Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಡೆಯ ಎಡೆ…
Share:
Poems April 5, 2026 ಕೆ.ಆರ್ ಮಂಗಳಾ

ನಡೆಯ ಎಡೆ…

ಅತ್ತಿದ್ದು ನಕ್ಕಿದ್ದು
ಒಳಗೊಳಗೇ ಬಿಕ್ಕಿದ್ದು
ಮತ್ತೆ ಜಂಜಡಕೆ ಬೀಳಲಾರೆ ಇನ್ನು
ಎಲ್ಲ ಕಲಿಸುವ ಬದುಕು
ಎಲ್ಲ ತಿಳಿಸುವ ಗುರುವು
ದಾಟಬಲ್ಲೆನು ಈಜಿ ನೂರು ಕಡಲು

ಸುಖ-ದುಃಖ ಬರಹವನು
ಬರೆವ ಕೈಗೆ ನಮಿಸಿ
ತಪ್ಪುಸರಿಗಳ ಲೆಕ್ಕ ಒಪ್ಪಿಸಿರುವೆ
ಸಂಚಯದ ಸಂಚಿಯನು
ಕೊಡವಿ ಖಾಲಿ ಮಾಡಿ
ಅಳಿದುಳಿದುದೆಲ್ಲಾ ಹುರಿದುಬಿಡುವೆ

ಹಿಂದಣದ ಹೊರೆಯಿಲ್ಲ
ಮುಂದಣದ ಹಂಗಿಲ್ಲ
ಸಮತೆಯ ಸಿರಿಯು ಕಂಗೊಳಿಸಲಿ
ಹೊಸ ಹಸಿರು ಹೊಸ ಉಸಿರು
ಹೊಸ ಕಂಪು ಹೊಸ ತಂಪು
ನಡೆಯ ಎಡೆಯಿರಲಿ ನಿತ್ಯಸತ್ಯತೆಗೆ

ಚಳಿಗಾಳಿ ಮಳೆ ಬಿಸಿಲು
ನರನರಗಳೊಳಗಿಳಿದು
ತೂಗಿ ತೊನೆದಿಹುದು ಜೀವತಾನ
ಹಗಲಿರುಳ ತೆರೆಗಳಲಿ
ಋತುಮಾಸ ಕವಲಿನಲಿ
ಹೊರಳಿ ಸಾಗಿಹುದು ಬಾಳಯಾನ

ಆ ಮುಗಿಲು ಬಿದ್ದಾಗ
ಹಸುರೆದ್ದು ಬಂದಾಗ
ಸುಂದರವು ಸೃಷ್ಟಿಯೆಲ್ಲಾ
ಅಂತರವು ಅಳಿದಾಗ
ನಾ ಕರಗಿ ಹೋದಾಗ
ಅಮೃತವು ಮರ್ತ್ಯವೆಲ್ಲಾ…

Previous post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...
ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಹುಡುಕಾಟ
ಹುಡುಕಾಟ
January 15, 2026
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
Copyright © 2026 Bayalu