದಕಲಿ?
ಪಾಚಿ ಇದೆ, ಸೆಳೆತ ಇದೆ
ಮರೆವಿನ ಜಾಲಗಳಿವೆ, ಅಪರಿಚಿತ ಜಾಗಗಳಿವೆ
ದಾರಿ ತಪ್ಪಿಸುವ ಕತ್ತಲಿದೆ…

ಹೊರ ಸುದ್ದಿಗಳನು ವರದಿ ಮಾಡಿ
ಅಭ್ಯಾಸವಾದವಳಿಗೆ
ಮನವ ನೋಡುವುದು,
ಅಂತರಂಗದ ಸಮಾಚಾರ ಬರೆವುದು
ಇಷ್ಟು ಸವಾಲಿನದೆಂದು ತಿಳಿದಿರಲೇ ಇಲ್ಲ…
ಕಂಗಾಲಾಗಿ ಕೂರುವಂತಿಲ್ಲ
ಗಡುವು ಮೀರುವಂತಿಲ್ಲ
ಗುರು ಕೊಟ್ಟ ಕಂದೀಲು ಹಿಡಿದು
ಒಳಗಡಿ ಇಟ್ಟಾಗಿದೆ…
ಒಂದೊಂದನೆ ಎತ್ತಿ, ಬಗೆಬಗೆದು ನೋಡಿ
ಹಿಂದು-ಮುಂದಿನ ತಂತುಗಳ ಹುಡುಕಿ
ವರದಿ ಕೊಡಬೇಕಿದೆ ಗುರುವಿಗೆ ವರದಿ ಕೊಡಬೇಕಿದೆ…

Previous post ಬಯಲಾಟ
ಬಯಲಾಟ
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...
ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...

Comments 1

  1. Vinay Bengaluru
    Mar 20, 2021 Reply

    ಯಾವ ಗುರುವಿಗೆ ವರದಿ ಕೊಡಬೇಕು ಅಕ್ಕಾ? ಹಾಗೆ ವರದಿ ಕೇಳಿದ ಗುರು ಯಾರು?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
August 2, 2019
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
Copyright © 2026 Bayalu