Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ಸಿಕ್ಕೀತೆ?
Share:
Poems March 9, 2023 ಜ್ಯೋತಿಲಿಂಗಪ್ಪ

ಬೆಳಕು ಸಿಕ್ಕೀತೆ?

ಈಗ
ನೀನು ಮರೆವು
ನಾನು
ಇರುವೆ ನಾ..

ಹೇಳ
ಬಾರದು ಕೇಳ
ಬಾರದು

ಬಾಳೆ
ಹಣ್ಣಾಗಿ ಈಗಷ್ಟೇ
ಬಾಗಿದೆ

ಏನೇ ಹೇಳಿ
ಕಾಣುವುದೆಲ್ಲಾ ಸತ್ಯವೇ
ಅಲ್ಲಾ
ಏನೂ ಆಗಬಹುದು

ಆಕಾಶ ಮೈದೆರೆದರೆ ಬಯಲು ಕಾಣುವುದು.

*** ***

ಕಣ್ಣಳತೆಗೆ ಸಿಕ್ಕ ಬೆಳಕು
ಕಂಡೆ
ಕಣ್ಣಳತೆಗೆ ಸಿಗದು ಬೆಳಕು
ಕಂಡೆ
ಕಂಡೆ ಕಂಡೆ ಕಣ್ಣಳತೆಯ
ಕಂಡೆ
ಕಣ್ಣ ಒಳಗಣ ಸಿಕ್ಕು
ತಂತಿ ಹರಿದ ತಂಬೂರಿ

ದೃಷ್ಟಿಯ ಮರೆವೆ ಕಣ್ಣಿಗೆ ಕತ್ತಲು
ಕಣ್ಣೇ ಬೆಳಗಿದರೆ ದೃಷ್ಟಿ ಮರೆ.

Previous post ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
Next post ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…

Related Posts

ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...
ನಾನು… ನನ್ನದು
Share:
Poems

ನಾನು… ನನ್ನದು

July 4, 2021 ಜ್ಯೋತಿಲಿಂಗಪ್ಪ
ಅಪ್ಪ ತನ್ನೆಲ್ಲಾ ಆಸೆಗಳ ಸಾಕಿಕೊಂಡೇ ಮಗನ ಬೆಳೆಸಿದ ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ ಮಗನ ಸಾಕಿದ ಅಪ್ಪನ ಸಾವಿನ ನೆರಳು ಮಗನನು ಮುಟ್ಟದೇ… ಈ ಕತ್ತಲಲಿ ಒಬ್ಬನೇ ಹೋಗುವಾಗ...

Comments 3

  1. Savitha Bannur
    Mar 12, 2023 Reply

    ಆಕಾಶ ಮೈದೆರೆದರೆ ಬಯಲು ಕಾಣಬಹುದು!- ಬೆಡಗಿನ ವಚನದಂತಿರುವ ಕವನದ ಸಾಲು ಗಮನ ಸೆಳೆದು ವಿಚಾರಕ್ಕೆ ಹಚ್ಚುತ್ತದೆ.

  2. ಶಿವಕುಮಾರ್ ಎಲ್
    Mar 12, 2023 Reply

    ಕಾಣುವುದೆಲ್ಲಾ ಸತ್ಯವಲ್ಲಾ ಎನ್ನುತ್ತಾರೆ, ಕಂಡದ್ದೆಲ್ಲಾ ಸುಳ್ಳೆಂದರೆ ಬಾಳುವುದು ಹೇಗೆ? ನಿಜ ಯಾವುದು, ಮಾಯೆ ಯಾವುದು?

  3. ಪೆರೂರು ಜಾರು, ಉಡುಪಿ
    Mar 12, 2023 Reply

    ಆಗಸ ಭೂಮಿ ತುದಿಯಲ್ಲಿ ಒಂದಾದಂತೆ ಕಂಡುದು ಭ್ರಮೆ
    ತುದಿಗಳಿಲ್ಲಾ ಎಂಬ ಅರಿವು ನಿಚ್ಚಳವಾದಾಗ
    ತುದಿ ಎಳೆವವರು ಹೆಚ್ಚಾಗಿ ಹುಚ್ಚು ಬಯಲಾಯ್ತು.

Leave a Reply to ಶಿವಕುಮಾರ್ ಎಲ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಕಣ್ಣ ದೀಪ
ಕಣ್ಣ ದೀಪ
September 7, 2021
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
Copyright © 2025 Bayalu