Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುತ್ತಿ ಸುಳಿವ ಆಟ
Share:
Poems May 6, 2021 ಕೆ.ಆರ್ ಮಂಗಳಾ

ಸುತ್ತಿ ಸುಳಿವ ಆಟ

ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ
ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ
ಜೇನಿನಂಥ ಮಾತುಗಳ ನಂಬಿಬಿಟ್ಟೆ
ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ
ಗಿರಿಗಿಟ್ಲೆ ಆಟದಲ್ಲಿ ಸಿಕ್ಕಿಕೊಂಡೆ
ಸುತ್ತ ತಿರುಗೋ ಲೋಕದಾಗೆ ಕಳೆದುಹೋದೆ

ಮಾತಿನಲ್ಲೂ ಅವನೇ ಮೇಲು
ಮೌನದಲ್ಲೂ ನನದೇ ಸೋಲು
ಬೈಗು-ಬೆಳಗು ಎರಡರಲ್ಲೂ ನಿಲ್ಲದಾಯ್ತು ಜೀತ
ರೆಕ್ಕೆ ಮರೆತ ಹಕ್ಕಿಯಾದೆ
ಬಾನು ತೊರೆದು ಬಂಧಿಯಾದೆ

ಸ್ನೇಹವೆಲ್ಲಿ? ಪ್ರೀತಿಯೆಲ್ಲಿ?
ನಕ್ಕು ನಲಿದ ಕಾಲವೆಲ್ಲಿ?
ನಿಜವು ಎಲ್ಲಿದೆ ಬದುಕಿನಲ್ಲಿ?

ಇರುವುದ ಮರೆತು ಇಲ್ಲದ್ದು ಕಟ್ಟಿಕೊಂಡು
ಹೈರಾಣವಾಯ್ತು ಜೀವ
ಹೂವಿನ ಹಂಗು ತೊರೆಯದ ಹೊರತು
ಉಸಿರ ಪರಿಮಳ ತಿಳಿವುದೇ?
ಅಕ್ಕ ಹಾಕಿದ ಪ್ರಶ್ನೆಯಲ್ಲಿ
ಗುರುವು ತೋರಿದ ಹಾದಿ ಕಂಡೆ
ನನ್ನ ನಾನರಿವುದಕೆ ಕಿಂಡಿಯೊಂದು ಇಲ್ಲಿದೆ.

Previous post ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
Next post ಭೃತ್ಯಾಚಾರ
ಭೃತ್ಯಾಚಾರ

Related Posts

ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...
ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...

Comments 2

  1. Jyothilingappa
    May 7, 2021 Reply

    ಹೂವಿನ ಹಂಗು ತೊರೆಯುವ ಸಾಹಸದ ‘ಸುತ್ತಿ ಸುಳಿವ ಆಟ’… ಓದಲು ಸರಳ… ತಿಳಿಯಲು ಸರಳವೇ… ಅಭಿನಂದನೆಗಳು.💐💐

  2. Veeresh
    Sep 15, 2024 Reply

    ಮಾತಿನಲ್ಲೂ ಅವನೇ ಮೇಲು ಮೌನದಲ್ಲೂ ನನದೇ ಸೋಲು
    👌🏻

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
Copyright © 2025 Bayalu