Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ಸಿಕ್ಕೀತೆ?
Share:
Poems March 9, 2023 ಜ್ಯೋತಿಲಿಂಗಪ್ಪ

ಬೆಳಕು ಸಿಕ್ಕೀತೆ?

ಈಗ
ನೀನು ಮರೆವು
ನಾನು
ಇರುವೆ ನಾ..

ಹೇಳ
ಬಾರದು ಕೇಳ
ಬಾರದು

ಬಾಳೆ
ಹಣ್ಣಾಗಿ ಈಗಷ್ಟೇ
ಬಾಗಿದೆ

ಏನೇ ಹೇಳಿ
ಕಾಣುವುದೆಲ್ಲಾ ಸತ್ಯವೇ
ಅಲ್ಲಾ
ಏನೂ ಆಗಬಹುದು

ಆಕಾಶ ಮೈದೆರೆದರೆ ಬಯಲು ಕಾಣುವುದು.

*** ***

ಕಣ್ಣಳತೆಗೆ ಸಿಕ್ಕ ಬೆಳಕು
ಕಂಡೆ
ಕಣ್ಣಳತೆಗೆ ಸಿಗದು ಬೆಳಕು
ಕಂಡೆ
ಕಂಡೆ ಕಂಡೆ ಕಣ್ಣಳತೆಯ
ಕಂಡೆ
ಕಣ್ಣ ಒಳಗಣ ಸಿಕ್ಕು
ತಂತಿ ಹರಿದ ತಂಬೂರಿ

ದೃಷ್ಟಿಯ ಮರೆವೆ ಕಣ್ಣಿಗೆ ಕತ್ತಲು
ಕಣ್ಣೇ ಬೆಳಗಿದರೆ ದೃಷ್ಟಿ ಮರೆ.

Previous post ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
Next post ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…

Related Posts

ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...
ಬೆಳಕು ನುಂಗಿದ ಕತ್ತಲು
Share:
Poems

ಬೆಳಕು ನುಂಗಿದ ಕತ್ತಲು

December 9, 2025 ಜಬೀವುಲ್ಲಾ ಎಂ.ಅಸದ್
ಬೂದಿ ಮುಚ್ಚಿದ ಮುಗಿಲು ಹರಿದ ಗಾಳಿ ಅಲೆಗಳಿಗೆ ನೆನೆದು ನೆಲದ ಬಾಗಿಲು ತೆರೆದು ತೋರಿ ಬಯಲು ಮುರಿದ ಕೈ ಕುಂಟುವ ಕಾಲು ನಾಲಿಗೆ ಚಾಚಿದ ಬಯಕೆ ನೂರು ನೋಡು… ನೋಡು…...

Comments 3

  1. Savitha Bannur
    Mar 12, 2023 Reply

    ಆಕಾಶ ಮೈದೆರೆದರೆ ಬಯಲು ಕಾಣಬಹುದು!- ಬೆಡಗಿನ ವಚನದಂತಿರುವ ಕವನದ ಸಾಲು ಗಮನ ಸೆಳೆದು ವಿಚಾರಕ್ಕೆ ಹಚ್ಚುತ್ತದೆ.

  2. ಶಿವಕುಮಾರ್ ಎಲ್
    Mar 12, 2023 Reply

    ಕಾಣುವುದೆಲ್ಲಾ ಸತ್ಯವಲ್ಲಾ ಎನ್ನುತ್ತಾರೆ, ಕಂಡದ್ದೆಲ್ಲಾ ಸುಳ್ಳೆಂದರೆ ಬಾಳುವುದು ಹೇಗೆ? ನಿಜ ಯಾವುದು, ಮಾಯೆ ಯಾವುದು?

  3. ಪೆರೂರು ಜಾರು, ಉಡುಪಿ
    Mar 12, 2023 Reply

    ಆಗಸ ಭೂಮಿ ತುದಿಯಲ್ಲಿ ಒಂದಾದಂತೆ ಕಂಡುದು ಭ್ರಮೆ
    ತುದಿಗಳಿಲ್ಲಾ ಎಂಬ ಅರಿವು ನಿಚ್ಚಳವಾದಾಗ
    ತುದಿ ಎಳೆವವರು ಹೆಚ್ಚಾಗಿ ಹುಚ್ಚು ಬಯಲಾಯ್ತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಒಳಗಣ ಮರ
ಒಳಗಣ ಮರ
March 12, 2022
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
Copyright © 2026 Bayalu