Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬರಿದಾಗುವ ಬೆರಗು
Share:
Poems February 6, 2025 ಜಬೀವುಲ್ಲಾ ಎಂ.ಅಸದ್

ಬರಿದಾಗುವ ಬೆರಗು

ನಿಂತಲ್ಲೇ ಬಯಲು
ಕೊನೆಗೊಳ್ಳದು ಗೆಳೆಯ
ನಡೆಯಬೇಕು ನೀನೇ ಖುದ್ದು
ಭವದ ಬೇಲಿಗಳ ದಾಟುತ್ತ
ಸಾವಿರ ಹೆಜ್ಜೆಗಳ ಮಿಡಿದು
ಈ ಸಮಯ

ಜಗ ಹುಚ್ಚನೆಂದರೂ ಸರಿಯೇ
ಹತ್ತು ಮುಳ್ಳುಗಳ ಮಧ್ಯೆ
ಹೂವೊಂದು ಬಿರಿವಂತೆ
ನೂರು ಕಷ್ಟಗಳ ನಡುವೆ
ನಲುಗದೆ ನಗಬೇಕು ಹಾಗೆ!

ಕಣ್ ಹಾಯಿಸಿದಷ್ಟೇ
ನೆಲ, ಕಡಲು, ಆಗಸ ಎಲ್ಲಾ
ಕಣ್ಣಿನಿಂದಾಚೆಗೆ ಕಾಣಬೇಕು
ಕಂಡುಕೊಳ್ಳಬೇಕು
ಕರ ಚಾಚಬೇಕು
ಕರೆತರಬೇಕು
ಅಸಾಧ್ಯತೆಯಲ್ಲಿಯೇ
ಸಾಧ್ಯತೆ ಅವಿತಿದೆ
ಸಾಧಿಬೇಕಷ್ಟೆ ಗೆಳೆಯ

ಇರದ ದಾರಿಗಳ ಒಮ್ಮೆ ಶೋಧಿಸಿ ನೋಡು
‘ಇಲ್ಲಿ ಮೊದಲು ಏನೂ ಇರಲಿಲ್ಲ’
ಎಂದು ತಿಳಿಯುವುದು
ಸಿಕ್ಕದ್ದು ಕಳೆದು
ಎಲ್ಲವೂ ನಶ್ವರ ಎಂಬ ಸತ್ಯ ಬೆಳಗುವುದು

ಗುರಿಗೂ ಗಮ್ಯಕೂ
ಅದೇಷ್ಟು ದೂರ
ಮುಗಿಲಿಗೂ ಕಡಲಿಗೂ ಇದ್ದಷ್ಟೇ ಅಂತರ
ಅಂಗೈಗೆ ಸಿಕ್ಕಂತೆ ಸಿಕ್ಕಿ
ಮರಳ ಕಣಗಳಂತೆ ಸೋರಿ
ಬರಿದಾಗುವ ಬೆರಗು
ಈ ಬದುಕ ವೈಖರಿ.

Previous post ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
Next post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…

Related Posts

ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Comments 2

  1. ದಿನೇಶ್ ಕೆ.ಪಿ
    Feb 18, 2025 Reply

    ಬೆರಗೇ ಬದಲಾಗುವಾಗ ಉಳಿಯೋದೇನಿದೆ…. ಬರೀ ಶೂನ್ಯ 😒

  2. ಕಾಳಿದಾಸ ಲಮಾಣಿ
    Feb 22, 2025 Reply

    ಬಣ್ಣನೆ ಬೇಕೇ ಬಯಲಿಗೆ, ಬರಿದಾಗುವ ಚೆಲುವಿಗೆ… ಆದರೂ ಜೀವನ ಶೂನ್ಯ ಮಾತ್ರ ಅಲ್ಲಾ ಅಣ್ಣಾ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
Copyright © 2025 Bayalu