Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸನ್ಯಾಸ ದೀಕ್ಷೆ
Share:
Poems June 12, 2025 ಜಬೀವುಲ್ಲಾ ಎಂ.ಅಸದ್

ಸನ್ಯಾಸ ದೀಕ್ಷೆ

ತುಂಬಿದ ಅಹಂ- ಸ್ವಾರ್ಥದ ಚೀಲವನು
ಬಯಲಿಗೊಯ್ದು ಸುರಿದು
ಸ್ವತಃ ಖಾಲಿಯಾಗಿ
ಸಂಭ್ರಮಿಸುವುದು – ಸನ್ಯಾಸ

ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ
ಬೇರು ಬಿಟ್ಟು ಬಿಸಿಲು ಗಾಳಿಗೆ ತೂಗಿ
ನೆರಳು, ಫಲ ನೀಡಿ
ಜೀವ ಸಂಕುಲಕೆ ನೆರವಾಗುವುದು – ಸನ್ಯಾಸ

ಇರುವುದನ್ನೆಲ್ಲ ಕಳೆದುಕೊಂಡು
ಪಡೆದದ್ದೆಲ್ಲವ ಹಂಚಿ ಬರಡಾಗಿ
ಬರಿಗೈಗಳ ಕಂಡು
ತಾನೇ ಧನ್ಯಗೊಳ್ಳುವುದು – ಸನ್ಯಾಸ

ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು,
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು – ಸನ್ಯಾಸ

ಸೂರ್ಯನೊಂದಿಗೆ ಎದ್ದು
ಚಂದಿರನೊಟ್ಟಿಗೆ ಆಕಳಿಸಿ
ಕಾಲದೊಂದಿಗೆ ಕೂಡಿ
ಲೋಕದ ಹೊಲಸು ಗುಡಿಸುವುದು – ಸನ್ಯಾಸ

ಹಕ್ಕಿಯ ರೆಕ್ಕೆ ಸವರಿ, ಚಿಗುರುವ ಎಲೆಗೆ ನಮಿಸಿ
ಅರಳುವ ಹೂವಿಗೆ ಮುತ್ತಿಟ್ಟು
ಮಗುವಂತೆ ಮಕ್ಕಳೊಟ್ಟಿಗೆ
ಆಡಿ ದಣಿಯುವುದು – ಸನ್ಯಾಸ!

ಬಿದಿರ ಮೆಳೆಯ ನಡುವೆ ಕೂತು
ಜಗದ ಸಂತೆಯ ಮರೆತು
ಕೊಳಲ ದೇಹಕೆ ಉಸಿರ ಸುರಿದು
ಪ್ರಕೃತಿಗೆ ಕೃತಜ್ಞನಾಗುವುದು – ಸನ್ಯಾಸ!

Previous post ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
Next post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು

Related Posts

ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Comments 2

  1. Pro. Mallesh K.S, Mysuru
    Jun 12, 2025 Reply

    ಸನ್ಯಾಸ ಕವನದ ಹೂರಣ ಚೆನ್ನಾಗಿದೆ. ಆದರೆ ಗದ್ಯ ಪದ್ಯದ ಮಿಶ್ರಣದಂತಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಜಬೀವುಲ್ಲಾ ಎಂ ಅಸದರವರ ಸನ್ಯಾಸ ದೀಕ್ಷೆ ಕವನ 👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಅಲ್ಲಮಪ್ರಭುದೇವರ ಸ್ವರವಚನಗಳು
ಅಲ್ಲಮಪ್ರಭುದೇವರ ಸ್ವರವಚನಗಳು
December 9, 2025
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಅಚಲ ಪರಂಪರಾ ಪ್ರಸ್ಥಾನ
ಅಚಲ ಪರಂಪರಾ ಪ್ರಸ್ಥಾನ
September 6, 2026
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
Copyright © 2026 Bayalu