Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನವೇ ಮನವೇ…
Share:
Poems May 6, 2020 Bayalu

ಮನವೇ ಮನವೇ…

ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ
ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ//

ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ
ವಿಲವಿಲ ಎನ್ನುತ ನಲುಗಿದೆ ನೀನು ನಲಿವಿಲ್ಲ ಮನವೇ
ಒಲವಿಂದಲೆ ನೀ ಬಲೆ ಮೂರಕ್ಕೆ ಬಲಿಯಾದೆ ಮನವೇ
ನೆಲೆ ತಾನರಿಯದೆ ಅಲೆಯುವ ಸೊಣಗ ಅಲೆದಂತೆ ಮನವೇ //1//

ಹರಿಯುವ ನೀರಿಗೆ ಬೆರಳಿಟ್ಟುಂಡರೆ ಹಿರಿದುಂಟೇ ಮನವೇ
ಕರಿ ಕುನ್ನಿಯು ತಾ ಕೆರ ಕಚ್ಚಾಡಲು ಸಿರಿಯುಂಟೇ ಮನವೇ
ಉರಗನ ಬಾಯಲಿ ಇರುತಿಹ ಕಪ್ಪೆಯ ಪರಿನೀನೆಲೆ ಮನವೇ
ಮರಣದ ಬಾಧೆ ಬರುತಿದೆ ಮುಂದೆ ಮೆರೆಯದಿರು ಮನವೇ //2//

ಸಿರಿ ಸುಖವೆಲ್ಲ ಹಿರಿ ಸಂತೆಯು ತಾ ಕರಗುವ ಪರಿಮನವೇ
ಮರುತಗೆ ಇದಿರು ಉರಿಯುವ ಜ್ಯೋತಿ ಇರಲುಂಟೇ ಮನವೇ
ಹಿರಿಹಿರಿ ನಂಬಿದೆ ಕರಗುವ ಸಿರಿಯನೆ ಮರುಳಾದೆಲೆ ಮನವೇ
ಗುರಿಯನು ಕಾಣದೆ ಧರೆ ಸಿರಿಯೊಳಗೆ ಚರಿಸದಿರು ಮನವೇ //3//

ಇಳೆಯಲ್ಲಾಡುತ ಒಳಬೆಳಗನ್ನು ಕಳೆದೆ ಎಲೆ ಮನವೇ
ಒಳ ಸೇರುತ ನೀ ಕಳೆಬೆಳಗಿನೊಳು ಮುಳುಗುತಲಿರು ಮನವೇ
ಇಳೆಯನು ಬೆಳಗುವ ಇನಶಶಿ ಎಲ್ಲ ಒಳಗಿವೆ ತಿಳಿ ಮನವೇ
ಅಳಿಯದ ಬೆಳಗು ಒಳಗಿದೆ ತಿಳಿದು ತಿಳಿಯಾಗಲೆ ಮನವೇ //4//

ಸನ್ನುತ ಶರಣರ ಬೆನ್ನಿಗೆ ಬೀಳು ಉನ್ನತಿ ಎಲೆ ಮನವೇ
ಬನ್ನವ ಅಳಿಸಿ ರನ್ನವ ತಿಳಿಸುವರಿನ್ನಾರೆಲೆ ಮನವೇ
ಅನ್ಯವ ತೊರೆಸಿ ಭಿನ್ನವ ಕಳೆಯುವರಿನ್ನಾರೆಲೆ ಮನವೇ
ಮುನ್ನಿನ ನಿರವಯಲುನ್ನತ ನಿನ್ನೊಳು ತೋರುವರೆಲೆ ಮನವೇ //5//

-ಮಹಾಲಿಂಗ ಶಿವಯೋಗಿಗಳು

Previous post ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
Next post ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು

Related Posts

…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...
ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...

Comments 2

  1. B.S.Patil
    May 14, 2020 Reply

    ಮನವೇ ತತ್ವಪದ ಓದುತ್ತಾ ಹೋದಂತಡ ಹಾಡಿಸಿಕೊಳ್ಳತೊಡಗಿತು. ಒಂದೊಂದು ಸಾಲೂ ಬಹಳ ಹಿಡಿಸಿದವು. ಶ್ರೀಗಳಿಗೆ ಶರಣು.

  2. Channappa Vali
    May 14, 2020 Reply

    ಮನವೇ ಮನವೇ… ಮತ್ತು ಹೆಸರಿಲ್ಲದಾ ಊರಿನ ಹಾಡು ಎರಡೂ ಬಹಳ ಚನ್ನಾಗಿವೆ. ಸ್ವರ ವಚನಗಳನ್ನು ಓದಿದಂತೆ ಭಾಸವಾಯಿತು. ಎರಡಕ್ಕೂ ರಾಗ ಹಾಕಿ ಹಾಡುವಂತಿವೆ. ಪ್ರತಿ ಸಾಲುಗಳೂ ಮನನಯೋಗ್ಯವಾಗಿವೆ.

Leave a Reply to Channappa Vali Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
Copyright © 2025 Bayalu