Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಿಂಬ-ಪ್ರತಿಬಿಂಬ
Share:
Poems February 5, 2020 ಜ್ಯೋತಿಲಿಂಗಪ್ಪ

ಬಿಂಬ-ಪ್ರತಿಬಿಂಬ

ನೀನು
ಅಲ್ಲಿ ಉಂಟೆಂದು
ನಾನು
ಇಲ್ಲಿ ತೆವಳಿ ತೆವಳಿ ಬಳಲಿದೆ
ನೀನು ಎಲ್ಲಿರುವೆ
ಎಂಬುದು ನನ್ನ ಕಣ್ಣರಿವು
ಎಂಬುದ
ನಾನಲ್ಲದೆ ನೀನರಿದೆಯಾ ಹೇಳೇ
ಅಕ್ಕಾ
ಬೆಳಕ ತಿಂದಲ್ಲದೆ ಕನ್ನಡಿಯಲಿ ಉದಯಿಸದು ಬಿಂಬ
ಅರಿದ ಅರಿವನು ಉಪಮಿಸಬಾರದು

ತನ್ನರಿವ ತಾನುಣದೆ ಅನ್ಯರಿಗೆ
ಉಣಬಡಿಸುವ ಕೇಡು ನನದಲ್ಲ

ತನ್ನರಿವ ತಾನರಿಯದಾ ಕತ್ತಲು
ಇಳಿದು ಬಾರದಾ ಅರಿವು ತಾನರಿಯದೆ

ಒಳಗಣ ಜ್ಯೋತಿಯೂ
ಹೊರಗಣ ಕತ್ತಲೂ ಸಮನಿಸವು.

****************

ಆ ಮರದ ಕಾಯಲಿ ನೀರು
ತುಂಬಿದೆ ಹೇಗೆಂಬುದ ಎಚ್ಚರದಲಿ
ಹೇಳು ಪುರಾಣ ಕಟ್ಟಿಡು

ಅರಿಯುವ ಅರಿವ ಕಿತ್ತಿಡಲಾರೆ
ಒಣಹುಲ್ಲಿಗೆ ಬೆಂಕಿ ಇಟ್ಟು
ಹಸಿ ಹುಲ್ಲಲಿ ನಂದಿಸದಿರು

ನನ್ನ ಬಿಂಬ ನಿನ್ನಲಿ ಮೂಡದಿರೆ
ನಿನ್ನ ಕನ್ನಡಿ ಎಂಬುವವರು
ಯಾರೇ ಅಕ್ಕಾ
ನಾನಲ್ಲವೇ ನಿನ್ನ ಬಿಂಬ

ಇರಲಿ ಈಗ ಹೇಳು
ಲೌಕಿಕ ಪಾರಮಾರ್ಥಿಕ
ಜ್ಞಾನ ಕರ್ಮ
ಯಾವುದು

ನನ್ನ ನೆರಳು ನನಗಂಟದು
ಕಣ್ಣ ಮುಚ್ಚದು ಕನ್ನಡಿ ಬಿಂಬ
ಕಣ್ಣ ಮುಚ್ಚಿದರೆ ಕಾಣದು ಬಿಂಬ

ನನ್ನ ಹುಟ್ಟಿನೊಂದಿದೆ ಈ ಜೀನ್ಸ್
ನಕ್ಷತ್ರ ಸುಡುವ ಕಣ್ಣ ಹೊಳಪು.

Previous post ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
Next post ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 2

  1. Geetha Jayraj
    Feb 6, 2020 Reply

    ಒಳಗಣ ಜ್ಯೋತಿಯೂ, ಹೊರಗಣ ಕತ್ತಲು ಸಮನಿಸವು! ಆಹಾ!!

  2. ಕವಿತಾ ಲಕ್ಷ್ಮೇಶ್ವರ
    Feb 9, 2020 Reply

    ಮತ್ತೆ ಕವನಗಳು ಬಯಲಿನಲ್ಲಿ ಶುರುವಾಗಿದ್ದು ತುಂಬಾ ಖುಷಿಯಾಯಿತು. ಇಲ್ಲಿಯ ಕವನಗಳು ವಿಶಿಷ್ಟವಾಗಿರುತ್ತವೆ. ಹೊಸ ದಿಕ್ಕಿನತ್ತ ಬೊಟ್ಟು ಮಾಡುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಅಂದು-ಇಂದು
ಅಂದು-ಇಂದು
December 8, 2021
Copyright © 2026 Bayalu