Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಲಿಸು ಗುರುವೆ…
Share:
Poems July 10, 2025 ಕೆ.ಆರ್ ಮಂಗಳಾ

ಕಲಿಸು ಗುರುವೆ…

ಬಳಲಿ ಬಂದೆನು ಗುರುವೆ
ನಿನ್ನ ಬಳಿಗೆ
ಬಳಲಿಕೆಯ ಪರಿಹರಿಸು
ಎದೆಯ ದನಿಯೆ

ಇಲ್ಲಸಲ್ಲದ ಹೊರೆಯ
ಹೊತ್ತು ಏಗಿದೆ ಹೆಗಲು
ಜೀತದಲೆ ಜೀಕುತ್ತಾ
ದಿನವ ದೂಡಿರುವೆ
ನಾನು ನನ್ನದು ಎಂಬ
ಗಂಟುನಂಟುಗಳಲ್ಲಿ
ರೆಕ್ಕೆಗಳ ಹೊಲೆದಿರುವೆ
ಆಗಸವ ಮರೆತು…

ಹಗಲ ಮೋಡಗಳು
ಬೆಳಕು ನುಂಗಿರುವಾಗ
ಕವಲು ದಾರಿಗಳಲ್ಲಿ
ಎಡವುತಿರುವೆ
ಮಂಜುಗಣ್ಣಿನಲಿ
ಜಾರಿ ಬಿದ್ದಿರುವೆ
ಮಬ್ಬುಗತ್ತಲಿಗೊಂದು
ಕೈದೀಪ ಹಚ್ಚು…

ಅರಿವು ಮರೆವಿನ ಸಮರ
ಬೆಳಕು ಕತ್ತಲಿನಾಟ
ಕಣ್ಣು ಸೋಲುತಲಿಹವು
ತ್ರಾಣ ಕುಂದಿ
ಎಷ್ಟು ದೂರದ ಪಯಣ
ದಾರಿಯುದ್ದಕೂ ಕದನ
ಪ್ರಾಣ ಹಾರುವ ಮುನ್ನ
ಕಾದಿ ಗೆಲುವುದ ಕಲಿಸು

Previous post ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
Next post ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು

Related Posts

ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...
ಸಾವಿನ ಅರಿವೆ ಕಳಚಿ!
Share:
Poems

ಸಾವಿನ ಅರಿವೆ ಕಳಚಿ!

September 14, 2024 ಜಬೀವುಲ್ಲಾ ಎಂ.ಅಸದ್
ತೆರೆದ ಬೆಂಕಿಯ ಕಣ್ಣಲಿ ತಾವರೆಯ ಪ್ರತಿಬಿಂಬ ಕತ್ತಲೆ ಬೆಳಕಿನ ನಡುವಿನ ಯುದ್ಧ ಮುಗುಳ್ನಕ್ಕ ಬುದ್ಧ! ಕಟ್ಟಿದ ಸೇತುವೆ ಬಳಸಿದ ಲತೆ ಚಿಗುರಿದ ಎಲೆಎಲೆಯ ತುಂಬಾ ಇಬ್ಬನಿಯ ಕಲರವ...

Comments 1

  1. Shraddhananda Swamiji
    Jul 15, 2025 Reply

    “Before leaving this world let me learn to win the battle of life this is my humble prayer to you my teacher” This is simple translation of last line of your wonderful brilliant poem.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಭಾರ
ಭಾರ
October 6, 2020
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಕೇಳಿಸಿತೇ?
ಕೇಳಿಸಿತೇ?
April 6, 2024
ನಾನೆಂಬ ನಿನಾದ…
ನಾನೆಂಬ ನಿನಾದ…
January 15, 2026
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಅನುಭವ ಮಂಟಪ: ಮುಂದೇನು?
ಅನುಭವ ಮಂಟಪ: ಮುಂದೇನು?
April 5, 2026
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
Copyright © 2026 Bayalu