Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನವೇ ಮನವೇ…
Share:
Poems May 6, 2020 Bayalu

ಮನವೇ ಮನವೇ…

ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ
ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ//

ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ
ವಿಲವಿಲ ಎನ್ನುತ ನಲುಗಿದೆ ನೀನು ನಲಿವಿಲ್ಲ ಮನವೇ
ಒಲವಿಂದಲೆ ನೀ ಬಲೆ ಮೂರಕ್ಕೆ ಬಲಿಯಾದೆ ಮನವೇ
ನೆಲೆ ತಾನರಿಯದೆ ಅಲೆಯುವ ಸೊಣಗ ಅಲೆದಂತೆ ಮನವೇ //1//

ಹರಿಯುವ ನೀರಿಗೆ ಬೆರಳಿಟ್ಟುಂಡರೆ ಹಿರಿದುಂಟೇ ಮನವೇ
ಕರಿ ಕುನ್ನಿಯು ತಾ ಕೆರ ಕಚ್ಚಾಡಲು ಸಿರಿಯುಂಟೇ ಮನವೇ
ಉರಗನ ಬಾಯಲಿ ಇರುತಿಹ ಕಪ್ಪೆಯ ಪರಿನೀನೆಲೆ ಮನವೇ
ಮರಣದ ಬಾಧೆ ಬರುತಿದೆ ಮುಂದೆ ಮೆರೆಯದಿರು ಮನವೇ //2//

ಸಿರಿ ಸುಖವೆಲ್ಲ ಹಿರಿ ಸಂತೆಯು ತಾ ಕರಗುವ ಪರಿಮನವೇ
ಮರುತಗೆ ಇದಿರು ಉರಿಯುವ ಜ್ಯೋತಿ ಇರಲುಂಟೇ ಮನವೇ
ಹಿರಿಹಿರಿ ನಂಬಿದೆ ಕರಗುವ ಸಿರಿಯನೆ ಮರುಳಾದೆಲೆ ಮನವೇ
ಗುರಿಯನು ಕಾಣದೆ ಧರೆ ಸಿರಿಯೊಳಗೆ ಚರಿಸದಿರು ಮನವೇ //3//

ಇಳೆಯಲ್ಲಾಡುತ ಒಳಬೆಳಗನ್ನು ಕಳೆದೆ ಎಲೆ ಮನವೇ
ಒಳ ಸೇರುತ ನೀ ಕಳೆಬೆಳಗಿನೊಳು ಮುಳುಗುತಲಿರು ಮನವೇ
ಇಳೆಯನು ಬೆಳಗುವ ಇನಶಶಿ ಎಲ್ಲ ಒಳಗಿವೆ ತಿಳಿ ಮನವೇ
ಅಳಿಯದ ಬೆಳಗು ಒಳಗಿದೆ ತಿಳಿದು ತಿಳಿಯಾಗಲೆ ಮನವೇ //4//

ಸನ್ನುತ ಶರಣರ ಬೆನ್ನಿಗೆ ಬೀಳು ಉನ್ನತಿ ಎಲೆ ಮನವೇ
ಬನ್ನವ ಅಳಿಸಿ ರನ್ನವ ತಿಳಿಸುವರಿನ್ನಾರೆಲೆ ಮನವೇ
ಅನ್ಯವ ತೊರೆಸಿ ಭಿನ್ನವ ಕಳೆಯುವರಿನ್ನಾರೆಲೆ ಮನವೇ
ಮುನ್ನಿನ ನಿರವಯಲುನ್ನತ ನಿನ್ನೊಳು ತೋರುವರೆಲೆ ಮನವೇ //5//

-ಮಹಾಲಿಂಗ ಶಿವಯೋಗಿಗಳು

Previous post ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
Next post ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...

Comments 2

  1. B.S.Patil
    May 14, 2020 Reply

    ಮನವೇ ತತ್ವಪದ ಓದುತ್ತಾ ಹೋದಂತಡ ಹಾಡಿಸಿಕೊಳ್ಳತೊಡಗಿತು. ಒಂದೊಂದು ಸಾಲೂ ಬಹಳ ಹಿಡಿಸಿದವು. ಶ್ರೀಗಳಿಗೆ ಶರಣು.

  2. Channappa Vali
    May 14, 2020 Reply

    ಮನವೇ ಮನವೇ… ಮತ್ತು ಹೆಸರಿಲ್ಲದಾ ಊರಿನ ಹಾಡು ಎರಡೂ ಬಹಳ ಚನ್ನಾಗಿವೆ. ಸ್ವರ ವಚನಗಳನ್ನು ಓದಿದಂತೆ ಭಾಸವಾಯಿತು. ಎರಡಕ್ಕೂ ರಾಗ ಹಾಕಿ ಹಾಡುವಂತಿವೆ. ಪ್ರತಿ ಸಾಲುಗಳೂ ಮನನಯೋಗ್ಯವಾಗಿವೆ.

Leave a Reply to B.S.Patil Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗಣ ಮರ
ಒಳಗಣ ಮರ
March 12, 2022
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಹಾಯ್ಕು
ಹಾಯ್ಕು
September 6, 2023
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
Copyright © 2025 Bayalu