Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುತ್ತಿ ಸುಳಿವ ಆಟ
Share:
Poems May 6, 2021 ಕೆ.ಆರ್ ಮಂಗಳಾ

ಸುತ್ತಿ ಸುಳಿವ ಆಟ

ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ
ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ
ಜೇನಿನಂಥ ಮಾತುಗಳ ನಂಬಿಬಿಟ್ಟೆ
ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ
ಗಿರಿಗಿಟ್ಲೆ ಆಟದಲ್ಲಿ ಸಿಕ್ಕಿಕೊಂಡೆ
ಸುತ್ತ ತಿರುಗೋ ಲೋಕದಾಗೆ ಕಳೆದುಹೋದೆ

ಮಾತಿನಲ್ಲೂ ಅವನೇ ಮೇಲು
ಮೌನದಲ್ಲೂ ನನದೇ ಸೋಲು
ಬೈಗು-ಬೆಳಗು ಎರಡರಲ್ಲೂ ನಿಲ್ಲದಾಯ್ತು ಜೀತ
ರೆಕ್ಕೆ ಮರೆತ ಹಕ್ಕಿಯಾದೆ
ಬಾನು ತೊರೆದು ಬಂಧಿಯಾದೆ

ಸ್ನೇಹವೆಲ್ಲಿ? ಪ್ರೀತಿಯೆಲ್ಲಿ?
ನಕ್ಕು ನಲಿದ ಕಾಲವೆಲ್ಲಿ?
ನಿಜವು ಎಲ್ಲಿದೆ ಬದುಕಿನಲ್ಲಿ?

ಇರುವುದ ಮರೆತು ಇಲ್ಲದ್ದು ಕಟ್ಟಿಕೊಂಡು
ಹೈರಾಣವಾಯ್ತು ಜೀವ
ಹೂವಿನ ಹಂಗು ತೊರೆಯದ ಹೊರತು
ಉಸಿರ ಪರಿಮಳ ತಿಳಿವುದೇ?
ಅಕ್ಕ ಹಾಕಿದ ಪ್ರಶ್ನೆಯಲ್ಲಿ
ಗುರುವು ತೋರಿದ ಹಾದಿ ಕಂಡೆ
ನನ್ನ ನಾನರಿವುದಕೆ ಕಿಂಡಿಯೊಂದು ಇಲ್ಲಿದೆ.

Previous post ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
Next post ಭೃತ್ಯಾಚಾರ
ಭೃತ್ಯಾಚಾರ

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...

Comments 2

  1. Jyothilingappa
    May 7, 2021 Reply

    ಹೂವಿನ ಹಂಗು ತೊರೆಯುವ ಸಾಹಸದ ‘ಸುತ್ತಿ ಸುಳಿವ ಆಟ’… ಓದಲು ಸರಳ… ತಿಳಿಯಲು ಸರಳವೇ… ಅಭಿನಂದನೆಗಳು.💐💐

  2. Veeresh
    Sep 15, 2024 Reply

    ಮಾತಿನಲ್ಲೂ ಅವನೇ ಮೇಲು ಮೌನದಲ್ಲೂ ನನದೇ ಸೋಲು
    👌🏻

Leave a Reply to Jyothilingappa Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
Copyright © 2025 Bayalu