Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸನ್ಯಾಸ ದೀಕ್ಷೆ
Share:
Poems June 12, 2025 ಜಬೀವುಲ್ಲಾ ಎಂ.ಅಸದ್

ಸನ್ಯಾಸ ದೀಕ್ಷೆ

ತುಂಬಿದ ಅಹಂ- ಸ್ವಾರ್ಥದ ಚೀಲವನು
ಬಯಲಿಗೊಯ್ದು ಸುರಿದು
ಸ್ವತಃ ಖಾಲಿಯಾಗಿ
ಸಂಭ್ರಮಿಸುವುದು – ಸನ್ಯಾಸ

ಒಂದೆಡೆ ನೆಲೆ ನಿಂತು ಮಹಾವೃಕ್ಷವಾಗಿ
ಬೇರು ಬಿಟ್ಟು ಬಿಸಿಲು ಗಾಳಿಗೆ ತೂಗಿ
ನೆರಳು, ಫಲ ನೀಡಿ
ಜೀವ ಸಂಕುಲಕೆ ನೆರವಾಗುವುದು – ಸನ್ಯಾಸ

ಇರುವುದನ್ನೆಲ್ಲ ಕಳೆದುಕೊಂಡು
ಪಡೆದದ್ದೆಲ್ಲವ ಹಂಚಿ ಬರಡಾಗಿ
ಬರಿಗೈಗಳ ಕಂಡು
ತಾನೇ ಧನ್ಯಗೊಳ್ಳುವುದು – ಸನ್ಯಾಸ

ಹಸಿವನ್ನು ನುಂಗಿ, ತೃಷೆಯನ್ನು ಮೀರಿ
ಧ್ಯಾನದಿ ಮುಗುಳ್ನಕ್ಕು,
ಕೈಗೆ ಸಿಕ್ಕ ಅರಿವೆ ಸುತ್ತಿ
ಬಯಲಾಗುವುದು – ಸನ್ಯಾಸ

ಸೂರ್ಯನೊಂದಿಗೆ ಎದ್ದು
ಚಂದಿರನೊಟ್ಟಿಗೆ ಆಕಳಿಸಿ
ಕಾಲದೊಂದಿಗೆ ಕೂಡಿ
ಲೋಕದ ಹೊಲಸು ಗುಡಿಸುವುದು – ಸನ್ಯಾಸ

ಹಕ್ಕಿಯ ರೆಕ್ಕೆ ಸವರಿ, ಚಿಗುರುವ ಎಲೆಗೆ ನಮಿಸಿ
ಅರಳುವ ಹೂವಿಗೆ ಮುತ್ತಿಟ್ಟು
ಮಗುವಂತೆ ಮಕ್ಕಳೊಟ್ಟಿಗೆ
ಆಡಿ ದಣಿಯುವುದು – ಸನ್ಯಾಸ!

ಬಿದಿರ ಮೆಳೆಯ ನಡುವೆ ಕೂತು
ಜಗದ ಸಂತೆಯ ಮರೆತು
ಕೊಳಲ ದೇಹಕೆ ಉಸಿರ ಸುರಿದು
ಪ್ರಕೃತಿಗೆ ಕೃತಜ್ಞನಾಗುವುದು – ಸನ್ಯಾಸ!

Previous post ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
Next post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು

Related Posts

ಸೋತ ಅಂಗೈಗಳಿಗಂಟಿ…
Share:
Poems

ಸೋತ ಅಂಗೈಗಳಿಗಂಟಿ…

October 19, 2025 ಜಬೀವುಲ್ಲಾ ಎಂ.ಅಸದ್
ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...
ಸಂತೆಯ ಸಂತ
Share:
Poems

ಸಂತೆಯ ಸಂತ

September 7, 2020 ಜ್ಯೋತಿಲಿಂಗಪ್ಪ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ ಕಣ್ಣಿಗೆ ಕರುಳು ಇರಬಾರದು ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ ಈ ಮೂರು ಮೊಳದ...

Comments 2

  1. Pro. Mallesh K.S, Mysuru
    Jun 12, 2025 Reply

    ಸನ್ಯಾಸ ಕವನದ ಹೂರಣ ಚೆನ್ನಾಗಿದೆ. ಆದರೆ ಗದ್ಯ ಪದ್ಯದ ಮಿಶ್ರಣದಂತಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಜಬೀವುಲ್ಲಾ ಎಂ ಅಸದರವರ ಸನ್ಯಾಸ ದೀಕ್ಷೆ ಕವನ 👌👌

Leave a Reply to ಶೋಭಾದೇವಿ, ಧಾರವಾಡ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಭೃತ್ಯಾಚಾರ
ಭೃತ್ಯಾಚಾರ
June 5, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
Copyright © 2025 Bayalu