Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುತ್ತಿ ಸುಳಿವ ಆಟ
Share:
Poems May 6, 2021 ಕೆ.ಆರ್ ಮಂಗಳಾ

ಸುತ್ತಿ ಸುಳಿವ ಆಟ

ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ
ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ
ಜೇನಿನಂಥ ಮಾತುಗಳ ನಂಬಿಬಿಟ್ಟೆ
ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ
ಗಿರಿಗಿಟ್ಲೆ ಆಟದಲ್ಲಿ ಸಿಕ್ಕಿಕೊಂಡೆ
ಸುತ್ತ ತಿರುಗೋ ಲೋಕದಾಗೆ ಕಳೆದುಹೋದೆ

ಮಾತಿನಲ್ಲೂ ಅವನೇ ಮೇಲು
ಮೌನದಲ್ಲೂ ನನದೇ ಸೋಲು
ಬೈಗು-ಬೆಳಗು ಎರಡರಲ್ಲೂ ನಿಲ್ಲದಾಯ್ತು ಜೀತ
ರೆಕ್ಕೆ ಮರೆತ ಹಕ್ಕಿಯಾದೆ
ಬಾನು ತೊರೆದು ಬಂಧಿಯಾದೆ

ಸ್ನೇಹವೆಲ್ಲಿ? ಪ್ರೀತಿಯೆಲ್ಲಿ?
ನಕ್ಕು ನಲಿದ ಕಾಲವೆಲ್ಲಿ?
ನಿಜವು ಎಲ್ಲಿದೆ ಬದುಕಿನಲ್ಲಿ?

ಇರುವುದ ಮರೆತು ಇಲ್ಲದ್ದು ಕಟ್ಟಿಕೊಂಡು
ಹೈರಾಣವಾಯ್ತು ಜೀವ
ಹೂವಿನ ಹಂಗು ತೊರೆಯದ ಹೊರತು
ಉಸಿರ ಪರಿಮಳ ತಿಳಿವುದೇ?
ಅಕ್ಕ ಹಾಕಿದ ಪ್ರಶ್ನೆಯಲ್ಲಿ
ಗುರುವು ತೋರಿದ ಹಾದಿ ಕಂಡೆ
ನನ್ನ ನಾನರಿವುದಕೆ ಕಿಂಡಿಯೊಂದು ಇಲ್ಲಿದೆ.

Previous post ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
Next post ಭೃತ್ಯಾಚಾರ
ಭೃತ್ಯಾಚಾರ

Related Posts

ಅರಿವಿನ ಬಾಗಿಲು…
Share:
Poems

ಅರಿವಿನ ಬಾಗಿಲು…

October 13, 2022 ಕೆ.ಆರ್ ಮಂಗಳಾ
ಹುಚ್ಚು ಮನಸಿನ ಕುಣಿತ ದಿಕ್ಕುದಿಕ್ಕಿಗೂ ಸೆಳೆತ ಅಡಿಗಡಿಗು ಎಡತಾಕುವ ವಿಷಯಗಳ ಡೈನಮೈಟು ಕಾಲು ಎಚ್ಚರ ತಪ್ಪದಂತೆ ಜಾಣ ನಡಿಗೆಯ ಹೇಳಿಕೊಡುತಾನೆ ಹುಟ್ಟು-ಸಾವಿನ ಚಕ್ರದ ಮರ್ಮ...
ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...

Comments 2

  1. Jyothilingappa
    May 7, 2021 Reply

    ಹೂವಿನ ಹಂಗು ತೊರೆಯುವ ಸಾಹಸದ ‘ಸುತ್ತಿ ಸುಳಿವ ಆಟ’… ಓದಲು ಸರಳ… ತಿಳಿಯಲು ಸರಳವೇ… ಅಭಿನಂದನೆಗಳು.💐💐

  2. Veeresh
    Sep 15, 2024 Reply

    ಮಾತಿನಲ್ಲೂ ಅವನೇ ಮೇಲು ಮೌನದಲ್ಲೂ ನನದೇ ಸೋಲು
    👌🏻

Leave a Reply to Veeresh Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
Copyright © 2025 Bayalu