Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುರುಹೇ ಬಯಲು
Share:
Poems February 16, 2026 ಜ್ಯೋತಿಲಿಂಗಪ್ಪ

ಕುರುಹೇ ಬಯಲು

ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು

ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು

ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ
ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ

ಕೆರೆಯ ದಡದ ನೀರ ಅಂಚಿನಲಿ ಕಾಯುವ ಹಕ್ಕಿ
ಹಸಿವು ಇಲ್ಲದೆ ಹಾರೀತೇ…

ಕಂಬದ ಮೇಲೆ ಕುಳಿತಿದೆ ಹದ್ದು

ಕಣ್ಣ ಹಸಿವಿಗೆ ಕಂಡ ಕಂಡ ಕುರುಹುಗಳೆಲ್ಲಾ ದೇವರೇ
ತೀಡಬಲ್ಲೆನೇ ಈ ಕುರುಹುವಿನ ಡೊಂಕು

ಕಾಯದ ಹಸಿವಿಗೆ ಅನ್ನವೇ ಕುರುಹು
ಕಣ್ಣ ಹಸಿವಿಗೆ ಈ ದೇವರೇ ಅನ್ನ

ಈ ನೆಲಕಂಟದ ಬಯಲಿಗೆ ಕುರುಹೇ …
ಈ ಬಯಲಿಗಂಟಿರುವ ನೆಲಕೆ ಕುರುಹೇ ಬಯಲು.

Previous post ಗಜಲ್…
ಗಜಲ್…
Next post ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ

Related Posts

ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...

Comments 3

  1. ಭಾಗ್ಯಾ ವಿಜಯ್
    Feb 19, 2026 Reply

    ಕವನದ ಒಂದೊಂದು ಸಾಲೂ ಒಂದೊಂದು quotes ಇದ್ದ ಹಾಗಿವೆ. ಓದಲು ಏನೋ ಸೊಗಸು, ಅರ್ಥ ಬಲು ಆಳ.

    • GH JYOTILINGAPPA
      Feb 24, 2026 Reply

      ನಿಮ್ಮ ಓದಿಗೆ ಧನ್ಯವಾದಗಳು

  2. ಸುರೇಶ್ ಬಾಬು
    Feb 24, 2026 Reply

    ಕುರುಹನ್ನು, ಅರುಹನ್ನು ಎರಡನ್ನೂ ಬಯಲಾಗಿಸಿದ ಶರಣರ ಸಾರ ಈ ಕವನದಲ್ಲಿದೆ.🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಶರಣ- ಎಂದರೆ…
ಶರಣ- ಎಂದರೆ…
March 6, 2020
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
Copyright © 2026 Bayalu